ದೇವನಹಳ್ಳಿ: ಸೋಮವಾರದಂದು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣ ದಿನಾಚರಣೆಯು ವಿಶ್ವಕರ್ಮ ಕುಲಗುರು ಶ್ರೀ ಶ್ರೀ ಶ್ರೀ ಶಿವ ಸುಜ್ಞಾನಮೂರ್ತಿಗಳ ದಿವ್ಯ ಸನ್ನಿಧಾನದಲ್ಲಿ ಅದ್ದೂರಿಯಿಂದ ಜರುಗಿತು. ಸಾಧನೆಗೈದ ಶಿಲ್ಫಿಗಳಿಗೆ ಜಕಣಾಚಾರಿ ಪ್ರಶಸ್ತಿ ಪ್ರಧಾನ ಮಾಡಿ ನಗದು ಬಹುಮಾನ ನೀಡಲಾಯಿತು.
ಸಮಾರಂಭವನ್ನು ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಉದ್ಘಾಟಿಸಿ ಮಾತನಾಡಿದರು. ವಿಶ್ವಕರ್ಮರ ಬಹುದಿನಗಳ ಬೇಡಿಕೆಯಾದ ಅಧ್ಯಾಯನ ಪೀಠ ಒಂದನ್ನು ಮತ್ತು ವಿಶ್ವಕರ್ಮ ಮಠಕ್ಕಾಗಿ ಅಗತ್ಯ ನೆರವನ್ನು ನೀಡುವುದಾಗಿ ಭರವಸೆ ನೀಡಿ ನಾನು ಸದಾ ನಿಮ್ಮ ಜತೆ ಇರುತ್ತೇನೆ ಎಂದರು.
ಜ್ಞಾನಪೀಠ ಪುರಸ್ಕೃತರಾದ ಚಂದ್ರಶೇಖರ್ ಕಂಬಾರ್ ಜಕಣಾಚಾರಿ ಪ್ರಶಸ್ತಿ ಪುರಸ್ಕೃತರು ಹಾಗೂ ವಿಶ್ವಕರ್ಮ ನಿಗಮದ ಮಾಜಿ ಅಧ್ಯಕ್ಷರುಗಳಾದ ಆರ್. ಶ್ರೀನಿವಾಸಾಚಾರ್, ಬಾಬು ಪತ್ತಾರ್, ಸತ್ಯವತಿ,ನಿವೃತ್ತ ಐಎಎಸ್ ಅಧಿಕಾರಿಗಳು, ವಿಶ್ವಕರ್ಮ ಮುಖಂಡರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು, ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಯಲಹಂಕ ಭಾಗದ ವಿಶ್ವಕರ್ಮ ಕ್ಷೇಮಾಭಿವೃದ್ಧಿ(ರಿ) ಸಂಘದ ಅಧ್ಯಕ್ಷರಾದ ಎಂ ರಾಮಚಂದ್ರಾಚಾರಿ ಕಾರ್ಯಾಧ್ಯಕ್ಷ ರಾದ ಡಿಕೆ ಮುರಳಿ, ಉಪಾಧ್ಯಕ್ಷರಾದ ಉಮೇಶ್, ಸಂಘಟನಾ ಕಾರ್ಯದರ್ಶಿಯಾದ ವಿ ಪ್ರಮೋದ್ ಕುಮಾರ್, ಹಾಗು ಮುಖಂಡರಾದ ರಘುನಾಥಾಚಾರಿ ಭಾಗವಹಿಸಿದ್ದರು.ಸಮಸ್ತ ವಿಶ್ವಕರ್ಮ ಮುಖಂಡರು ಹಾಗೂ ಕುಲ ಬಾಂಧವರು ಕಾರ್ಯಕ್ರಮಕ್ಕೆ ಆಗಮಿಸಿ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣ ದಿನಾಚರಣೆಯನ್ನು ಯಶಸ್ವಿಗೊಳಿಸಿದರು.