LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ನಿತೀಶ್ ರೆಡ್ಡಿ ಆಲ್ ರೌಂಡ್ ಆಟದ ಮುಂದೆ ಮಂಕಾದ ಕೋಲ್ಕತಾ

ಕೋಲ್ಕತಾದ ಈಡನ್ ಗಾರ್ಡನ್ ನಲ್ಲಿ ಏಪ್ರಿಲ್ 2ರ ಗುರುವಾರದಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 226 ರನ್ ಗಳಿಸಿದರು. ಇದಕ್ಕುತ್ತರವಾಗಿ ಕೋಲ್ಕತಾ ನೈಟ್ ರೈಡರ್ಸ್ ತಂಡ 16 ಓವರ್ ಗಳಲ್ಲಿ 161 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯಿತು.
ಇಂಪ್ಯಾಕ್ಟ್ ಪ್ಲೇಯರ್ ಆಗಿ ಕ್ರೀಸಿಗಿಳಿದಿದ್ದ ಫಿನ್ ಅಲೆನ್ ಅವರು ಕೇವಲ 7 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್ ಗಳನ್ನೊಳಗೊಂಡ 28 ರನ್ ಬಾರಿಸಿದಾಗ ಕೋಲ್ಕತಾ ಸುಲಭ ಗೆಲುವು ಸಾಧಿಸಬಹುದು ಎಂದೇ ಭಾಸವಾಗಿತ್ತು. ಆದೆರೆ ಅವರ ವಿಕೆಟ್ ಪತನವಾಗುತ್ತಲೇ ಒತ್ತಡ ಹೇರುವಲ್ಲಿ ಸನ್ ರೈಸರ್ಸ್ ಬೌಲರ್ ಗಳು ಸಫಲರಾದರು. ಆದರೂ ಅಂಗರಿಕ್ಷ್ ರಘುವಂಶಿ ಅವರು ಹೋರಾಟ ಜಾರಿಯಲ್ಲಿತ್ತು. ರಿಂಕು ಸಿಂಗ್ (25 ಎಸೆತದಲ್ಲಿ 35) ಮತ್ತು ಅವರ ನಡುವೆ ತಾಳಮೇಳದಲ್ಲಿ ವ್ಯತ್ಯಾಸವಾಗಿದ್ದರಿಂದ ರಘುವಂಶಿ ಅವರು ರನೌಟ್ ಆದರು. ಇದು ಸನ್ ರೈಸರ್ಸ್ ಕಡೆಗೆ ಸಂಪೂರ್ಣವಾಗಿ ಪಂದ್ಯ ವಾಲಲು ಕಾರಣವಾಯಿತು. 29 ಎಸೆತಗಳನ್ನು ಎದುರಿಸಿದ ಅಂಗರಿಕ್ಷ್ 6 ಬೌಂಡರಿ ಮತ್ತು 2 ಸಿಕ್ಸರ್ ಗಳನ್ನು ಒಳಗೊಂಡಿದ್ದ 52 ರನ್ ಬಾರಿಸಿದರು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಸನ್ ರೈಸರ್ಸ್ ತಂಡಕ್ಕೆ ಅಭಿಷೇಕ್ ಶರ್ಮಾ(21 ಎಸೆತದಲ್ಲಿ 48 ರನ್) ಮತ್ತು ಟ್ರಾವಿಸ್ ಹೆಡ್(21 ಎಸೆತದಲ್ಲಿ 46 ರನ್) ಅವರು ಭರ್ಜರಿ ಆರಂಭ ಒದಗಿಸಿದರು. ಬ್ಯಾಟಿಂಗ್ ಗೆ ಅನುಕೂಲಕರವಾಗಿದ್ದ ಈಡನ್ ಗಾರ್ಡನ್ಸ್ ಪಿಚ್ ನಲ್ಲಿ ಇವರಿಬ್ಬರು ಮೊದಲ ವಿಕೆಟ್ ಗೆ ಕೇವಲ 5.4 ಓವರ್ ಗಳಲ್ಲಿ 82 ರನ್ ಗಳ ಜೊತೆಯಾಟವಾಡಿದರು.
ಬಳಿಕ ಮಧ್ಯಮ ಕ್ರಮಾಂಕದಲ್ಲಿ ಹೆನ್ರಿಚ್ ಕ್ಲಾಸನ್ (35 ಎಸೆತಗಳಲ್ಲಿ 52 ರನ್) ನಿತೀಶ್ ಮಾರ್ ರೆಡ್ಡಿ(24 ಎಸೆತದಲ್ಲಿ 39) ಅವರ ಉಪಯುಕ್ತ ಕೊಡುಗೆಯಿಂದಾಗಿ ತಂಡ ದೊಡ್ಡ ಮೊತ್ತವನ್ನು ಪೇರಿಸುವಂತಾಯಿತು. ಬ್ಲೆಸ್ಸಿಂಗ್ ಮುಝರಬಾನಿ ಅವರು 4 ವಿಕೆಟ್ ಪಡೆದು ಮಿಂಚಿದರು. ವೈಭವ್ ಅರೋರಾ
2 ವಿಕೆಟ್ ಪಡೆದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು