LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts

ಸಭಾಪತಿ ನಡೆ ಪಕ್ಷಪಾತ ರೀತಿಯ ಅನುಮಾನ ಕಾಡುತ್ತಿದೆ: ಜಗದೀಶ್ ಚಂದ್ರ

ಬೆಳಗಾವಿಯ ಅಧಿವೇಶನದಲ್ಲಿ ನಡೆದ ಸಿ.ಟಿ .ರವಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಪ್ರಕರಣದ ದುರ್ಘಟನೆಗಳ ಬಗ್ಗೆ " ಸದನದ ಗೌರವ ಕಾಪಾಡಿ '' ಎಂಬ ಘೋಷವಾಕ್ಯದೊಂದಿಗೆ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಪಕ್ಷದ ಕಚೇರಿಯ ಮುಂಭಾಗದಲ್ಲಿ ಇಂದು ಬೆಳಗ್ಗೆ ಏರ್ಪಡಿಸಿದ್ದ ಕಪ್ಪು ಪಟ್ಟಿ ಧರಿಸಿ ನಡೆದ ಖಂಡನಾ ಸಭೆಯಲ್ಲಿ ಮಾತನಾಡಿದ ಪಕ್ಷದ ಬೆಂಗಳೂರು ನಗರ ಪ್ರಧಾನ ಕಾರ್ಯದರ್ಶಿ ಜಗದೀಶ್ ಚಂದ್ರ "ಸಿ.ಟಿ. ರವಿ ರವರ ಸ್ತ್ರೀನಿಂದನೆ, ನಂತರದಲ್ಲಿ ನಡೆದ ಎಲ್ಲಾ ಘಟನೆಗಳು ಶಾಂತಿಪ್ರಿಯ ಕರ್ನಾಟಕಕ್ಕೆ ಕಪ್ಪುಮಸಿ ಬಳಿದಂತಾಗಿದೆ.

ಸದನದಲ್ಲಿಯೇ ಮಹಿಳೆ ಅದರಲ್ಲಿಯೂ ಪ್ರಮುಖ ಮಂತ್ರಿಯೊಬ್ಬರಿಗೆ ಈ ರೀತಿಯ ನಿಂದನೆ ಆಗುವುದಿದ್ದರೆ , ಮಹಿಳೆಯರಿಗೆ ಕರ್ನಾಟಕವು ಎಷ್ಟು ಸುರಕ್ಷಿತ ಎಂಬ ಅನುಮಾನ ಕಾಡುತ್ತದೆ. ಸಿ.ಟಿ. ರವಿ ವರ್ತನೆ ಯಾವುದೇ ನಾಗರೀಕ ಸಮಾಜ ಕ್ಷಮಿಸುವುದಿಲ್ಲ" ಎಂದು ಕಳವಳ ವ್ಯಕ್ತಪಡಿಸಿದರು.ಮುಂದುವರೆದು " ಸಭಾಪತಿಗಳು ತೆಗೆದುಕೊಂಡಿರುವ ರೂಲಿಂಗ್ ಸಹ ಪಕ್ಷಪಾತ ರೀತಿಯ ಅನುಮಾನ ರಾಜ್ಯದ ಜನತೆಗೆ ಕಾಡಲು ಆರಂಭಿಸಿದೆ. ಘಟನೆ ನಡೆದ ದಿನವೇ ರವಿಗೆ ಕ್ಲೀನ್ ಚಿಟ್ ನೀಡುವಂತಹ ಪ್ರಕ್ರಿಯೆಗಳು ಬಸವರಾಜ ಹೊರಟ್ಟಿ ಅವರಿಂದ ಆಗಿದೆ. ನಂತರದ ದಿನಗಳಲ್ಲಿ ಸಭಾಪತಿಗಳ ನೇತೃತ್ವದಲ್ಲಿ ಅಲ್ಲಿದ್ದ ಎಲ್ಲಾ ಶಾಸಕರುಗಳನ್ನು ಕರೆಸಿ ವಿಚಾರಣೆ ನಡೆಸದೆ ಪಕ್ಷಪಾತ ಎನ್ನುವ ರೀತಿಯಲ್ಲಿ ತಮ್ಮ ರುಲಿಂಗ್ ನೀಡಿರುವುದು ಅನುಮಾನ ಮೂಡುವಂತಿದೆ " ಎಂದು ಜಗದೀಶ್ ಚಂದ್ರ ಕಿಡಿಕಾರಿದರು.

"ಕೋಟ್ಯಾಂತರ ರೂ.ಜನತೆಯ ತೆರಿಗೆ ಹಣವನ್ನು ಅನವಶ್ಯಕವಾಗಿ ಈ ರೀತಿ ಸದನದ ಗೌರವ ಹಾಳು ಮಾಡುವ ರೀತಿಯಲ್ಲಿ ದುರ್ವಿನಿಯೋಗವಾದರೆ ಆಮ್ ಆದ್ಮಿ ಪಕ್ಷ ಎಂದಿಗೂ ಸಹಿಸುವುದಿಲ್ಲ , ಶಾಸಕರುಗಳು ತಮ್ಮ ವೈಯಕ್ತಿಕ ದ್ವೇಷಗಳನ್ನು ಸಾಧಿಸಲು ಚಿಂತಕರ ಚಾವಡಿಯಂತಹ ಮೇಲ್ಮನೆಯನ್ನು ಬಳಸಿಕೊಳ್ಳುತ್ತಿರುವುದು ನಿಜಕ್ಕೂ ದುರದೃಷ್ಟಕರ . ಇಂತಹ ಚಾರಿತ್ರ್ಯ ಹೀನ, ಭ್ರಷ್ಟ ವ್ಯಕ್ತಿಗಳು ಮೇಲ್ಮನೆಗೆ ಆಕಸ್ಮಿಕವಾಗಿ ಬರುತ್ತಿರುವುದನ್ನು ಎಲ್ಲ ಪಕ್ಷಗಳು ತಡೆಗಟ್ಟಬೇಕು " ಎಂದು ಜಗದೀಶ್ ಚಂದ್ರ ತಿಳಿಸಿದರು. ಪಕ್ಷದ ಅನೇಕ ಮುಖಂಡರುಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು