ಕೋಲಾರ: ಕಾರ್ಮಿಕರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನ ಆಗಬೇಕೆಂದು ಕವಿ ಲಕ್ಷ್ಮಯ್ಯ ಅಭಿಪ್ರಾಯಪಟ್ಟರು.ಕೋಲಾರ ನಗರದಲ್ಲಿ ಈ ನೆಲ ಈ ಜಲ ಕಲೆ ಮತ್ತುಸಾಂಸ್ಕøತಿಕ ಸಂಸ್ಥೆ ಹಮ್ಮಿಕೊಂಡಿದ್ದ ವಿಶ್ವ ಕಾರ್ಮಿಕರ ದಿನಾಚರಣೆಯಲ್ಲಿ ಭಾಗವಹಿಸಿ ಸನ್ಮಾನಿಸಿ ಮಾತನಾಡಿದರು. ಸರ್ಕಾರೇತರ ಸಂಸ್ಥೆಗಳಲ್ಲಿ ಶೇ.40 ರಷ್ಟುಕಾರ್ಮಿಕರು ಹಗಲಿರುಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ ಸೂಕ್ತವಾದ ಸೌಲಭ್ಯಗಳನ್ನು ನೀಡುವ ಕಡೆಸರ್ಕಾರ ಗಮನ ಹರಿಸಬೇಕು.
ಅವರನ್ನು ಸಮಾಜಮುಖಿ ಬದುಕಿನ ಕಡೆಗೆ ಹೊರತರಲು ಪ್ರಯತ್ನಿಸಬೇಕೆಂದರು.ಗಮನ ಮಹಿಳಾ ಸಮೂಹ ಸಂಸ್ಥೆಯ ಅಧ್ಯಕ್ಷೆ ಶಾಂತಮ ಮಾತಾನಾಡಿ ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖಪಾತ್ರ ವಹಿಸುವ ಕಾರ್ಮಿಕರಿಗೆ ರಾಜ್ಯದಲ್ಲಿ ಕನಿಷ್ಠ ಗೌರವವೂ ಸಲ್ಲುತ್ತಿಲ್ಲ. ಮಹಿಳಾ ಕಾರ್ಮಿಕರ ಸಮಸ್ಯೆಆಲಿಸಿ ಪರಿಹಾರ ಸೂಚಿಸುವ ನಿಟ್ಟಿನಲ್ಲಿ ಮಹತ್ವದ್ದಾಗಿರುವ ಕಾರ್ಮಿಕ ದಿನಾಚರಣೆ ರಾಜ್ಯ ಸರಕಾರದಿಂದ ನಡೆಯುತ್ತಿಲ್ಲ ಎಂದ ಬೇಸರ ವ್ಯಕ್ತಪಡಿಸಿದರು.
ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪಿ ನಾರಾಯಣಪ್ಪ ಮಾತಾನಾಡಿ ನಮ್ಮ ಸುತ್ತ-ಮುತ್ತಲಿನ ನರಸಾಪುರದ ಸಣ್ಣ, ಮಧ್ಯಮ ಕೈಗಾರಿಕೆಗಳಲ್ಲಿ ಕೆಲಸ ಮಾಡುವವರು. ಆಟೊ ರಿಕ್ಷಾ ಚಾಲಕರು, ಕಟ್ಟಡ ನಿರ್ಮಾಣದಲ್ಲಿ ತೊಡಗಿರುವವರು, ನಾನಾ ಸಂಘ, ಸಂಸ್ಥೆ, ಸರಕಾರಿ ಕಚೇರಿಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವವರು ಸೇರಿದಂತೆ ಕೋಲಾರ ಜಿಲ್ಲೆಯೊಂದರಲ್ಲೇ 3 ಲಕ್ಷಕ್ಕೂ ಹೆಚ್ಚು ಸಂಘಟಿತ ಮತ್ತುಅಸಂಘಟಿತ ವಲಯದ ಕಾರ್ಮಿಕರಿದ್ದಾರೆ. ಅವರ ಸಮಸ್ಯೆಗಳನ್ನು ಬಗೆ ಹರಿಸಲು ಸರ್ಕಾರ ಮುಂದಾಗಬೇಕೆಂದರು.
ಗಾಯಕ ವೆಂಕಟಾಚಲಪತಿ ಮಾತಾನಾಡಿ ಸರಕಾರ ಕಾರ್ಮಿಕರ ಅಭಿವೃದ್ಧಿಗಾಗಿ ನಾನಾ ಯೋಜನೆಗಳನ್ನು ಜಾರಿಗೊಳಿಸಿದೆ. ಅನ್ ಸ್ಕಿಲ್ಡ್ ಕಾರ್ಮಿಕರಿಗೆ ಮಾಸಿಕ ಕನಿಷ್ಠ 14 ಸಾವಿರ ರೂ. ವೇತನ, ಕಾರ್ಮಿಕರ ಮಕ್ಕಳಿಗೆ ಶಿಕ್ಷಣಕ್ಕೆ ಸಹಾಯಧನ, ಮಹಿಳಾ ಕಾರ್ಮಿಕರಿಗೆ ಹೆರಿಗೆ ಭತ್ಯೆ, ಕಾರ್ಮಿಕರ ಪಿಂಚಣಿ ಯೋಜನೆ ಮೊದಲಾಗಿ ಹತ್ತಾರು ಯೋಜನೆಗಳೇನೋ ಇವೆ. ಆದರೆ ಬಹಳಷ್ಟು ಅರ್ಹ ಕಾರ್ಮಿಕರಿಗೆ ಇವುಗಳ ಸೌಲಭ್ಯ ಸಿಗುತ್ತಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಬಂಗಾರಪೇಟೆಯ ವಿವೇಕಾನಂದ, ಕೋಲಾರದ ರಾಮಪ್ಪ, ಜಯರಾಂ, ಜಂಗಮ ಗುರ್ಜೇನಹಳ್ಳಿ ಪ್ರಸಾದ್ ಮುಂತಾದ ಪೌರಕಾರ್ಮಿಕರನ್ನು ಗೌರವಿಸಿ ಸನ್ಮಾನಿಸಲಾಯಿತುಕಾರ್ಯಕ್ರಮದಲ್ಲಿ ಕವಿ ಡಾ. ಶರಣಪ್ಪ ಗಬ್ಬೂರು, ಕುಡುವನಹಳ್ಳಿ ಗಣೇಶಪ್ಪ, ಕೋಲಾರ ಪೋಸ್ಟ್ ಮಾಸ್ಟರ್ ಆದ ಆಶಾ, ನಿವೃತ್ತ ಪೊಲಿಸ್ ಅಧಿಕಾರಿ ರವೀಂದ್ರನಾಥ ಮುಂತಾದವರು ಉಪಸ್ಥಿತರಿದ್ದರು.