ಚಳ್ಳಕೆರೆ: ನಗರಸಭೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕ್ಲೀನರ್ಸ್, ಲೋಡರ್ಸ್, ಸಹಾಯಕರು ಹಾಗೂ ವಾಹನ ಚಾಲಕರು ಮತ್ತು ಹೊರಗುತ್ತಿಗೆ ನೌಕರರು ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ. ತಮ್ಮ ಕೆಲಸಗಳಿಗೆ ಹೋಗದೆ. ನಗರ ಸಭೆಯ ಕಚೇರಿ ಮುಂದೆ ಅನಿರ್ಧಿಷ್ಟ ಕಾಲ ಧರಣಿ ನಡೆಸಿದರು.
ಈ ಧರಣಿಯ ನೇತೃತ್ವವನ್ನು ವಹಿಸಿದ್ದ. ನಗರಸಭೆಯ ಲೋಡರ್ಸ್, ಕ್ಲೀನರ್ಸ್ ಸಹಾಯಕರ ಸಂಘದ ತಾಲ್ಲೂಕು ಅಧ್ಯಕ್ಷ ಪ್ರಸನ್ನ ಕುಮಾರ್ ಪತ್ರಕರ್ತ ರೊಂದಿಗೆ ಮಾತನಾಡಿ. ಕಾಂಗ್ರೆಸ್ ಸರ್ಕಾರವು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಕರ್ತವ್ಯ ನಿರ್ವಹಿಸು ತ್ತಿರುವ. ಎಲ್ಲಾ ಹೊರಗುತ್ತಿಗೆ ನೌಕರರಾದ ಕ್ಲೀನರ್ಸ್, ಲೋಡರ್ಸ್ ಹಾಗೂ ಸಹಾಯಕರು ಮತ್ತು ವಾಹನ ಚಾಲಕರು ಇವರನ್ನು ಗುತ್ತಿಗೆ ಪದ್ಧತಿಯ ಬದಲು ನೇರ ವೇತನ ಪಾವತಿಗೆ ತರಬೇಕು.
1964 ಪೌರಆಡಳಿತೆ ಕಾಯ್ದೆ ಪ್ರಕಾರ ಇವರನ್ನು ಕಾರ್ಮಿಕರೆಂದು ಒಪ್ಪಿರುವುದರಿಂದ. ಹಾಲಿ ನೇಮಕಾತಿಯಲ್ಲಿ ಇವರಿಗೆ ಅವಕಾಶ ಕಲ್ಪಿಸಬೇಕು. ಮಾಸಿಕ 2000?ಸಾವಿರ ಸಂಕಷ್ಟ ಭತ್ಯೆಯನ್ನು ಸ್ವಚ್ಛತೆಯಲ್ಲಿ ತೊಡೆದುಕೊಂಡಿರುವ ಎಲ್ಲಾ ಕಾರ್ಮಿಕರಿಗೆ ವಿತ್ತರಿಸಬೇಕು.
ನಗರೋತ್ತಾನ ಯೋಜನೆ ಅಡಿಯಲ್ಲಿ ಕ್ಲೀನರ್ಸ್, ಲೀಡರ್ಸ್ ಹಾಗೂ ಸಹಾಯಕರು ಮತ್ತು ವಾಹನ ಚಾಲಕರು ಹಾಗೂ ಹೊರಗುತ್ತಿಗೆ ನೌಕರರಿಗೆ ನಿವೇಶನ ಖರೀದಿಸಲು ಸಹಾಯಧನ ನೀಡಬೇಕು.
ರಾಜ್ಯದ ಎಲ್ಲಾ ಜಿಲ್ಲಾ ತಾಲೂಕುಗಳಲ್ಲಿ ಮೇಲ್ಕಂಡ ಬೇಡಿಕೆಗಳು ಈಡೇರಿಸಿದರು. ನಮ್ಮ ಚಳ್ಳಕೆರೆ ನಗರಸಭೆಯಲ್ಲಿ ಮಾತ್ರ ನಮ್ಮ ಬೇಡಿಕೆಗಳು ಈಡೇರಿಸಿರುವುದಿಲ್ಲ . ಅನೇಕ ಬಾರಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ.ರಘುಮೂರ್ತಿ ಸಾಹೇಬರನ್ನು ಭೇಟಿ ಮಾಡಿ. ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಪತ್ರವನ್ನು ಕೊಟ್ಟಿರುತ್ತೇವೆ.
ಶಾಸಕರು ಈ ಸಂಬಂಧ ನಗರಸಭೆ ಪೌರಯುಕ್ತರಿಗೆ ಈ ಸಮಸ್ಯೆಯನ್ನು ಪರಿಶೀಲಿಸಿ ಬಗೆಹರಿಸಲು ಸೂಚಿಸಿದ್ದಾರೆ. ಆದರೆ ಪೌರಾಯುಕ್ತರನ್ನು ನಾವು ಕೇಳಿದರೆ. ಏನೇನೋ ಸಾಬೂಬ್ ಹೇಳಿ ವಿಳಂಬ ಮಾಡುತ್ತಿದ್ದಾರೆ. ಆದ್ದರಿಂದ ನಾವು ನಮ್ಮ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವವರೆಗೂ ಅನುರ್ದಿಷ್ಟಕಾಲ ಮುಷ್ಕರ ಮಾಡುತ್ತೇವೆ ಎಂದು ಹೇಳಿದರು.
ಈ ಮುಷ್ಕರದಲ್ಲಿ ಕಾರ್ಯದರ್ಶಿ ಹನುಮಂತರಾಯ, ನಗರಸಭೆ ಗುತ್ತಿಗೆ ವಾಹನ ಚಾಲಕರ ಸಂಘದ ಅಧ್ಯಕ್ಷ ಶ್ರೀನಿವಾಸ್, ಕಾರ್ಮಿಕರಾದ ಮಂಜುನಾಥ್, ಕೆಂಪರಾಜು, ಪ್ರತಾಪ್, ರಾಜಶೇಖರ್,ರುದ್ರಮುನಿ, ವೀರೇಶ್, ರಾಜ, ಮಂಗಳಮ್ಮ ಉಮೇಶ್, ಆರಿಫ್, ಬಸುರಾಜ್ ಇತರೆ ಕಾರ್ಮಿಕರು ಭಾಗವಹಿಸಿದ್ದರು.