ಕನಕಪುರ: ರಾಜ್ಯದ ಜನರಲ್ಲಿ ಅಸಹ್ಯ ಹುಟ್ಟಿಸಿರುವ ಪೆನ್ಡೈವ್ ಪ್ರಕರಣದಲ್ಲಿ ಶೋಷಣೆಗೆ ಒಳಗಾದ ಮಹಿಳೆ ಯರ ಸುರಕ್ಷತೆ ಬಗ್ಗೆ ಆತಂಕ ಇದ್ದು ರಾಜ್ಯ ಸರ್ಕಾರ ಈ ಬಗ್ಗೆ ಮಾಹಿತಿಯನ್ನು ರಾಜ್ಯದ ಜನತೆಗೆ ನೀಡಬೇಕೆಂದು ಕನ್ನಡ ಸೇನೆಯ ತಾಲೂಕು ಅಧ್ಯಕ್ಷ ಜಯಸಿಂಹ ಆಗ್ರಹಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಇಡಿ ದೇಶ ಕಂಡರಿಯದ ದೊಡ್ಡ ಲೈಂಗಿಕ ಹಗರಣವಾಗಿ ಕಾಣುತ್ತಿರುವ ಪೆನ್ಡೈವ್ನಲ್ಲಿ ಸುಮಾರು 300 ಕ್ಕಿಂತ ಹೆಚ್ಚಿನ ಮಹಿಳೆಯರ ವಿಡಿಯೋ ಇದೆ ಎಂದು ಹೇಳ ಲಾಗಿದ್ದು ಈ ಮಹಿಳೆಯರ ಪರಿಸ್ಥಿತಿ ಏನಾಗಿದೆ? ಈ ಎಲ್ಲಾ ಮಹಿಳೆಯರು ಸುರಕ್ಷಿತವಾಗಿದ್ದಾರಾ? ಅವರಿಗೆ ಬೆದರಿಕೆ ಇದೆಯಾ ಎನ್ನುವುದು ಗೊತ್ತಿಲ್ಲ, ಎಸ್ಐಟಿ ಒಂದು ಕಡೆ ತನಿಖೆ ಮಾಡುತ್ತಿದ್ದು,ಈ ಬಗ್ಗೆ ಮಾನ್ಯ ಗೃಹ ಸಚಿವರು ಎಲ್ಲಾ ಮಹಿಳೆಯರ ಸುರಕ್ಷತೆ ಬಗ್ಗೆ ಮಾಹಿತಿ ಕೊಡಬೇಕು ಎಂದು ಒತ್ತಾಯಿಸಿದರು.
ಸಂಸದನ ಲೈಂಗಿಕ ದೌರ್ಜನ್ಯದ ಪೆನ್ ಡ್ರೈವ್ ಬಹಿರಂಗ ವಾಗುತ್ತಿದ್ದಂತೆ, ಶೋಷಿತ ಮಹಿಳೆಯರು ಭಯಭೀತ ರಾಗಿದ್ದು ಅವರು ಹೊರಗೆ ಬಂದು ಧೈರ್ಯವಾಗಿ ಮಾತ ನಾಡಲು ಆಗದಂತಾಗಿದೆ,ರಾಜ್ಯದ ಮಹಿಳಾ ಆಯೋಗ ಹಾಸನದಲ್ಲೇ ಇದ್ದು, ಶೋಷಣೆಗೆ ಒಳಗಾದ ಮಹಿಳೆ ಯರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು, ಆಗ ಮಾತ್ರ ಅವರು ಧೈರ್ಯವಾಗಿ ಬಂದು ತಮ್ಮ ಮೇಲೆ ಆಗಿರುವ ದೌರ್ಜನ್ಯದ ಬಗ್ಗೆ ಮಾತನಾಡುತ್ತಾರೆ ಎಂದರು. ಗೃಹ ಸಚಿವರಾದ ಜಿ. ಪರಮೇಶ್ವರ್ ಅವರು ತಕ್ಷಣ ಅ ಮಹಿಳೆಯರ ಸುರಕ್ಷತೆ ಖಚಿತಪಡಿಸಿಕೊಂಡು, ಮಾಹಿತಿ ನೀಡಿದಾಗ ಮಾತ್ರ ರಾಜ್ಯದ ಜನಕ್ಕೆ ಮಹಿಳೆಯರ ಸುರಕ್ಷತೆ ಬಗ್ಗೆ ನಂಬಿಕೆ ಬರಲಿದೆ ಎಂದು ತಿಳಿಸಿದರು.