ಆನೇಕಲ್: ಆನೇಕಲ್ ತಾಲೂಕಿನ ಗಟ್ಟಹಳ್ಳಿ ಗ್ರಾಮದಲ್ಲಿ ಚಿರತೆ ಮನೆಯ ಕಾಂಪೌಂಡ್ ಒಳಗೆ ಬಂದು ಗೂಡಿನಲ್ಲಿ ಇದ್ದ ಕೋಳಿಗಳನ್ನು ತಿಂದು ಹಾಕಿದ್ದು ಗ್ರಾಮದಲ್ಲಿ ಚಿರತೆ ಆತಂಕ ಶುರುವಾಗಿದೆ.
ಮಂಗಳವಾರ ರಾತ್ರಿ 12 ಗಂಟೆ ಸುಮಾರಿಗೆ ಆನೇಕಲ್ ತಾಲೂಕಿನ ಗಟ್ಟಹಳ್ಳಿ ಗ್ರಾಮದ ಮನೆಯ ಕಾಂಪೌಂಡ್ ಒಳಗೆ ಬಂದು 11 ಕೋಳಿಗಳನ್ನು ತಿಂದು ಹಾಕಿರುವ ಚಿರತೆ ಎರಡು ಕೋಳಿಗಳನ್ನು ಅರ್ಧ ತಿಂದು ಹಾಗೆ ಬಿಟ್ಟು ಹೋಗಿದ್ದು ಮನೆಯ ಮಾಲೀಕ ಸೀನಪ್ಪ ಬೆಳಿಗ್ಗೆ ಎದ್ದು ಹೊರಬಂದು ನೋಡಿದಾಗ ಕೋಳಿಗಳನ್ನು ಅರ್ಧ ತಿಂದು ಬಿಟ್ಟು ಹೋಗಿದ್ದು ಕೂಡಲೇ ಅಕ್ಕಪಕ್ಕದ ಮನೆಗೆ ಮಾಹಿತಿ ತಿಳಿಸಿದ್ದಾರೆ ಪಕ್ಕದ ಮನೆಯ ಸಿಸಿಟಿ ಬಿ ಒಂದರಲ್ಲಿ ಪರಿಶೀಲನೆ ನಡೆಸಿದಾಗ ರಾತ್ರಿ 12 ಗಂಟೆ ಸುಮಾರಿಗೆ ಚಿರತೆ ಓಡಾಡಿರುವ ದೃಶ್ಯ ಕಂಡು ಬಂದಿದೆ.
ಕೂಡಲೇ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದಾರೆ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಕಂದಾಯ ಅಧಿಕಾರಿಗಳು ಗ್ರಾಮದಲ್ಲಿ ಚಿರತೆ ಓಡಾಡಿರುವ ಮನೆ ಹಾಗೂ ಬೀದಿಗಳಲ್ಲಿ ಪರಿಶೀಲನೆ ನಡೆಸಿದ್ದು, ಗ್ರಾಮದ ಅಕ್ಕಪಕ್ಕದಲ್ಲಿ ಚಿರತೆ ಓಡಾಡಿರುವುದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಖಚಿತವಾಗಿದೆ.
