ಗೌರಿಬಿದನೂರು: ಆಂಧ್ರದ ಲೇಪಾಕ್ಷಿ ಯಲ್ಲಿರುವ ಪ್ರಾಚೀನ ಶ್ರೀ ಲಕ್ಷ್ಮಿ ತಿರುಮಲದೇವರಪ್ಪ ದೇವಾಲಯದಅಭಿವೃದ್ದಿ ಸಮಿತಿಯ ಮನವಿ ಮೇರೆಗೆ ಧರ್ಮಸ್ಥಳದಮಂಜುನಾಥೇಶ್ವರ ದೇವಾಲಯದ ಧರ್ಮಾಧಿಕಾರಿ ಶ್ರೀ ಡಾ.ಪದ್ಮವಿಭೂಷಣ ವೀರೇಂದ್ರ ಹೆಗ್ಡೆ ರವರು ದೇವಾಲಯದ ಜೀರ್ಣೂಧ್ಧಾರಕ್ಕಾಗಿ ಒಂದು ಲಕ್ಷ ರೂಗಳನ್ನು ನೀಡಿದ್ದರು.
ಇಂದು ಧರ್ಮಸ್ಥಳ ಸಂಸ್ಥೆಯ ಜಿಲ್ಲಾ ನಿರ್ದೇಶಕರಾದ ಪ್ರಶಾಂತ್ ಹಾಗು ಯೋಜನಾಧಿಕಾರಿ ಗಳಾದ ನಾಗರಾಜ ನಾಯ್ಕ ರವರುಗಳು ಲೇಪಾಕ್ಷಿಯ ದೇವಾಲಯದಲ್ಲಿ ಡಿಡಿ ಯನ್ನು ದೇವಾಲಯ ಅಭಿವೃದ್ದಿ ಸಮಿತಿ ಆಧ್ಯಕ್ಷರಾದ ಅಂಜಿನಪ್ಪ ಹಾಗೂ ಕಾರ್ಯದರ್ಶಿ ನಾಗರಾಜು ರವರಿಗೆ ಹಸ್ತಾಂತರಿಸಿದರು.
ದೇವಾಲಯವನ್ನು ಅಭಿವೃದ್ದಿ ಪಡಿಸಿ ಭಕ್ತರಿಗೆ ಸೌಲಭ್ಯಗಳನ್ನು ಕಲ್ಪಿಸ ಬೇಕೆಂದು ಹಿತ ನುಡಿಗಳನ್ನು ನುಡಿದರು.ಈ ಕಾರ್ಯಕ್ರಮದಲ್ಲಿ ಮುಖಂಢ ಲೇಪಾಕ್ಷಿ ರಾಮಪ್ರಸಾದ್, ತಿರುಮಲದೇವರಪ್ಪ ವಂಶಸ್ಥರಾದ ಲೇಪಾಕ್ಷಿ ತುಮಲದೇವರಪ್ಪ ಶ್ರೀ ಕಿರಣ್, ಲೇಪಾಕ್ಷಿ ಪಾಂಡುರಂಗ, ಕಾಂಗ್ರೆಸ್ ಮುಖಂಢ ಆದಿಮೂರ್ತಿ, ಮುಂತಾದವರಿದ್ದರು.