ಪೀಣ್ಯ ದಾಸರಹಳ್ಳಿ: ಅಟೋಚಾಲಕನಾಗಿ ಹಲವಾರು ಸಮಸ್ಯೆ ಎದುರಿಸಿದ ಅನುಭವ ನನಗಿದೆ ಅಟೋಚಾಲಕರು ಶ್ರಮ ಜೀವಿಗಳು ಅವರ ಸಮಸ್ಯೆಗಳು ಇಂದಿಗೂ ಸಹ ಬಗೆಹರಿದಿಲ್ಲ ಸರ್ಕಾರ ಇವರ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಸರ್ಕಾರಕ್ಕೆ ಕಾಂಗ್ರೆಸ್ ಮುಖಂಡ ಲಗ್ಗೆರೆ ನಾರಾಯಣಸ್ವಾಮಿ ಮನವಿ ಮಾಡಿದರು.
ಪೀಣ್ಯ ಎರಡನೇ ಹಂತದ ಶ್ರೀರಾಮ ದೇವಸ್ಥಾನದ ಆಟದ ಮೈದಾನದಲ್ಲಿ ಅಟೋಚಾಲಕರ ಕಣ್ಮಣಿ ನಟ ಶಂಕರ್ ನಾಗ್ ರವರ ಜನ್ಮದಿನಚರಣೆ ಅಂಗವಾಗಿ ಕರ್ನಾಟಕ ರಾಜ್ಯ ಚಾಲಕರ ಪರಿಷತ್ ಹಾಗು ಅರ್ಪೀತಾ ಸೇವಾ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಚಾಲಕರ ದಿನಾಚರಣೆಯಲ್ಲಿ ರಕ್ತದಾನ ಶಿಬಿರ,ಹಾಗು ನೇತ್ರಾ ತಪಾಸಣೆ, ಉಚಿತ ಶಸ್ತ್ರ ಚಿಕಿತ್ಸಾ ಶಿಬಿರವನ್ನು ಟ್ರಸ್ಟ್ ನ ಅಧ್ಯಕ್ಷ ಲಗ್ಗೆರೆ ನಾರಾಯಣ ಸ್ವಾಮಿ ಮತ್ತು ಮಾಜಿ ಬಿಬಿಎಂಪಿ ಸದಸ್ಯೆ ಮಂಜುಳಾ ನಾರಾಯಣಸ್ವಾಮಿ ಹಾಗು ಮಾಜಿ ನಗರಸಭೆ ಅಧ್ಯಕ್ಷ ಡಾ.ಅಂದಾನಪ್ಪ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.
ಅಟೋಚಾಲಕರಿಗೆ ಶಂಕರ್ ನಾಗ್ ಸ್ಪೂರ್ತಿಯಾಗಿದ್ದು ಯಾವುದೇ ಸಂಧರ್ಭದಲ್ಲೂ ಕೂಡ ನೆರೆವಿನ ಸಹಾಯಹಸ್ತ ನೀಡಲು ನಾರಾಯಣ ಸ್ವಾಮಿ ಕುಟುಂಬ ಸಿದ್ದವಿರುವುದಾಗಿ ತಿಳಿಸಿದರು.ಈ ಸಂಧರ್ಭದಲ್ಲಿ ಕರ್ನಾಟಕ ರಾಜ್ಯ ಚಾಲಕರ ಪರಿಷತ್ತು ಸಂಸ್ಥಾಪಕ ಅಧ್ಯಕ್ಷ ಸೋಮಶೇಖರ್ ನೇತೃತ್ವದಲ್ಲಿ ಶಂಕರ್ ನಾಗ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಚಾಲಕರು ಶಂಕರ್ ನಾಗ್ ಹುಟ್ಟು ಹಬ್ಬದ ಹಿನ್ನಲೆಯಲ್ಲಿ ರಕ್ತದಾನ ಮಾಡಿ ಸಾರ್ಥಕತೆ ಮೆರೆದರು.
ಮಾಜಿ ನಗರಸಭಾ ಸದಸ್ಯ ಅಂದಾನಪ್ಪ ಮಾತಾನಾಡಿ, ಚಾಲಕರು ಪ್ರಾಣ ಒತ್ತೆಇಟ್ಟು ಪ್ರಯಾಣಿಕರನ್ನು ಸುರಕ್ಷಿತ ವಾಗಿ ಮನೆ ತಲುಪಿಸುತ್ತಾರೆ ಇಂತವರಿಗೆ ಯಾವುದೇ ಭದ್ರತೆ ಇಲ್ಲದಿರುವುದು ದುರದೃಷ್ಟಕರ ಇತ್ತ ಸರ್ಕಾರ ಗಮನಹರಿಸಬೇಕು ಎಂದರು.
ಇದೇವೇಳೆ ಚಾಲಕರಿಗೆ ಸಮವಸ್ತ್ರ ಹಾಗು ನೆನೆಪಿನ ಕಾಣಿಕೆ ನೀಡಿ ಸನ್ಮಾನಿಸಿದರು.ಈ ಸಂಧರ್ಭದಲ್ಲಿ ಐಪಿ ನಗರದ ಲೋಕೇಶ್, ಚಲನಚಿತ್ರ ನಿರ್ದೇಶಕ ನಿರ್ಮಾಪಕ ಕಿಟ್ಟಿ, ನಟ ಅಡುಗೋಡಿ ಶ್ರೀನಿವಾಸ್, ಮುಖಂಡರಾದ ಲೋಕೇಶ್, ಭೀಮಣ್ಣ, ಮತ್ತಿತರರು ಭಾಗವಹಿಸಿದ್ದರು.