ಬಿಡದಿ: ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ. ಕುಮಾರಸ್ವಾಮಿ ಅವರನ್ನು, ಅವರ ಬಿಡದಿಯ ತೋಟದ ಮನೆಯಲ್ಲಿ ಮಾಜಿ ವಸತಿ ಸಚಿವರಾದ ವಿ.ಸೋಮಣ್ಣ ಸೌಹಾರ್ಧಯುತ ಭೇಟಿ ಮಾಡಿ, ಪ್ರಸ್ತುತ ರಾಜಕೀಯ ಕುರಿತು ಸಮಾಲೋಚನೆ ನಡೆಸಿದರು.
ರಾಜಕೀಯ ಕ್ಷೇತ್ರ ನಿಂತ ನೀರಲ್ಲ, ಹರಿಯುವ ನೀರು ಜೆಡಿಎಸ್ ಪ್ರಾದೇಶಿಕ ಪಕ್ಷವಾಗಿದ್ದರು, ರಾಜ್ಯದಲ್ಲಿ ತನ್ನದೆ ಆದ ಹಿಡಿತವಿದೆ.
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರವರು ಅಪಾರ ರಾಜಕೀಯ ಹಿನ್ನಲೆವುಳ್ಳವರು, ಹೆಚ್.ಡಿ.ಕುಮಾರಸ್ವಾಮಿರವರು ಎರಡು ಬಾರಿ ಮುಖ್ಯಮಂತ್ರಿಯಾಗಿ ಉತ್ತಮ ಆಡಳಿತ ನೀಡಿದ ಅನುಭವವಿದೆ.
ದೇಶದಲ್ಲಿ ಪ್ರಧಾನಿ ನರೇಂದ್ರಮೋದಿರವರ ಹವಾ ಇದೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಭಾರಿ ಬಹುಮತದಿಂದ ಬಿಜೆಪಿ ಪಕ್ಷ ಆಡಳಿತಕ್ಕೆ ಬರಲಿದೆ.ಪ್ರಧಾನಿ ನರೇಂದ್ರಮೋದಿರವರ ದೂರದೃಷ್ಟಿ ಚಿಂತನೆ ಮತ್ತು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ರಾಜಕೀಯ ಅನುಭವ ಎರಡು ಸೇರಿ ರಾಜ್ಯದಲ್ಲಿ 28ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ, ಜೆಡಿಎಸ್ ಗೆಲುವು ಸಾಧಿಸಲಿದೆ.
ಇಂದು ರಾಜ್ಯದ ಜನತೆ ರಾಷ್ಟ್ರದ ಸುರಕ್ಷತೆ ಮತ್ತು ಅಭಿವೃದ್ದಿ ಪರ ಇರುವ ಬಿಜೆಪಿ ಪಕ್ಷಕ್ಕೆ ಸ್ವಯಂಪೇರಿತರಾಗಿ ಬೆಂಬಲ ಸೂಚಿಸುತ್ತಿದ್ದಾರೆ.
ಕಳೆದ 45ವರ್ಷಗಳಿಂದ ರಾಜಕೀಯದಲ್ಲಿ ಸಕ್ರಿಯವಾಗಿ ಜನಸೇವೆ ಮಾಡುತ್ತಿದ್ದೇನೆ. 10ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ಉಸ್ತುವಾರಿಯಾಗಿ ಹೊಣೆ ಹೊತ್ತು ಬಿಜೆಪಿ ಪಕ್ಷದ ಶಾಸಕರು ಆಯ್ಕೆಯಾಗುವಂತೆ ಸಂಘಟನೆ ಮಾಡಿದ್ದೇನೆ.
ಹೈಕಮಾಂಡ್ ಬಿಜೆಪಿ ಪಕ್ಷ ಯಾವ ನಿರ್ಣಯ ಕೈಗೊಂಡರು ನಾನು ಬದ್ದನಾಗಿ ಕೆಲಸ ಮಾಡುತ್ತೇನೆ.ಈಗಾಗಲೇ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಮತ್ತು ಬಿಜೆಪಿ ಪಕ್ಷದ ರಾಷ್ಟ್ರಧ್ಯಕ್ಷರಾದ ನಡ್ಡಾರವರನ್ನು ಭೇಟಿ ಮಾಡಿ ನನ್ನ ಆನಿಸಿಕೆ ಅಭಿಪ್ರಾಯಗಳನ್ನು ತಿಳಿಸಿದ್ದೇನೆ ಎಂದು ವಿ.ಸೋಮಣ್ಣರವರು ಹೇಳಿದರು.