ಬೇಲೂರು: ತಾಲೂಕು ದಂಡಾಧಿಕಾರಿಗಳು ಸೇರಿದಂತೆ ವೀರಶೈವ ಸಮಾಜಕ್ಕೆ ಸೇರಿದ ಅಧಿಕಾರಿಗಳನ್ನು ಗುರಿಯಾಗಿಸಿ ಶಾಸಕ ಪದೇಪದೇ ಪರೋಕ್ಷ ದಾಳಿ ನಡೆಸುತ್ತಿದ್ದಾರೆ ಎಂದುಬೀಕ್ಕೊಡು ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಮಲ್ಲೇಶ್ ಆರೋಪಿಸಿದರು.ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ನೇರವಾಗಿ ಎದುರಿಸಲು ಸಾಧ್ಯವಾಗದೆ, ಜನರನ್ನು ಪ್ರೇರೇಪಿಸಿ ಸಮಾಜದ ಅಧಿಕಾರಿಗಳನ್ನು ಬಲಿಪಶು ಮಾಡುವ ಪರಿಸ್ಥಿತಿ ನಿರ್ಮಾಣ ಮಾಡಲಾಗುತ್ತಿದೆ
ಕಳೆದ ಆರು ತಿಂಗಳಿನಿAದ ಈ ರೀತಿಯ ಘಟನೆಗಳು ನಿರಂತರವಾಗಿ ನಡೆಯುತ್ತಿದ್ದು, ಸಬ್ ಇನ್ಸ್ಪೆಕ್ಟರ್, ಇನ್ಸ್ಪೆಕ್ಟರ್ ಸೇರಿದಂತೆ ಹಲವು ಇಲಾಖೆ ಅಧಿಕಾರಿಗಳು ಇದರಿಂದ ತೊಂದರೆ ಅನುಭವಿಸಿದ್ದಾರೆ ಎಂದು ದೂರಿದರು. ಜೊತೆಗೆ, ಜೆಡ್ಪಿ ಎ.ಇ.ಇ. ಆಗಿ ಕಾರ್ಯನಿರ್ವಹಿಸಿದ್ದ ಮಧುಸೂದನ್ ಅವರ ಮೇಲೂ ಆರೋಪಗಳನ್ನು ಮಾಡಿ, ಕೊನೆಗೆ ವರ್ಗಾವಣೆಗೊಳಿಸಲಾಯಿತು ಉಗ್ರ ಹೋರಾಟದ ಎಚ್ಚರಿಕೆ: ದಬ್ಬೆ ಗ್ರಾಮ ಪಂಚಾಯತಿ ಸದಸ್ಯ ಸಂತೋಷ್ ಹಾಗೂ ಬಗರ್ ಹುಕುಂ ಸದಸ್ಯ ಪ್ರದೀಪ್ ಮಾತನಾಡಿ ಇದೇ ರೀತಿಯ ಪರಿಸ್ಥಿತಿ ನಮ್ಮ ಸಮಾಜದ ಮೇಲೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಕೈಗೊಳ್ಳುವುದಾಗಿ ಮುಖಂಡರು ಎಚ್ಚರಿಕೆ ನೀಡಿದರು.
ವೀರಶೈವ ಸಮಾಜದ ಮತಗಳಿಂದ ಗೆದ್ದ ಶಾಸಕ, ಇದೀಗ ಅದೇ ಸಮಾಜದ ವಿರುದ್ಧ ನಡೆದುಕೊಳ್ಳುತ್ತಿದ್ದಾರೆ ಕೆಲಸ ಮಾಡುವ ಅಧಿಕಾರಿಗಳ ಮೇಲೆ ಲಂಚದ ಆರೋಪ ಹೊರಿಸಿ ಅವರನ್ನು ವರ್ಗಾವಣೆ ಮಾಡಲಾಗುತ್ತಿದೆ ಎಂದು ಹೇಳಿದರು.
