ಕನಕಪುರ: ಡಾ. ಬಿ.ಆರ್ ಅಂಬೇಡ್ಕರ್ ಅವರು ಅಸಮಾನತೆಯನ್ನು ಹೋಗಲಾಡಿಸಿ ಜಗತ್ತಿಗೆ ಸಮಾನತೆ ಸಾರವನ್ನು ಸಾರಿದ ಮಹಾನ್ ನಾಯಕರು ಎಂದು ತಹಶೀಲ್ದಾರ್ ಸ್ಮಿತಾ ರಾಮು ತಿಳಿಸಿದರು.ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರ ಪರಿನಿಬ್ಬಾಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಈ ದೇಶಕ್ಕೆ ಹಲವಾರು ಇತಿಹಾಸಕಾರರು ಕೊಡಗೆಗಳನ್ನು ಕೊಟ್ಟಿದ್ದಾರೆ ಅವರ ಜಯಂತಿಗಳನ್ನು ಮಾತ್ರ ನಾವು ಆಚರಣೆ ಮಾಡುತ್ತೇವೆ ಆದರೆ ಅಂಬೇಡ್ಕರ್ ಅವರ ಪರಿನಿಬ್ಬಾಣವನ್ನು ಆಚರಣೆ ಮಾಡುತ್ತಿದ್ದೇವೆ ಎಂದರೆ ಅವರು ಸಮಾಜಕ್ಕೆ ಎಂತಹ ಕೊಡುಗೆ ಕೊಟ್ಟಿದ್ದಾರೆ ಎಂದು ನಾವೆಲ್ಲರೂ ಸ್ಮರಿಸಿಕೊಳ್ಳಬೇಕು ಎಂದರು.
ಸಂವಿಧಾನ ರಚನೆ ಮಾಡುವುದು ಅಷ್ಟುಸುಲಭವಲ್ಲ ಭೋಗೋಳಿಕ ವಿಸ್ತೀರ್ಣ ಬಹಳವಿಶಾಲವಾಗಿರುವ ಭಾರತದಲ್ಲಿ ಬಹು ಸಂಖ್ಯಾ
ತರು ಬಹು ಭಾಷಿಗರು ವಿವಿಧತೆಯಲ್ಲಿ ಏಕತೆಯಾಗಿ ಇರಬೇಕು ಎಂದು ಬೇರೆ ಬೇರೆ 60ಕ್ಕೂ ಹೆಚ್ಚುದೇಶಗಳ ಸಂವಿಧಾನವನ್ನು ಹಗಲು ರಾತ್ರಿ ಎನ್ನದೆ ನಿರಂತರವಾಗಿ ಅಧ್ಯಾಯನ ಮಾಡಿ ನಮ್ಮ ದೇಶಕ್ಕೆ ಬೃಹತ್ಸಂವಿಧಾನವನ್ನು ಸಮರ್ಪಣೆ ಮಾಡಿದ್ದಾರೆ ಎಂದರು.
ದಮ್ಮ ದೀವಿಗೆ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್ ಮಾತನಾಡಿ.ಗೌತಮ ಬುದ್ಧ, ಸಾಮ್ರಾಟ್ಅಶೋಕನಂತಹ ವ್ಯಕ್ತಿಗಳ ಆದರ್ಶವಾಗಿ
ಟ್ಟುಕೊಂಡು ಸಹೋದರತೆ ಮತ್ತು ಐಕ್ಯತೆ ಹಾಗೂಅಖಂಡ ಭಾರತವನ್ನು ಕಟ್ಟಬೇಕು ಎಂಬ ಪರಿಕಲ್ಪನೆಇದದ್ದು ಅಂಬೇಡ್ಕರ್ ಅವರಿಗೆ ಮಾತ್ರ ಭಾರತವನ್ನು ಒಗ್ಗೂಡಿಸಿ ಸೋಷಿತ ಸಮಾಜವನ್ನು ಆರ್ಥಿಕ ಸಾಮಾಜಿಕ ರಾಜಕೀಯ ಸ್ಥಾನಮಾನಗಳನ್ನು ಕಲ್ಪಿಸಿ
ಕೊಡುವುದರಲ್ಲಿ ಬಹುದೊಡ್ಡ ಕೊಡುಗೆ ಕೊಟ್ಟಿದ್ದಾರೆ.
