ಬೆಂಗಳೂರು: ನವದೆಹಲಿಯ ಇಂಟರ್ನ್ಯಾಷನಲ್ ಹೂಮನ್ ಡೆವಲಪ್ಮೆಂಟ್ ಯೂನಿವರ್ಸಿಟಿ, ಕೊಡಮಾಡುವ ಗೌ. ಡಾಕ್ಟರೆಟ್ ಪದವಿಯನ್ನು ಹಾಸನ ಜಿಲ್ಲಾ ಕಾಂಗ್ರೆಸ್ ಸೇವಾದಳದ ಮಾಜಿ ಅಧ್ಯಕ್ಷ ಹಾಗೂ ಪ್ರದೇಶ ಕಾಂಗ್ರೆಸ್ ಸೇವಾದಳದ ಉಪಾಧ್ಯಕ್ಷ ಮರ್ಕುಲಿ ಗೋಪಾಲೇಗೌಡ ಅವರಿಗೆ ನೀಡಲಾಗಿದೆ.
ಅಮೇರಿಕಾದ ಅಂತಾರಾಷ್ಟ್ರೀಯ ಮಾನ್ಯತಾ ಸಮಿತಿಗೆ ಒಳಪಟ್ಟಂತೆ ನವದೆಹಲಿ ಬೋರ್ಡ್ ಆಫ್ ಡಾಕ್ಟರೆಟ್ ಪ್ರಶಸ್ತಿ ಸಮಿತಿಯು ಗೋಪಾಲಗೌಡರಿಗೆ ಈ ಪದವಿ ಪ್ರಮಾಣಪತ್ರ ನೀಡಿ ಗೌರವಿಸಿದೆ. ಕಳೆದ ಅಕ್ಟೋಬರ್ 30 ರಂದು ಗೋವಾದಲ್ಲಿ ನಡೆದ ಬೃಹತ್ ಸಮಾರಂಭದಲ್ಲಿ ಈ ಪದವಿ ಪ್ರದಾನ ಮಾಡಲಾಯಿತು.
ಯೂನಿವರ್ಸಿಟಿಯ ವಿಶ್ರಾಂತ ವೈಸ್ ಚಾನ್ಸಲರ್ ವಿಶ್ವನಾಥ್ ಚಿಮನಕಟ್ಟಿ, ಶ್ರೀ ಬಸವೇಶ್ವರ ವಿದ್ಯಾಸಂಸ್ಥೆಯ ಸಂಸ್ಥಾಪಕ ಶರಣಪ್ಪ ಮತ್ತಿಕಟ್ಟಿ, ಹೈಕೋರ್ಟ್ ನ್ಯಾಯಾಧೀಶರಾಗಿದ್ದ ರೇವಣ್ಣ ಸಿದ್ದಯ್ಯ, ಜಾನಪದ ಕೋಗಿಲೆ ಖ್ಯಾತಿ ಪದ್ಮಾವತಿ, ಹಾಗೂ ಹಂಪಿ ವಿಶ್ವ ವಿದ್ಯಾಲಯದ ಸಿಂಡಿಕೆಟ್ ಸದಸ್ಯರಾ ಶಶಿಕಲಾ, ಇಂಟರ್ನ್ಯಾಷನಲ್ ಡ್ಯೂಮನ್ ಡೆವಲಪ್ಮೆಂಟ್ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಮಹೇಶ್ಗೌಡ ಇತರರು ಸಮಾರಂಭದಲ್ಲಿ ಹಾಜರಿದ್ದರು.
ಇದೇ ಸಂದರ್ಭದಲ್ಲಿ ಮರ್ಕುಲಿ ಗೋಪಾಲಗೌಡರು ಮಾತನಾಡಿ ಜನರ ಸೇವೆ ಮಾಡಬೇಕು, ಬಡವರ ದೀನದಲಿತರು ಸಮಾಜದ ಮುಖ್ಯವಾಹಿನಿ ಬರಬೇಕು ಸಮ ಸಮಾಜ ನಿರ್ಮಾಣವಾಗಬೇಕು ಆಗ ದೇಶ ಅಭಿವೃದ್ದಿ ಸಾಧ್ಯ ಎಂಬ ಉದ್ದೇಶದಿಂದ ಸಮಾಜ ಸೇವೆ ಮಾಡುತ್ತಾ ಕಾಂಗ್ರೆಸ್ ಪಕ್ಷದ ಸೇವಾ ದಳದಲ್ಲಿ ಸಕ್ರಿಯವಾಗಿ ದುಡಿಯುತ್ತಾ ಬಂದಿದ್ದೇನೆ. ರಾಜಕೀಯ ಕ್ಷೇತ್ರ ಜನ ಸೇವೆ ಮಾಡಲು ಅದನ್ನ ಎಲ್ಲರು ಅರ್ಥಮಾಡಿಕೊಳ್ಳಬೇಕು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ 5ಗ್ಯಾರಂಟಿ ಯೋಜನೆಗಳನ್ನು ಪ್ರತಿ ಮನೆ, ಮನೆಗೆ ತಲುಪಿಸಲಾಯಿತು ಇಂದು ಪ್ರತಿ ಕುಟುಂಬದಲ್ಲಿ ಅರ್ಹ ಫಲಾನುಭವಿಗಳಿಗೆ ಇದರ ಲಾಭ ಸಿಗುತ್ತಿದೆ.ಬಡವರರಾಗಿ ಹುಟ್ಟಿರಬಹುದು, ಅದರೆ ಬಡತನದಲ್ಲಿ ಜೀವನ ಸಾಗಿಸಬಾರದು 5ಗ್ಯಾರಂಟಿ ಯೋಜನೆಗಳು ಆರ್ಥಿಕವಾಗಿ ದುರ್ಬಲ ಕುಟುಂಬಗಳಿಗೆ ಸಮರೇಪಕವಾಗಿ ತಲುಪಿ ಅವರ ಆರ್ಥಿಕವಗಾಗಿ ಸಬಲರಾಗಲು ಸಾಧ್ಯ. ಜನತಾ ಜನಾರ್ಧನಾ ಸೇವೆ ಮಾಡುವುದು ಪುಣ್ಯದ ಕೆಲಸ ಅದನ್ನ ನನ್ನ ಜೀವನದಲ್ಲಿ ಮಾಡುತ್ತಿದ್ದೇನೆ ಎಂಬ ಸಂತೋಷ, ಆತ್ಮತೃಪ್ತಿ ಎಂದು ತಿಳಿಸಿದರು.