ಕೆ.ಆರ್.ಪುರ: ಹೊರ ರಾಜ್ಯಗಳಿಂದ ನಗರಕ್ಕೆ ಬಂದು ನೆಲಸಿರುವ ಪ್ರತಿಯೊಬ್ಬರೂ ಕನ್ನಡ ಕಲಿಯುವ ಮೂಲಕ ಕನ್ನಡ ಭಾಷೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಶಾಸಕ ಬೈರತಿ ಬಸವರಾಜ ತಿಳಿಸಿದರು.
ಹೊರಮಾವು ವಾರ್ಡಿನ ಕ್ಯಾಲಸನಹಳ್ಳಿ ಸಮೀಪದ ಪೂರ್ವ ಪಾಮ್ ಬೀಚ್ ವಸತಿ ಸಮುಚ್ಚಯದಲ್ಲಿ ಝೇಂಕಾರ ತಂಡದ ವತಿಯಿಂದ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಪಾಲ್ಗೊಂಡು ಮಾತನಾಡಿದ ಅವರು, ನಗರದಲ್ಲಿ ನೆಲಸಿರುವ ಹೊರರಾಜ್ಯದವರು ವಸತಿ ಸಮುಚ್ಚಯದಲ್ಲಿ ಅದ್ಧೂರಿ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಯೋಜಿಸಿ ಹಬ್ಬದ ರೀತಿಯಲ್ಲಿ ಸಂಭ್ರಮ ಸಡಗರದಿಂದ ಅಚರಣೆ ಮಾಡುವ ಮೂಲಕ ಕನ್ನಡ ಭಾಷೆಗೆ ವಿಶೇಷ ಗೌರವ ನೀಡುತ್ತಿರುವುದು ಸಂತಸ ತಂದಿದೆ ಎಂದರು.
ವಸತಿ ಸಮುಚ್ಚಯದಲ್ಲಿ ನೆಲಸಿರುವ ಪ್ರತಿಯೊಬ್ಬರೂ ಕನ್ನಡ ಭಾಷೆ ಕಲಿಯಬೇಕು, ಕನ್ನಡ ಭಾಷೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಕನ್ನಡ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಹೇಳಿದರು.ಐದನೇ ಹಂತದ ಕಾವೇರಿ ನೀರಿನ ಸಂಪರ್ಕ ಕಾಮಗಾರಿ ಪ್ರಗತಿಯಲ್ಲಿದೆ ಕಾಮಗಾರಿ ಪೂರ್ಣಗೊಂಡ ನಂತರ ಅದಷ್ಟೂ ಬೇಗ ಮನೆ ಮನೆಗೂ ಕಾವೇರಿ ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಪೂರ್ವ ಪಾಮ್ ಬೀಚ್ ಸಮುಚ್ಚಯದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಹಿಳೆಯರು ಕೆಂಪು ಮತ್ತು ಹಳದಿ ಉಡುಗೆಯಲ್ಲಿ ಮಿಂಚಿದರು, ತುಳುನಾಡಿನ ಹುಲಿವೇಷ,ಜನಪದ ಕಲೆ ಡೊಳ್ಳು ಕುಣಿತ, ಸಂಗೀತ ರಸಸಂಜೆ,ಲಗೂನ್ ಏರಿಯಾ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸಿಕೊಟ್ಟರು.
ಈ ಸಂಧರ್ಭದಲ್ಲಿ ಸಮಾಜಿಕ ಕಾರ್ಯಕರ್ತ ವಿಜಯಕುಮಾರ್ ಘನಶ್ಯಾಮ್, ಪೂರ್ವ ಫಾಮ್ ಬೀಚ್ ಕನ್ನಡ ಸಮಿತಿ ಸದಸ್ಯರು ನ ನಿವಾಸಿಗಳಾದ ವಿಜಯಕುಮಾರ್ ಘನಶ್ಯಾಮ್, ಕನ್ನಡ ಸಮಿತಿ ಅರುಣ್ ಶೆಟ್ಟಿ, ಕರ್ಣ ನಾಟೀಕರ್, ಪ್ರದೀಪ್, ಮಂಜುನಾಥ್, ವಿನಯ್, ದೀಪಕ್ ಬಂಗಾಡೆ, ಸೌಮ್ಯ ಇದ್ದರು.