ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಾರ್ಥಕ 50 ವರ್ಷ ಪೂರೈಸಿದ ಬಿ.ಎಸ್. ಯಡಿಯೂರಪ್ಪ ಅವರಿಗೆ ಇಂದು ಅಭಿಮಾನೋತ್ಸವ ಆಯೋಜನೆ ಮಾಡಲಾಗಿದೆ.ಮಾಜಿ ಮುಖ್ಯಮಂತ್ರಿ. ಕೇಂದ್ರ ಸಂಸದೀಯ ಹಾಗೂ ಚುನಾವಣಾ ಮಂಡಳಿ ಸದಸ್ಯರೂ ಆಗಿರುವ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯ ರಾಜಕಾರಣದಲ್ಲಿ 50 ವರ್ಷ ಪೂರೈಸಿರುವುದರಿಂದ ಚಿತ್ರದುರ್ಗದ ಮಾದಾರ ಚೆನ್ನಯ್ಯ ಪೀಠದ ಪಕ್ಕದಲ್ಲಿ ಬೃಹತ್ ವೇದಿಕೆಯಲ್ಲಿ ಅಭಿಮಾನೋತ್ಸವ ಕಾರ್ಯಕ್ರಮಕ್ಕೆ ಸಿದ್ಧತೆಗೊಂಡಿದೆ. ಇಂದು ಮಧ್ಯಾಹ್ನ 2 ಘಂಟೆಗೆ ಕಾರ್ಯಕ್ರಮ ಆರಂಭವಾಗಿದ್ದು, ಬೃಹತ್ ವೇದಿಕೆಯಲ್ಲಿರಾಜ್ಯ ಬಿಜೆಪಿ ನಾಯಕರುಗಳು ಯಡಿಯೂರಪ್ಪರಿಗೆ ಅಭಿಮಾನ ಮೇರೆಯಲಿದ್ದಾರೆ. ಇನ್ನು ಕಾರ್ಯಕ್ರಮಕ್ಕೆ ಮೆರಗು ತುಂಬಲು, ಯಡಿಯೂರಪ್ಪರನ್ನು ಸನ್ಮಾನಿಸಲು ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಆಗಮಿಸಲಿದ್ದಾರೆ.ಕಾರ್ಯಕ್ರಮ ಉದ್ಘಾಟಿಸಿ, ಯಡಿಯೂರಪ್ಪರಿಗೆ ಅಭಿನಂದನೆ ಸಲ್ಲಿಸಿ, ಸನ್ಮಾನಿಸಲಿದ್ದಾರೆ.
ಇನ್ನು ಕಾರ್ಯಕ್ರಮಕ್ಕೆ ಈಗಾಗಲೇ ಸಕಲ ಸಿದ್ಧತೆಗಳನ್ನು ಮಾಡಿರುವ ರಾಜ್ಯ ಬಿಜೆಪಿ ಘಟಕ. ಕಾರ್ಯಕ್ರಮಕ್ಕಾಗಿಯೇ ಸ್ವಾಗತ ಸಮಿತಿ ರಚಿಸಿ, ಅದಕ್ಕೆ ಸದಸ್ಯರನ್ನು ನೇಮಿಸಿ ಕಾರ್ಯನಿರ್ವಹಣೆ ಮಾಡಿ ಬಿಜೆಪಿ ಘಟಕ ಮಾಡಿದೆ. ಡಾ.ಪ್ರಭಾಕರ್ ಕೋರೆ ನೇತೃತ್ವದಲ್ಲಿ ಸಮಿತಿ ರಚನೆಯಾಗಿದೆ.