ಆದರೆ ಅಂಬೇಡ್ಕರ್ ಅವರಿಗೆ ಈ ದೇಶದಲ್ಲಿ ಆದ ಅಪಮಾನ ಬೇರೆ ಯಾವ ನಾಯಕನಿಗೂ ಆಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಸಂವಿಧಾನ ರಚನಾ ಸಮಿತಿಗೆ ಅಂಬೇಡ್ಕರ್ ಬರಬಾರದೆಂದು ಹುನ್ನಾರ ಮಾಡಿದರು ಆದರೂ ಅಂಬೇಡ್ಕರ್ ಸ್ವಸಾಮರ್ಥ್ಯದಿಂದ ರಚನಾ ಸಮಿತಿಗೆ ಬಂದು ಅದರಲ್ಲಿದ್ದ ಏಳು ಜನ ಸದಸ್ಯರು ಅನಾರೋಗ್ಯ ಹಾಗೂ ಬೇರೆ ಬೇರೆ ಕಾರಣಗಳಿಂದ ಹಿಂದೆ ಸರಿದಿದ್ದರು ಆಗ ಅಂಬೇಡ್ಕರ್ ಒಬ್ಬರೇ ಏಕಾಂಗಿಯಾಗಿ ಸಂವಿಧಾನ ರಚನೆ ಮಾಡಿದರು ಸಣ್ಣಪುಟ್ಟ ಸಾಧನೆ ಮಾಡಿದವರಿಗೆಲ್ಲ ಭಾರತ ರತ್ನ ಕೊಟ್ಟಿದ್ದಾರೆ.
ಆದರೆ ಅಂಬೇಡ್ಕರ್ ಅವರಿಗೆ ಮರಣೋತ್ತರ ಭಾರತ ರತ್ನ ಕೊಟ್ಟಿದ್ದಾರೆ ಅಂಬೇಡ್ಕರ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ಕೊಡಲು ಯಾವ ಯುನಿವರ್ಸಿಟಿಯು ಮುಂದೆ ಬರಲಿಲ್ಲ ಆಗ ಉಸ್ಮನಿಯ ಯುನಿವರ್ಸಿಟಿ ಅಂಬೇಡ್ಕರ್ ಅವರಿಗೆ ಡಾಕ್ಟರೇಟ್ ಪದವಿ ಕೊಟ್ಟಿದೆ ಅಂಬೇಡ್ಕರ್ ಅವರು ತೀರಿಕೊಂಡ ದಿನ 160 ರಾಷ್ಟ್ರಗಳಲ್ಲಿ ಬಾವುಟವನ್ನು ಹಾರಿಸಿ ಎಲ್ಲ ದೇಶಗಳು ಅಂಬೇಡ್ಕರ್ ಅವರಿಗೆ ಅಂತಹ ಗೌರವ ಕೊಟ್ಟಿವೆ ಅಂಬೇಡ್ಕರ್ ಅವರು ಈ ನೆಲದಲ್ಲಿ ಅನ್ಯಾಯದ ವಿರುದ್ಧದ ಕಾಳಗದ ಸಂಕೇತದಂತ್ತಿದ್ದರು ಅವರ ವಿಚಾರಗಳು ಎಲ್ಲರಿಗೂ ಮಾದರಿಯಾಗಿವೆ ಎಂದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸತೀಶ್, ತಾಲೂಕು ಅಧ್ಯಕ್ಷ ಶಿವಲಿಂಗೇಗೌಡ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಜಯಪ್ರಕಾಶ್, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಮುನಿವೆಂಕಟಪ್ಪ, ವಿವಿಧ ಇಲಾಖೆ ಅಧಿಕಾರಿಗಳು ಸೇರಿದಂತೆ ಸಾಹಿತಿ ಕೂ.ಗಿ. ಗಿರಿಯಪ್ಪ, ಜಯಕರ್ನಾಟಕ ಜನಪರ ವೇದಿಕೆ ಕುಮಾರಸ್ವಾಮಿ, ನೀಲಿ ರಮೇಶ್ ಹಾಗೂ ವಿವಿಧ ಸಂಘಟನೆ ಪದಾಧಿಕಾರಿಗಳು ಉಪಸ್ಥಿತರಿದ್ದರು.