ತಿಪಟೂರು: ನಗರದ ಅರಳೀಕಟ್ಟೆ ವೃತ್ತದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಮತ್ತು ಸಮಾಜ ಸೇವಕ ಲೋಕೇಶ್ವರ ನೇತೃತ್ವದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ಜಾಗವನ್ನು ತೆರವುಗೊಳಿಸದಂತೆ ಒತ್ತಾಯಿಸಿ ಸಹಿ ಸಂಗ್ರಹ ಅಭಿಯಾನ ಕಾರ್ಯಕ್ರಮದಲ್ಲಿ ಲೋಕೇಶ್ವರ ರವರು ಸಹಿ ಹಾಕುವುದರ ಮೂಲಕ ಸಹಿ ಸಂಗ್ರಹ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಗರಸಭಾ ಸದಸ್ಯರಾದ ಸೊಪ್ಪು ಗಣೇಶ್, ಭಾರತಿ ಮಂಜುನಾಥ್, ಮಾಜಿ ರೋಟರಿ ಸಂಸ್ಥೆ ಅಧ್ಯಕ್ಷ ಅಶೋಕ್, ಮುಖಂಡರಾದ ತರಕಾರಿ ಹರೀಶ್, ಡಾಬಾ ಶಿವಶಂಕರ್, ಬಾಬು ಮತ್ತು ವರುಣ್ ಸೇರಿದಂತೆ ನೂರಾರು ಮಂದಿ ಭಕ್ತಾದಿಗಳು ಹಾಜರಿದ್ದು, ಸುಮಾರು ಸಾವಿರ ಜನಸಂಖ್ಯೆಯಲ್ಲಿ ಸಹಿ ಸಂಗ್ರಹ ಮಾಡಿದ್ದು ವಿಶೇಷವಾಗಿತ್ತು.