ಗುಂಡ್ಲುಪೇಟೆ: ಎಪಿಎಂಸಿಯಲ್ಲಿ ಕಮಿಷನ್ ದಂಧೆ ಮತ್ತು ದಲ್ಲಾಳಿಗಳ ಹಾವಳಿ ತಪ್ಪಿಸಬೇಕು ಎಂದು ರೈತರು ಸಚಿವರಿಗೆ ಮನವಿ ಪತ್ರ ಸಲ್ಲಿಸಿದರುಪಟ್ಟಣದ ಪ್ರವಾಸಿ ಮಂದಿರದಲ್ಲಿ ರೈತ ಮುಖಂಡರು ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಸಚಿವರನ್ನು ಭೇಟಿ ಮಾಡಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ರೈತರು ರೈತರ ಸಾಲ ಮನ್ನಾ ಮಾಡಲಿ ಎಂದು ಬರ ಬರುವುದಕ್ಕೆ ಕಾಯುತ್ತಾರೆ ಎಂದು ನೀವು ಹೇಳಿಕೆ ನೀಡಿರುವುದು ಖಂಡನೀಯ ನೀವು ರೈತರ ಕ್ಷಮೆ ಕೇಳಬೇಕು ಎಂದು ಸಚಿವರಿಗೆ ಪ್ರಶ್ನೆ ಮಾಡಿದರು ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ನಾನು ಆ ಅರ್ಥದಲ್ಲಿ ಹೇಳಿಲ್ಲ ನನ್ನ ಹೇಳಿಕೆಯನ್ನು ತಿರುಚಲಾಗಿದೆ ರೈತರು ವೈಜ್ಞಾನಿಕ ಬೇಸಾಯ ಮಾಡಬೇಕು ಬರಗಾಲ ಎದುರಿಸುವ ಶಕ್ತಿ ಬೆಳೆಸಿಕೊಳ್ಳಬೇಕು.
ಹಾಗಾದಾಗ ಸಾಲ ಮನ್ನಾ ಪ್ರಸ್ತಾವನೆ ಬರುವುದಿಲ್ಲ ಎಂದು ಹೇಳಿದ್ದೆ ಎಂದು ಮನವರಿಕೆ ಮಾಡಿಕೊಟ್ಟರು ನಂತರ ಕಬ್ಬು ಬೆಳೆಗಾರರ ಮತ್ತು ಸಕ್ಕರೆ ಕಾರ್ಖಾನೆಗಳಿಂದ ನಡೆಯುತ್ತಿರುವ ಮೋಸದ ಬಗ್ಗೆ ಪ್ರಸ್ತಾಪಿಸಿ ಬೆಂಬಲ ಬೆಲೆ ಹಾಗೂ ಹಳೆಯ ಬಾಕಿ ಕೊಡಿಸುವಂತೆ ಒತ್ತಾಯಿಸಿದರು ಮತ್ತು ಎಪಿಎಂಸಿ ಮಾರುಕಟ್ಟೆಯಲ್ಲಿ ಬೆಳಿ ಚೀಟಿ ಕಮಿಷನ್ ದಂಧೆ ನಡೆಯುತ್ತಿದೆ ರೈತರಿಂದ ಶೇಕಡ 10% ಕಮಿಷನ್ ಪಡೆಯುತ್ತಿದ್ದಾರೆ ತಕ್ಷಣ ಇದು ನಿಲ್ಲಬೇಕು ಎಂದು ಒತ್ತಾಯಿಸಿದರು.
ನಂತರ ಮಡಹಳ್ಳಿ ಗುಡ್ಡ ಕುಸಿತದಲ್ಲಿ ಮೂವರು ಸಾವನಪ್ಪಿದರು ಆದರೆ ಆ ಕೇಸ್ ಮುಚ್ಚಿ ಹಾಕಲಾಯಿತು ಈ ಪ್ರಕರಣ ಕುರಿತು ಮತ್ತೆ ತನಿಖೆ ಆಗಬೇಕು ಆರೋಪಿಗಳಿಗೆ ಶಿಕ್ಷೆ ಆಗಬೇಕು ಎಂದು ರೈತರು ಆಗ್ರಹಿಸಿದರು. ಶಾಸಕರಾದ ಎಚ್ಎಮ್ ಗಣೇಶ್ ಪ್ರಸಾದ್ ಕಾಡ ಮಾಜಿ ಅಧ್ಯಕ್ಷ ನಂಜಪ್ಪ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್ ಎಸ್ ನಂಜುಂಡಪ್ರಸಾದ್ ಎಪಿಎಂಸಿ ಅಧ್ಯಕ್ಷರಾದ ರವಿ ಕಮರಹಳ್ಳಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಮರಿಸ್ವಾಮಿ ಬಿಬಿ ರಾಜಶೇಖರ್ ರೈತ ಸಂಘದ ಉಪಾಧ್ಯಕ್ಷರಾದ ಡಾ. ಗುರುಪ್ರಸಾದ್ ಜಿಲ್ಲಾಧ್ಯಕ್ಷರಾದ ಮಾಡ್ರಹಳ್ಳಿ ಮಹದೇವಪ್ಪ ಉಪಾಧ್ಯಕ್ಷರಾದ ಕುಂದು ಕೆರೆ ಸಂಪತ್ ರೈತ ಸಂಘದ ಪದಾಧಿಕಾರಿಗಳು ಹಾಗೂ ಎಪಿಎಂಸಿ ನಿರ್ದೇಶಕರು ಹಾಗೂ ಅಧಿಕಾರಿಗಳು ಇನ್ನಿತರರು ಉಪಸ್ಥಿತರಿದ್ದರು.