ಬೆಂಗಳೂರು: ನಿನ್ನೆ ಹಾಲಿ ಮಂತ್ರಿಗಳಾಗಿದ್ದವರು ಇಂದು ಮಾಜಿ ಮಂತ್ರಿಗಳಾಗಿದ್ದಾರೆ. ನೂತನವಾಗಿ ಸಚಿವರಾಗ ಬಯಸುವವರು ದೆಹಲಿಗೆ ದೌಡಾಯಿಸಿದ್ದಾರೆ. ಹಾಲಿ ಮಂತ್ರಿಗಳು ಮಾಜಿ ಮಂತ್ರಿಗಳಾದ ಪರಿಣಾಮ ಅವರಿಗೆ ಒದಗಿಸಲಾಗಿದ್ದ ಸರ್ಕಾರಿ ಸೌಲಭ್ಯಗಳನ್ನು ಹಿಂಪಡೆಯಲಾಗಿದೆ. ಸರ್ಕಾರ ವಿಸರ್ಜನೆಯಾಗಿರುವ ಕಾರಣ ರಾಜ್ಯ ಸರ್ಕಾರದ ಆಡಳಿತ ಕೇಂದ್ರ ಬಿಂದುವಾದ ವಿಧಾನಸೌಧ ಹಾಗೂ ವಿಕಾಸ ಸೌಧ ಜನಜಂಗುಳಿಯಿಲ್ಲದೆ ಕಾಲಿಕಾಲಿಯಾಗಿದೆ.
ಸರ್ಕಾರಿ ಕಚೇರಿಗಳಿಗೆ ಬರಬೇಕಾಗಿದ್ದ ಅನೇಕ ಅಧಿಕಾರಿ ನೌಕರರು ಇಂದು ಕಾಣುತ್ತಿಲ್ಲ. ಇಷ್ಟೆಲ್ಲಾ ಆಗಿರುವುದು ಹಾಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ರಾಜೀನಾಮೆಯಿಂದ ಸರ್ಕಾರ ವಿಸರ್ಜನೆಯಾದ ಪರಿಣಾಮ.
ನಿನ್ನೆ ಸಿದ್ದರಾಮಯ್ಯ ಅವರು ನೀಡಿದ್ದ ರಾಜೀನಾಮೆಯಿಂದ ಬೆಂಗಳೂರಿನಿಂದ ಹೊರಗೆಯಿದ್ದ ರಾಜ್ಯಪಾಲರು ರಾತ್ರಿ ಆಗಮಿಸಿ ಅವರ ರಾಜೀನಾಮೆ ಅಂಗೀಕರಿಸಿದ ಪರಿಣಾಮ ಅವರ ಸರ್ಕಾರದ ಎಲ್ಲಾ ಮಂತ್ರಿಗಳು ಮಾಜಿಗಳಾಗಿದ್ದಾರೆ. ಹೀಗಾಗಿ ಅವರಿಗೆ ಪ್ರಯಾಣಕ್ಕೆ ನೀಡಲಾಗಿದ್ದ ಕಾರುಗಳ ಸೌಲಭ್ಯಗಳನ್ನು ಹಿಂದಕ್ಕೆ ಪಡೆಯಲಾಗಿದೆ. ಅವರ ಕಚೇರಿಗಳಿಗೆ ಅಳವಡಿಸಲಾಗಿದ್ದ ಹೆಸರಿನ ನಾಮಫಲಕಗಳನ್ನು ತೆರವುಗೊಳಿಸಲಾಗಿದೆ. ಮುಂದಿನ ನೂತನ ಮುಖ್ಯಮಂತ್ರಿ, ಸಚಿವರುಗಳು ಅಧಿಕಾರಕ್ಕೆ ಬರುವವರೆಗೆ ಈ ಸೌಲಭ್ಯಗಳನ್ನು ಒದಗಿಸಲು ಸಿದ್ಧತೆಯ ನಡೆಯುತ್ತಿದೆ.
ಹಾಲಿ ಸಚಿವರಾಗಿದ್ದವರ ವಿಧಾನಸೌಧ ಕಚೇರಿ ಕೊಠಡಿಗಳನ್ನು ತೆರವುಗೊಳಿಸಿ ಶುಚಿ ಮಾಡಲು ಸಿದ್ಧರಾಗಿದ್ದಾರೆ.
ಸಂಪುಟದಲ್ಲಿ ನೂತನ ಮಂತ್ರಿಗಳಾಗಲು ಕಾಂಗ್ರೆಸ್ ಶಾಸಕರಲ್ಲಿ ತಾ ಮುಂದು ನಾ ಮುಂದು ಪೈಪೋಟಿ ನಡೆದಿದೆ.
ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದವರು ಸೇರಿದ್ದಂತೆ ನೂತನವಾಗಿ ಮಂತ್ರಿಗಳಾಗಲು ಬಹುತೇಕ ಶಾಸಕರು ಬಯಸಿ ಪಕ್ಷದ ವರಿಷ್ಠರ ಮೇಲೆ ಪ್ರಭಾವ ಬೀರಲು ದೆಹಲಿಗೆ ದೌಡಾಯಿಸಿದ್ದಾರೆ. ಒಟ್ಟಾರೆ ನೂತನ ಮುಖ್ಯಮಂತ್ರಿ ಮತ್ತು ಸಚಿವರ ಪ್ರಮಾಣಕ್ಕಾಗಿ ದೆಹಲಿಯಲ್ಲಿ ದೊಡ್ಡ ಮಟ್ಟದ ಸಭೆಗಳೇ ನಡೆಯುತ್ತಿದೆ. ರಾಜ್ಯ ಕಾಂಗ್ರೆಸ್ ಪಕ್ಷದ ಬೆಳವಣಿಗೆಗಳ ತಾಣವಾಗಿ ಎಐಸಿಸಿ ಕಚೇರಿ ಪರಿಣಮಿಸಿದೆ.
ನಿನ್ನೆ ಹಾಲಿಗಳು…ಇಂದು ಮಾಜಿಗಳು | ಸರ್ಕಾರಿ ಸೌಲಭ್ಯಗಳು ವಾಪಸ್… ವಿಧಾನಸೌಧ ಖಾಲಿ..ಖಾಲಿ…