ತಾಲೂಕು ಕಚೇರಿಯಲ್ಲಿ ರೈತರಿಗೆ ಸರಿಯಾದ ಸೇವೆ ಸಿಗುತ್ತಿಲ್ಲ ಎಂದು ದೂರಿದ ಅವರು, ಕೇವಲ ಒಂದು ಸಮುದಾಯವಷ್ಟೇ ಅಲ್ಲದೆ ಎಲ್ಲಾ ವರ್ಗದ ಅಧಿಕಾರಿಗಳು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.ಬೇಲೂರು ತಾಲೂಕಿನಲ್ಲಿ ಕಳೆದ ಮೂರು ವರ್ಷಗಳಲ್ಲಿ ಎಷ್ಟು ಅಧಿಕಾರಿಗಳು ಬಂದಿದ್ದಾರೆ, ಎಷ್ಟು ಜನ ವರ್ಗಾವಣೆ ಆಗಿದ್ದಾರೆ, ಎಷ್ಟು ಜನ ಸಸ್ಪೆಂಡ್ ಆಗಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಒಂದೇ ಇಲಾಖೆ ಅಲ್ಲ, ಎಲ್ಲಾ ಇಲಾಖೆಗಳಲ್ಲೂ ಇದೇ ಪರಿಸ್ಥಿತಿ ಇದೆ.ಈಗ ಅಧಿಕಾರಿಗಳು ಇಲ್ಲಿ ಬರೋಕೆ ಹೆದರುತ್ತಿದ್ದಾರೆ. ನಾವು ಬರಲ್ಲ ಎಂದು ಹೇಳ್ತಿದ್ದಾರೆ. ಒಳ್ಳೆಯವರೂ ಬರಲ್ಲ, ಕೆಟ್ಟವರೂ ಬರಲ್ಲ ಅನ್ನೋ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಿಗಳಿಗೆ ಯಾವುದೇ ರೀತಿಯಲ್ಲಿ ಕೆಲಸ ಮಾಡಲು ಅವಕಾಶ ನೀಡಲಾಗುತ್ತಿಲ್ಲ ಎಂದು ದೂರಿದರು.
ಒಂದು ಕೆಲಸ ಮಾಡೋಕೂ ಬಿಡ್ತಿಲ್ಲ. ಕೆಲಸ ಮಾಡಿದರೆ ಲಂಚ ತೆಗೆದುಕೊಂಡಿದ್ದಾರೆ ಅಂತ ಆರೋಪ, ಕೆಲಸ ಮಾಡ್ಲಿಲ್ಲ ಅಂದ್ರೆ ಕೆಲಸ ಮಾಡಿಲ್ಲ ಅಂತ ಆರೋಪ. ಈ ಪರಿಸ್ಥಿತಿಯಲ್ಲಿ ಯಾವ ಅಧಿಕಾರಿಗಳು ಕೆಲಸ ಮಾಡ್ತಾರೆ ರೈತರಿಗೆ ಹೇಗೆ ಸಹಾಯ ಆಗುತ್ತದೆ ಎಂದು ಪ್ರಶ್ನಿಸಿದ ಅವರು ತಹಸೀಲ್ದಾರ್ ಸೇರಿದಂತೆ ಅಧಿಕಾರಿಗಳನ್ನು ಉದ್ದೇಶಪೂರ್ವಕವಾಗಿ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಆರೋಪಿಸಿದರು.ತಪ್ಪು ಮಾಡಿಲ್ಲ ಅಂದ್ರೂ ತಪ್ಪು ಮಾಡಿದ್ದಾರೆ ಅಂತ ಟಾರ್ಗೆಟ್ ಮಾಡ್ತಾರೆ. ಶಾಸಕರ ಮಾತು ಕೇಳಿಲ್ಲ ಅಂದ್ರೆ ಅವನು ಸರಿ ಇಲ್ಲ, ನಮ್ಮ ಹಿಡಿತದಲ್ಲಿ ಇಲ್ಲ ಅಂತ ಆರೋಪ ಮಾಡ್ತಾರೆ. ಈಗ ತಹಸೀಲ್ದಾರ್ ವಿಚಾರದಲ್ಲೂ ಇದೇ ರೀತಿಯ ಘಟನೆ ನಡೆದಿದೆ ಎಂದು ಹೇಳಿದರು.ಅಧಿಕಾರಿಗಳ ಮೇಲೆ ನಡೆಯುತ್ತಿರುವ ಒತ್ತಡ ಮತ್ತು ರಾಜಕೀಯ ಹಸ್ತಕ್ಷೇಪವನ್ನು ತಕ್ಷಣ ನಿಲ್ಲಿಸದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸುವುದಾಗಿ ಮುಖಂಡರು ಎಚ್ಚರಿಸಿದರು.ಪತ್ರಿಕಾಗೋಷ್ಟಿಯಲ್ಲಿ ಕಿಸಾನ್ ಘಟಕದ ತಾಲ್ಲೂಕ್ ಅಧ್ಯಕ್ಷ ಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷ ಶರತ್, ಗ್ಯಾರಂಟಿ ಸಮಿತಿ ಸದಸ್ಯ ಸುರೇಶ್ ಹಾಜರಿದ್ದರು.
ಶಾಸಕರ ವಿರುದ್ಧ ವೀರಶೈವ ಸಮಾಜದ ಮುಖಂಡರ ಆರೋಪ: ಉಗ್ರ ಹೋರಾಟ