ಕೂಡ್ಲು ಬಳಿ ಚಿರತೆ ಕಾಣಿಸಿಕೊಂಡು ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿಯುವಾಗ ಅರವಳಿಕೆ ಚುಚ್ಚುಮದ್ದು ನೀಡುವಲ್ಲಿ ಎಡವಟ್ಟು ಆಗಿದ್ದು ಚಿರತೆ ಮೃತಪಟ್ಟಿತ್ತು ಇದಾದ ಬಳಿಕ ಈಗ ಕೂಡ್ಲು ಪಕ್ಕದಲ್ಲಿರುವ ಗಟ್ಟಹಳ್ಳಿ ಬಳಿ ಮತ್ತೆ ಚಿರತೆ ಕಾಣಿಸಿಕೊಂಡಿದ್ದು ಗ್ರಾಮದಲ್ಲಿ ಯಾರ ಬಾಯಲ್ಲಿ ನೋಡಿದರೂ ಚಿರತೆಗೆದ್ದೇ ಮಾತು ಶುರುವಾಗಿದ್ದು ಚಿರತೆಯನ್ನು ಆದಷ್ಟು ಬೇಗ ಸೆರೆಹಿಡಿದು ಗ್ರಾಮಸ್ಥರಿಗೆ ನೆಮ್ಮದಿಯಾಗಿ ಓಡಾಡುವಂತೆ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಗಟ್ಟಹಳ್ಳಿ ಸೀನಪ್ಪ ಕಾಂಗ್ರೆಸ್ ಮುಖಂಡರು- ಮಂಗಳವಾರ ರಾತ್ರಿ ಗ್ರಾಮದಲ್ಲಿ ಚಿರತೆ ಅಲ್ಲಲ್ಲಿ ಓಡಾಡಿದ್ದು ಬಳಿಕ ಮನೆಯ ಒಳಗಿನ ಕಾಂಪೌಂಡ್ ನಲ್ಲಿ ಗೂಡಿನಲ್ಲಿ ಇದ್ದ ಕೋಳಿಗಳನ್ನು ತಿಂದು ಹಾಕಿದ್ದು ಅರಣ್ಯ ಇಲಾಖೆ ಅಧಿಕಾರಿಗಳು ಆದಷ್ಟು ಬೇಗ ಬೋನ್ ಇಟ್ಟು ಚಿರತೆಯನ್ನು ಸೆರೆ ಹಿಡಿಯಬೇಕು.ಅರಣ್ಯ ಇಲಾಖೆ ಅಧಿಕಾರಿಗಳು ರೌಂಡ್ಸ್- ಗ್ರಾಮದಲ್ಲಿ ಆನೇಕಲ್ ವಲಯ ಅರಣ್ಯ ಇಲಾಖೆ ಅಧಿಕಾರಿಗಳಾದ ಬಾಲಕ್ರಷ್ಣ ಹಾಗೂ ಮುನಿರಾಜು ಸೇರಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮದಲ್ಲಿ ಬೀಡು ಬಿಟ್ಟಿದ್ದು ನೀಲಗಿರಿ ತೋಪು ಹಾಗೂ ಬಡಾವಣೆಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.
ಹಲವು ದಿನಗಳಿಂದ ಚಿರತೆ ಓಡಾಡಿರುವ ಸಾಧ್ಯತೆ- ಹಲವು ದಿನಗಳಿಂದ ಚಿರತೆ ಗ್ರಾಮದ ಬಳಿ ನೂರಾರು ನಾಯಿಗಳು ಇರುವುದರಿಂದ ಈ ಭಾಗದಲ್ಲಿ ಓಡಾಡಿರುವ ಸಾಧ್ಯತೆ ಹೆಚ್ಚಾಗಿದ್ದು ಕೋಳಿಗಳನ್ನು ತಿಂದು ಹಾಕಿರುವುದರಿಂದ ಚಿರತೆ ಗ್ರಾಮಕ್ಕೆ ಬರುತ್ತಿರುವುದು ಬೆಳಕಿಗೆ ಬಂದಿದೆ.
ಶಾಸಕರಿಂದ ಬೋನ್ ಇಡಲು ಸೂಚನೆ- ಚಿರತೆ ಗ್ರಾಮದಲ್ಲಿ ಓಡಾಡಿ ಆತಂಕ ಸೃಷ್ಟಿ ಮಾಡಿರುವ ಹಿನ್ನೆಲೆ ಯಾವುದೇ ತೊಂದರೆ ಆಗಬಾರದು ಎನ್ನುವ ನಿಟ್ಟಿನಲ್ಲಿ ಹಿರಿಯ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಆನೇಕಲ್ ಶಾಸಕ ಬಿ ಶಿವಣ್ಣ ಬೋನ್ ಇಟ್ಟು ಚಿರತೆಯನ್ನು ಸೆರೆ ಹಿಡಿಯಲು ಸೂಚನೆ ನೀಡಿದ್ದಾರೆ.