ಕನ್ನಡ ಚಿತ್ರರಂಗದಲ್ಲೀಗ ಪ್ರಯೋಗಾತ್ಮಕ ಚಿತ್ರಗಳ ಅಲೆ ಶುರುವಾಗಿದೆ ಕಮರ್ಷಿಯಲ್ ಚಿತ್ರಗಳ ನಡುವೆ ಆಗೊಮ್ಮೆ ಈಗೊಮ್ಮೆ ವಿಭಿನ್ನ ಪ್ರಯತ್ನಗಳು ನಡೆಯುತ್ತಿವೆ. ಜೀವನಕ್ಕೆ ಬಹಳ ಹತ್ತಿರವಾದ ಕಥೆಗಳು ದೃಶ್ಯರೂಪಕ್ಕೆ ಇಳಿಸಲಾಗ್ತಿದೆ. ಅದರ ಮುಂದುವರೆದ ಭಾಗವಾಗಿ ತಯಾರಾಗಿರುವ ಚಿತ್ರ
“ಜುಗಲ್ ಬಂದಿ.”ಭಗವದ್ಗೀತೆ, ಕುರಾನ್, ಬೈಬಲ್ನಲ್ಲೂ ಬರ್ದಿಲ್ಲ ದುಡ್ಮಾಡದೆಂಗತ! ಟ್ಯಾಗ್ ಲೈನ್ ಮೂಲಕ ಕುತೂಹಲ ದುಪ್ಪಟ್ಟು ಮಾಡಿರುವ ಜುಗಲ್ ಬಂದಿ ಮೊದಲ ನೋಟ ಬಿಡುಗಡೆಯಾಗಿದೆ. ಬೆಂಗಳೂರಿನ ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ಅಸಿಸ್ಟೆಂಡ್ ಡೈರೆಕ್ಟರ್ಸ್ ಗಳಿಂದ ಟ್ರೇಲರ್ ರಿಲೀಸ್ ಮಾಡಿಸಲಾಯಿತು.
ಟ್ರೇಲರ್ ಬಿಡುಗಡೆ ಬಳಿಕ ಮಾತನಾಡಿ ನಿರ್ದೇಶಕ ದಿವಾಕರ್ ಡಿಂಡಿಮ, ಸ್ಕೂಲ್ಗೆ ಹೋಗುವಾಗ ಅಮ್ಮ ಕೈ ಹಿಡಿದು ಕರೆದುಕೊಂಡು ಹೋಗಿದ್ದರು,ಆದ್ರೆ ಚಿತ್ರರಂಗಕ್ಕೆ ಒಬ್ಬನೇ ನಡೆದುಕೊಂಡು ಬಂದಿದ್ದೇನೆ. ದಯವಿಟ್ಟು ತಪ್ಪುಗಳು ಇದ್ದರೆ, ನಮ್ಮಿಂದ ಸಮಸ್ಯೆ ಆಗಿದ್ದರೆ ಯಾವುದನ್ನೂ ಮನಸ್ಸಿನಲ್ಲಿ ಇಟ್ಟುಕೊಳ್ಳಬೇಡಿ, ಜುಗಲ್ ಬಂದಿ ಸಿನಿಮಾ ವೈಯಕ್ತಿಕವಾಗಿ ಗೆಲ್ಲಲು ಮಾಡಿರುವ ಸಿನಿಮಾವಲ್ಲ.
ಚಿತ್ರರಂಗಕ್ಕೆ ಬಂದಿದ್ದೇವೆ 10 ಅಭಿಮಾನಿಗಳನ್ನಾದರು ಚಿತ್ರರಂಗಕ್ಕೆ ಕೊಡೋಣಾ,ನಮ್ಮ ಸಿನಿಮಾದಿಂದ ಚಿತ್ರರಂಗಕ್ಕೆ ಕನ್ನಡ ಸಿನಿಮಾ ಪ್ರೇಮಿಗಳನ್ನು ಕೊಡೋಣಾ ಎಂಬ ಉದ್ದೇಶದಿಂದ ಮಾಡಿದ್ದೇವೆ. ವೈಯಕ್ತಿಕ ಗೆಲುವಿಗಿಂತ ಚಿತ್ರರಂಗಕ್ಕೆ ಖಾಯಂ ಪ್ರೇಕ್ಷಕರನ್ನು ಹುಟ್ಟಿಸುವ ಕೆಲಸ ಮಾಡೋಣಾ ಅಂತಾ ಮಾಡಿರುವ ಸಿನಿಮಾ.
ಮಾನಸಿ ಸುಧೀರ್ ಮಾತನಾಡಿ, ಇದೊಂದು ವಿನೂತನ ಪ್ರಯತ್ನ. ಜುಗಲ್ ಬಂಧಿ ಒಂದು ಕ್ರಿಯೇಟಿವ್ ಟೀಮ್. ಈ ತಂಡದಲ್ಲಿ ನನಗೊಂದು ಪಾತ್ರ ಮಾಡಲು ಅವಕಾಶ ನೀಡಿದ ಡಿಂಡಿಮ ಸರ್ ಗೆ ಧನ್ಯವಾದ. ನನ್ನ ಪಾತ್ರ ಯಶೋಧ. ಯಶೋಧ ಅಂದತಕ್ಷಣ ಕೃಷ್ಣ ನೆನಪು ಆಗುತ್ತಾರೆ. ತಾಯಿಯ ಪ್ರೀತಿ, ನೆನಪು ವಾತ್ಸಲ್ಯ ಎಲ್ಲವೂ ನೆನಪು ಆಗುತ್ತದೆ. ಇಲ್ಲಿರುವ ಯಶೋಧ ಮಗುವಿಲ್ಲ. ಅಮ್ಮ ಎನಿಸಿಕೊಳ್ಳಲು ಕಾಯುತ್ತಿದ್ದಾಳೆ. ಎಂದರು.
ಸಹ ನಿರ್ದೇಶನ ಬಾಲಕೃಷ್ಣ ಯಾದವ್, ಶ್ರೀನಿವಾಸ್ ಸಿನಿ. ಸಹಾಯಕ ನಿರ್ದೇಶಕರು ಸಂತೋಷ್ ಆಶ್ರಯ, ಕೊಟ್ರೇಶಿ ಕನಸು. ನಿರ್ದೇಶನ ಟ್ರೈನಿಯಾಗಿ ರಘು ವೈ.ಜಿ. ಕಲೆ – ತಿರುಪತಿ, ಲೈಟಿಂಗ್ ಮಂಜೇಶ, ಯೂನಿಟ್ ಉಲ್ಲಾಸ ಅವರ ಕೆಲಸ ಈ ಚಿತ್ರಕ್ಕಿದೆ.
ಟ್ರೇಲರ್ ಮೂಲಕ ಪ್ರಚಾರದ ಕಹಳೆ ಮೊಳಗಿಸಿರುವ ಚಿತ್ರತಂಡ ಮಾರ್ಚ್ 1ಕ್ಕೆ ಸಿನಿಮಾವನ್ನು ಪ್ರೇಕ್ಷಕರ ಎದುರು ತರ್ತಿದೆ.