ಮೇಲುಕೋಟೆ: ರಾಮಾನುಜರ ಕರ್ಮಭೂಮಿ ಕರ್ನಾಟಕದ ಮೇಲುಕೋಟೆ ಮತ್ತು ಅವತಾರ ಸ್ಥಳ ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಆಚಾರ್ಯರ 1009 ನೇ ಜಯಂತ್ಯತ್ಸವದ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯುತ್ತಿವೆ.
ತಿರುನಕ್ಷತ್ರಮಹೋತ್ಸವದ ಅಂಗವಾಗಿ ಗುರುವಾರ ಮೇಲುಕೋಟೆಯಲ್ಲಿ ರಾಮಾನು ಜರಿಗೆ ಬುಧವಾರ ಸೂರ್ಯಪ್ರಭಾ ವಾಹನ ಗುರುವಾರ ಚಂದ್ರಪ್ರಭಾವಾಹನೋತ್ಸವ ನಡೆದರೆ ಶ್ರೀಪೆರಂಬೂದರಿನ ಆದಿಕೇಶವಪೆರುಮಾಳ್ ಸನ್ನಿಧಿಯ ರಾಮಾನುಜರಿಗೆ ವ್ಯಾಳಿಯ ವಾಹನೋತ್ಸವ ನೆರವೇರಿತು. ಭಾರತದ ಎಲ್ಲಾ ಶ್ರೀವೈಷ್ಣವ ದೇವಾಲಯ ಗಳಲ್ಲಿ ರಾಮಾನುಜರ ಉತ್ಸವಗಳು ನಡೆದರೂ ಸಹ ಅವರ ಕರ್ಮಭೂಮಿಯಾದ ಮೇಲುಕೋಟೆ ಮತ್ತು ಅವತಾರ ಸ್ಥಳ ಶ್ರೀಪರಂಬೂದೂರಿನಲ್ಲಿ ನಡೆಯುವ ತಿರುನಕ್ಷತ್ರಮಹೋತ್ಸವಕ್ಕೆ ವಿಶೇಷ ಸ್ಥಾನವಿದೆ. ಕಳೆದ 13 ರಿಂದ ಆರಂಭವಾಗಿರುವ 10 ದಿನಗಳ ಕಾರ್ಯಕ್ರಮ 22ರಂದು ರಾಮಾನುಜಾಚಾರ್ಯರ ತಿರುನಕ್ಷತ್ರ ಮಹೋತ್ಸವದೊಂದಿಗೆ ಸಂಪನ್ನವಾಗಲಿದೆ. ಮೇಲುಕೋಟೆಯ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಪೇಶುಮ್ ರಾಮಾನುಜರಿಗೆ ಶನಿವಾರ ಬೆಳಿಗ್ಗೆ ತಮಿಳುನಾಡಿನ ಶ್ರೀಪೆರಂಬದೂರಿನ ರಾಮಾನುಜರ ಸನ್ನಿಧಿಯ ಮಾಲೆ ಮರ್ಯಾದೆಗಳು ಸಮರ್ಪಣೆಯಾಗಲಿದೆ. ರಾತ್ರಿ ಗೋವಿಂದರಾಜಮುಡಿ ಕಿರೀಟಧಾರಣಮಹೋತ್ಸವ ವೈಭವದಿಂದ ನಡೆಯಲಿದೆ.
ಚೆಲುವನಾರಾಯಣಸ್ವಾಮಿಗೆ ಕಳೆದ 15 ದಿನಗಳಿಂದ ನಡೆಯುತ್ತಿರುವ ಕೊಡೈತಿರುನಾಳ್ ಉತ್ಸವ ಅಮಾವಾಸ್ಯೆಯ ದಿನವಾದ ಇಂದು ಏ.17ರ ಶುಕ್ರವಾರ ಮುಕ್ತಾಯವಾಗಲಿದ್ದು ರಾತ್ರಿ ವೈಮಾಳಿಗೆ ಕೊಡೈತಿರುನಾಳ್ ನಡೆಯಲಿದೆ. ಚೆಲುವನಾರಾಯಣಸ್ವಾಮಿ ದೇವಾಲಯದ ವೈಮಾಳಿಗೆ ಅಂದರೆ ಮಹಡಿಯಮೇಲೆ ಉತ್ಸವ ನಡೆಯಲಿದ್ದು ಆದಿಶೇಷನಲ್ಲಿ ಕುಳಿತ ಶೈಲಿಯಲ್ಲಿ ಚೆಲುವನಾರಾಯಣಸ್ವಾಮಿ ದರ್ಶನ ನೀಡಲಿದ್ದು ಸರ್ಪನಡಿಗೆಯಲ್ಲಿ ಪಡಿಯೇತ್ತ ನಡೆಯುವುದು ಉತ್ಸವದ ವಿಶೇಷವಾಗಿದೆ ರಾಮಾನುಜಾಚಾರ್ಯರಿಗೆ ಐದನೇ ಉತ್ಸವದ ಅಂಗವಾಗಿ ರಾತ್ರಿ ಪುಷ್ಪಾಲಂಕೃತ ಬಂಗಾರದ ಪಲ್ಲಕ್ಕಿಯ ಉತ್ಸವ ಸಹ ನೆರವೇರಲಿದೆ.
ಮೇಲುಕೋಟೆಯಲ್ಲಿ ವೈಭವದ ಚಂದ್ರಪ್ರಭಾ ವಾಹನೋತ್ಸವ



