ಚಂದಾಪುರ: ರಸ್ತೆ ಬದಿಯ ಇರುವ ಅನಧಿಕೃತ ಅಂಗಡಿಗಳಿಂದ ದಿನ ನಿತ್ಯ ಟ್ರಾಫಿಕ್ ಕರಿಕಿರಿ ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟಾಗಿತ್ತಿದೆ ಇದಕ್ಕೆ ಪರಿಹಾರ ಕಾಣಲು ಸೂರ್ಯ ಸಿಟಿಯ ಪೊಲೀಸ್ ಅಧಿಕಾರಿಗಳ ಸಹಾಯದಿಂದ ತೆರವು ಕಾರ್ಯಚಾರಣೆ ಮಾಡಲಾಗುತಿದೆ ಎಂದು ಪುರಸಭೆಯ ಮುಖ್ಯಾಧಿಕಾರಿ ಶ್ರೀನಿವಾಸ್ ತಿಳಿಸಿದರು.
ಅವರು ಚಂದಾಪುರ ಪುರಸಭೆ ಕಚೇರಿ ಸಮೀಪವಿರುವ ಅತ್ತಿಬೆಲೆ ರಸ್ತೆಯಲ್ಲಿ ಇತ್ತೀಚೆಗೆ ಟ್ರಾಪಿಕ್ ಸಮಸ್ಯೆ ಹೆಚ್ಚಾಗಿದ್ದು ಮನಗೊಂಡು ಇಂದು ಸೂರ್ಯನಗರ ಪೊಲಿಸರು ಹಾಗೂ ಚಂದಾಪುರ ಪುರಸಭೆ ಅದಿಕಾರಿಗಳು ಜಂಟಿ ಕಾರ್ಯಾಚರಣೆ ಸಹ ಯೋಗದೊಂದಿಗೆ ಹಮ್ಮಿಕೊಂಡಿದ್ದ ಅಂಗಡಿಗಳನ್ನು ತೆರವುಗೊಳಿಸಿ ಮಾತನಾಡಿದರು.
ಈ ಕಾರ್ಯಚರಣೆಲ್ಲಿ ನಾಗರೀಕರಿಗೆ ಮತ್ತು ಸಾರ್ವಜನಿಕರಿಗೆ ಒಳ್ಳೆಯದು ಆಗಬೇಕು ಎಂಬುದಕ್ಕೆ ಪುರಸಭೆ ಮತ್ತು ಪೊಲೀಸರು ಉದ್ದೇಶವಾಗಿದೆ ಇದಕ್ಕೆ ಸಾರ್ವಜನಿಕರು ಮತ್ತುಅಂಗಡಿಯ ಮಾಲೀಕರು ಸಹಕರಿ ಸುವಂತೆ ಮನವಿ ಮಾಡಿದರು.ಇನ್ನು ತೆರವು ಕಾರ್ಯಾಚರಣೆ ಯಲ್ಲಿ ಚಂದಾಪುರ ಪುರಸಭೆ ಮುಖ್ಯ ಕಂದಾಯ ಅಧಿಕಾರಿಗಳಾದ ಸುಧಾಕರ್, ಮುಖ್ಯ ಅಭಿಯಂತರ ಆದರ್ಶ್, ಸೂರ್ಯ ನಗರ ಪೊಲಿಸ್ ಠಾಣೆಯ ಇನ್ಸ್ ಪೆಕ್ಟರ್ ಮಹಾಜನ್., ಹಿರಿಯ ಆರೋಗ್ಯ ನಿರೀಕ್ಷಕರು ಬಾಗ್ಯ ಶ್ರೀ, ವೇಣು, ಸುನೀಲ್ ಮತ್ತು ಅದಿಕಾರಿಗಳು ಹಾಗೂ ಪೊಲಿಸರು ಭಾಗವಹಿಸಿದ್ದರು.