ಮುಳಬಾಗಿಲು: ನಿವೃತ್ತಿ ನೌಕರ ಸಂಘಕ್ಕೆ ನಿವೇಶನದ ಜೊತೆಗೆ ಶಾಸಕರ ಅನುದಾನದ ಎಲ್ಲಾ ಕಟ್ಟಡವನ್ನು ಸಹ ನಿರ್ಮಾಣ ಮಾಡಿಕೊಡಲಾಗುತ್ತದೆ ಎಂದು ಶಾಸಕ ಸಮೃದ್ಧಿ ಮಂಜುನಾಥ್ ತಿಳಿಸಿದರು.ನಗರದ ಯೋಗಿ ನಾರಾಯಣ ಕಲ್ಯಾಣ ಮಂಟಪದಲ್ಲಿ ನಿವೃತ್ತಿ ಸರ್ಕಾರಿ ನೌಕರರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ನಿವೃತ್ತಿ ನೌಕರರ ಸಮ್ಮೇಳನ ಉದ್ಘಾಟಿಸಿ ಮಾತನಾಡಿ. ಶಿವಮೊಗ್ಗದಲ್ಲಿ ನಿವೃತ್ತಿ ನೌಕರರ ದೊಡ್ಡ ಕ್ಲಬ್ ನೋಡಿದೆ ಮುಳಬಾಗಿಲು ತಾಲೂಕಿನಲ್ಲಿ ಇಂತಹದೊಂದು ಭವನವನ್ನು ನಿರ್ಮಾಣ ಮಾಡಿ ಮಾಡಬೇಕೆಂಬ ಕನಸು ಶೀಘ್ರದಲ್ಲಿ ನೆರವೇರಲಿದೆ. ನಿವೃತ್ತ ಜೀವನವನ್ನು ಸುಖಕರವಾಗಿ ಇರಲೆಂದು ಎಂದೆ ಪ್ರವಾಸವನ್ನು ಕಳಿಸಿಕೊಟ್ಟೆ ಉದಾಹರಣೆಗಳಿವೆ. ನನ್ನ ಈ ಅವಧಿಯ ಸಮಯದಲ್ಲಿ ನಿವೇಶನ ಜೊತೆಗೆ ಕಟ್ಟಡ ಕೂಡ ನೂರಕ್ಕೆ ನೌಕರರಿಗೆ ಬಹುಮಾನವನ್ನು ನೀಡುತ್ತೇನೆ ಎಂದರು. ನೂರುತ್ತಿ ಹೊಂದಿದವರ ತಮ್ಮ ಬದುಕು ಆರೋಗ್ಯಪೂರ್ಣವಾಗಿ ಕಳೆಯಲು ಮುಂದಾಗಬೇಕು ಏಕೆಂದರೆ ತಮ್ಮ ಸೇವೆ ಅವಧಿಯಲ್ಲಿ ಸಾಕಷ್ಟು ಒತ್ತಡದಿಂದ ಕೆಲಸವನ್ನು ಮಾಡಿರುತ್ತೀರಿ ಹೀಗಾಗಿ ನಿವೃತ್ತಿ ನಂತರದ ದಿನಗಳಲ್ಲಿ ವಿಶೇಷವಾಗಿ ಜೀವಿಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.ನಿವೃತ್ತಿ ಸರ್ಕಾರಿ ನೌಕರ ಸಂಘದ ರಾಜ್ಯಾಧ್ಯಕ್ಷ ಡಿಎಲ್ ಭೈರಪ್ಪ ಮಾತನಾಡಿ. ಸರ್ಕಾರದ ವತಿಯಿಂದ ನೂರುತಿ ನೌಕರರಿಗೆ ಸಿಗಬೇಕಾದ ಪ್ರತಿಯೊಂದು ಸೌಲಭ್ಯಗಳನ್ನು ಪಡೆದುಕೊಳ್ಳಲು ಇವತ್ತಿನ ಸಂಘವು ಪ್ರಾಮಾಣಿಕ ಯಿಂದ ಶ್ರಮಿಸುತ್ತಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಇದೇ ರೀತಿಯಲ್ಲಿ ಇನ್ನೂ ಹೆಚ್ಚಿನದಾಗಿ ಸರ್ಕಾರದ ವತಿಯಿಂದ ಸೌಲಭ್ಯವನ್ನು ಪಡೆಯಲು ಎಲ್ಲರೂ ಒಗ್ಗಟ್ಟಿನಿಂದ ಮಾಡಬೇಕೆಂದು ತಿಳಿಸಿದರು.ನಿವೃತ್ತ ಸರ್ಕಾರಿ ನೌಕರ ಸಂಘದ ತಾಲ್ಲೂಕು ಅಧ್ಯಕ್ಷ ಎಂಇ ಜನಾರ್ಧನ್ ಮಾತನಾಡಿ. ನಿವೃತ್ತ ಸಂಘದ ಶಾಶ್ವತ ನಿಧಿ ಸಂಗ್ರಹಿಸುವ ಕೆಲಸಕ್ಕೆ ಮುಂದಾಗಿದ್ದೇವೆ ಇದಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಸಾಕಾರವನ್ನು ಪ್ರತಿಯೊಬ್ಬ ನೀಡುತ್ತಿದ್ದಾರೆ ಈ ಹಣವನ್ನು ಯಾವುದೇ ರೀತಿ ಕಾರ್ಯಕ್ರಮಗಳಿಗೆ ಹಣವನ್ನು ಬಳಕೆ ಮಾಡಿಕೊಳ್ಳುವುದಿಲ್ಲ ಬ್ಯಾಂಕ್ ನಲ್ಲಿನ ಹಣವನ್ನು ನೀಡುತ್ತಿ ನೌಕರ ಕ್ಷಮಾಭಿವೃದ್ಧಿ ಬಳಕೆಗೆ ಮಾಡಿಕೊಳ್ಳುವ ಕಾರ್ಯಕ್ಕೆ ಮುಂದಾಗಿದ್ದೇವೆ ಎಂದು ತಿಳಿಸಿದರು.ನಿವೃತ್ತಿ ಸರ್ಕಾರಿ ನೌಕರ ಸಂಘದ ರಾಜ್ಯ ಕಾರ್ಯದರ್ಶಿ ರಂಗೇಗೌಡ. ಖಜಾಂಚಿ ಎಸ್ ಎಂ ಅಂಜಪ್ಪ. ಕಾರ್ಯದರ್ಶಿ ಎಚ್ ಮುನಿಯಪ್ಪ. ಸಂಘಟನಾ ಕಾರ್ಯದರ್ಶಿ ಎಸ್ ಗೋವಿಂದಪ್ಪ. ಜಿಲ್ಲಾ ಅಧ್ಯಕ್ಷ ಪೈಲ್ವಾನ್ ಎನ್ ವು ಅಂಜಪ್ಪ. ಗೌರವಾಧ್ಯಕ್ಷ ನಂಜುಂಡಪ್ಪ. ತಾಲ್ಲೂಕು ಉಪಾಧ್ಯಕ್ಷ ಎಸ್ ಆರ್ ವೆಂಕಟೇಶಪ್ಪ. ಎನ್ ವೆಂಕಟರಮಣಪ್ಪ. ಸಂಘಟನಾ ಕಾರ್ಯದರ್ಶಿ ಯಾನಾದಹಳ್ಳಿ ನಾರಾಯಣಸ್ವಾಮಿ. ಖಜಾಂಚಿ ಸಿದ್ದಲಿಂಗಯ್ಯ ಮತ್ತಿತರರು ಹಾಜರಿದ್ದರು.



