ಬೆಂಗಳೂರು: ನಗರದ ಲಗ್ಗೆರೆ ಹೊರೆ ವರ್ತುಲರಸ್ತೆಯಲ್ಲಿರುವ, ಶ್ರೀ ಸಾಯಿ ಮಾನಸ ಗುರುಕುಲ ಬುದ್ದಿಮಾಂಧ್ಯ ಮಕ್ಕಳ ಶಾಲೆಯ 9ನೇ ವಾರ್ಷೀಕೋತ್ಸವವು ಲಗ್ಗೆರೆಯ ಬಸವೇಶ್ವರ ಭವನದಲ್ಲಿ ಜರುಗಿತು.
ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಶ್ರೀನಾಗದುರ್ಗಪೀಠ ಮಹಾಸಂಸ್ಥನದ ಪೀಠಾಧಿಪತಿ ಡಾ. ಶಾಕ್ತ್ಯಂ ಶ್ರೀಶಕ್ತಿಬಾಲ ಅಮ್ಮನವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ವಿಶೇಷ ಮಕ್ಕಳು ಶ್ರೀಸಾಮಾನ್ಯ ಮನುಷ್ಯರಿಗಿಂತ ಹೆಚ್ಚಿನ ಬುದ್ದಿಶಾಲಿಗಳಾಗಿ ಸೂಕ್ಷ್ಮತೆಯನ್ನು ಅರಿಯುತ್ತಾರೆ, ಭಗವಂತನು ಇನ್ನು ಹೆಚ್ಚಿನ ಉತ್ಸಾಹ ನೀಡಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.
ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿದ್ದ ಬೆಂಗಳೂರು ಜಸದೇವ ಆಸ್ಪತ್ರೆಯ ಖ್ಯಾತ ಹೃದ್ರೋಗ ತಜ್ಞರು, ಅಂತರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ಡಾ: ಹೆಚ್. ಎಸ್. ನಟರಾಜ ಶೆಟ್ಟಿರವರು ಈ ವಿಶೇಷ ಮಕ್ಕಳು 14 ಮತ್ತು 17ರ ವಯೋಮಿತಿಯಲ್ಲಿ ಜಾವಲಿನ್, 50 ಮೀಟರ್ ಓಟ ಹಾಗೂ ಗುಂಡು ಎಸೆತದಲ್ಲಿ 14ಜನ ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವುದು ಶ್ಲಾಘನೀಯ ಎಂದು ಪ್ರಶಸ್ತಿ ವಿಜೇತರಿಗೆ ಬಹುಮಾನ ನೀಡಿ ಅಭಿನಂದಿಸಿದರು.
ಮಹಾತ್ಮ ಜ್ಯೋತಿ ಬಾಪುಲೆ ಪ್ರಶಸ್ತಿ ಪುರಸ್ಕೃತರಾದ ಬಳೇಪೇಟೆ ವೆಂಕಟೇಶ್ ರವರು ಇಂತ ವಿಶೇಷ ಮಕ್ಕಳಿಗೆ ಆಟ-ಪಾಠದ ತರಬೇತಿ ನೀಡಿ ಉತ್ತಮ ಆಹಾರದೊಂದಿಗೆ ವಸತಿ ಸೌಲಭ್ಯ ಕಲ್ಪಿಸಿರುವ ಸಂಸ್ಥೆಯ ಮುಖ್ಯಸ್ಥರಾದ ನಾಗವೇಣಮ್ಮರಾಮಪ್ರಸಾದ್ ಕುಟುಂಬಸ್ಥರಿಗೆ ತುಂಬು ಹೃದಯದ ಅಭಿನಂದನೆ ಸಲ್ಲಿಸಿದರು.
ಬೆಂಗಳೂರು ಜಿಲ್ಲಾ ಅಂಗವಿಕಲ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಕಲ್ಯಾಣ ಇಲಾಖೆ ಅಧಿಕಾರಿಗಳಾದ ಯಮುನರವರು ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಈ ವಿಶೇಷ ಮಕ್ಕಳಲ್ಲಿ ಓದುವುದರಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದು ಕ್ರೀಡೆಗಳಲ್ಲಿ ಬಾಗವಹಿಸಿ ಪ್ರಥಮ ಸ್ಥಾನ ಗಳಿಸಿರುವುದು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹಾಗೂ ನೃತ್ಯಗಳಲ್ಲಿ ಉತ್ತಮ ಅಭಿನಯ ನೀಡಿದ್ದಾರೆ ಇಂತ ಮಕ್ಕಳಿಗೆ ಸರ್ಕಾರದಿಂದ ಸಿಗುವ ಎಲ್ಲಾ ಸವಲತ್ತುಗಳನ್ನು ಒದಗಿಸುತ್ತಿದ್ದೇನೆ ಅದರಂತೆ ಇವರ ಉತ್ತೇಜನಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಹಾಗೂ ಸಮಾಜದ ಗಣ್ಯರು ಆರ್ಥಿಕ ಮತ್ತು ಪೀಠೋಪಕರಣಗಳು, ಪಠ್ಯಪುಸ್ತಕಗಳನ್ನು ನೀಡುವುದರಿಂದ ಇಂತಹ ಸಂಸ್ಥೆಗಳನ್ನು ಉತ್ತಮವಾಗಿ ಕಾರ್ಯ ನಿರ್ವಹಿಸಲು ಸಹಾಯಕಾರಿಯಾಗುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಸ್ಥಾಪಕಿ ನಾಗವೇಣಮ್ಮ ರಾಮಪ್ರಸಾದ್, ಡಾ. ವಿಜಯಲಕ್ಷ್ಮಿ, ಅರುಣ್, ಗುರುಚರಣ್, ಅನೂಪ್, ಶ್ರೀ ಸಾಯಿ ಮಾನಸ ಗುರುಕುಲ ಬುದ್ದಿಮಾಂಧ್ಯ ಮಕ್ಕಳ ಶಾಲೆಯ ಜಂಟಿ ಕಾರ್ಯದರ್ಶಿ ಸ್ನೇಹರಾಮಪ್ರಸಾದ್ , ರವಿ, ವೆಂಕಟೇಶ್ ನಾಯ್ಡು, ಸ್ವಾಗತ ಭಾಷಣ ಸುಧಾ, ನಿರೂಪಣೆ ಮಂಜುನಾಥ್ ರವರಿಂದ ನೆರವೇರಿತು.
ವರದಿ: ಜಿ. ಎಲ್. ಸಂಪಂಗಿರಾಮುಲು