ಬೆಂಗಳೂರು: ಬೆಂಗಳೂರು ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬೈಲಪ್ಪನಹಳ್ಳಿಯಲ್ಲಿ ಅನೈತಿಕ ಸಂಬಂಧದ ವಿಷಯಕ್ಕೆ ಸಂಬಂಧಪಟ್ಟ ಹಾಗೆ ರಮೇಶ್ 38 ಎಂಬುವವನು ತನ್ನ ಹೆಂಡತಿಯ ಭಾಗ್ಯ 30 ವರ್ಷದವಳನು ಚಾಕುವಿನಿಂದ ಕುತ್ತಿಗೆ ಕೊಯ್ದು ಹತ್ಯೆ ಮಾಡಿರುತ್ತಾನೆ.
ಮೂಲತಹ ಭಾಗ್ಯ ಮೈಸೂರಿನವಳಾಗಿದ್ದು ಬ್ಯೂಟಿ ಪಾರ್ಲರ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದಳು, ರಮೇಶ್ಗೆ ಅನುಮಾನ ಬಂದು ಈಕೆಯ ಬಗ್ಗೆ ತನಿಖೆ ಕೈಗೊಂಡಾಗ ಮೃತ ಭಾಗ್ಯ ಬ್ಯೂಟಿ ಪಾರ್ಲರ್ ಮಾಲೀಕನ ಜೊತೆ ಮಲಗಿರುವುದು ಗೊತ್ತಾದ ಹಿನ್ನೆಲೆಯಲ್ಲಿ ನಿನ್ನೆ ಬೆಳಿಗ್ಗೆ ಭಾಗ್ಯಳನ್ನು ಮೈಸೂರಿನಿಂದ ಕರೆದುಕೊಂಡು ಬಂದು ನಾಲ್ಕು ಗಂಟೆ ಸುಮಾರಿಗೆ ಭಾಗ್ಯ ಮತ್ತು ರಮೇಶ್ ನಡುವೆ ಮನೆಯಲ್ಲಿ ತೀವ್ರ ಗಲಾಟೆ ಶುರುವಾದಾಗ ಭಾಗ್ಯಳು ರಮೇಶನ ಗುಪ್ತಾಂಗಕ್ಕೆ ಹೊಡೆದಾಗ ರಮೇಶ್ಗೆ ಕೋಪ ಬಂದು ಕಬ್ಬಿಣದ ಸಲಾಕೆಯಿಂದ ತಲೆಗೆ ಹೊಡೆದು ಮತ್ತು ಚಾಕುವಿನಿಂದ ಕುತ್ತಿಗೆ ಕೊಯ್ದಿ ಮನೆ ಬೀಗ ಹಾಕಿಕೊಂಡು ಹೋಗಿ ಇಂದು ಬೆಳಿಗ್ಗೆ 7 ಏಳು ಗಂಟೆ ತನಕ ಸುತ್ತಾಡಿಕೊಂಡು ನಂತರ ನೆಲಮಂಗಲ ಟೌನ್ ಪೊಲೀಸ್ ಸ್ಟೇಷನ್ ಗೆ ಹೋಗಿ ತಿಳಿಸಿದಾಗ,
ಟೌನ್ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಗ್ರಾಮಾಂತರ ಪೊಲೀಸರಿಗೆ ವಿಷಯ ಮುಟ್ಟಿಸಿರುತ್ತಾರೆ. ನಂತರ ನೆಲಮಂಗಲ ಗ್ರಾಮಾಂತರ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಮುಂದುವರಿಸಿರುತ್ತಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪುರುಷೋತ್ತಮ್ ತಿಳಿಸಿದ್ದಾರೆ.
ರಮೇಶ್ಗೆ ಶಕುಂತಲಾ ಎಂಬ ಮತ್ತೊಬ್ಬಳ ಜೊತೆಯಲ್ಲಿ ಈ ಹಿಂದೆ ಮದುವೆಯಾಗಿ ಇಬ್ಬರು ಮಕ್ಕಳು ಸಹ ಇರುತ್ತಾರೆಂದು ತಿಳಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಎಸ್ ಪಿ ಮಲ್ಲಿಕಾರ್ಜುನ ಬಾಲದಂಡಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ತಿಳಿಸಿದರು.