ಕೆ.ಆರ್.ಪುರ: ಕರ್ನಾಟಕಕ್ಕೆ 50 ವರ್ಷಗಳ ಸಂಭ್ರಮದ ಅಂಗವಾಗಿ ಹೊರ ರಾಜ್ಯದಿಂದ ಬಂದಿರುವ ಜನರ ಬಳಿ ಕನ್ನಡದಲ್ಲೆ ಮಾತನಾಡುವ ಮೂಲಕ ಕನ್ನಡ ಭಾಷೆಯನ್ನು ಕಲಿಸುವ ಕಾರ್ಯ ಎಲ್ಲರೂ ಮಾಡೋಣ ಎಂದು ಬಿಜೆಪಿ ಮುಖಂಡರಾದ ಇಟಾಚಿ ಮಂಜುನಾಥ್ ತಿಳಿಸಿದರು.
ಕ್ಷೇತ್ರದ ರಾಮಮೂರ್ತಿ ನಗರದ ಅಂಬೇಡ್ಕರ್ ನಗರದಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ದಲ್ಲಿ ಕನ್ನಡ ಧ್ವಜಾರೋಹಣ ಮಾಡಿ ನಂತರ ಮಾತನಾಡಿದರು. ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಬೈರತಿ ಬಸವರಾಜ ಅವರ ನೇತೃತ್ವದಲ್ಲಿ ಪ್ರತಿ ವರ್ಷ ಕನ್ನಡ ರಾಜ್ಯೋತ್ಸವ ಆಚರಿಸಿ ನಂತರ ಶಿರಡಿ ಸಾಯಿ ಬಾಬಾ ಸನ್ನಿಧಿಗೆ ಪ್ರವಾಸ ಮಾಡಲಾಗುವುದು ಎಂದರು.
ಸ್ಥಳೀಯ ಮುಖಂಡರು ಅಂಬೇಡ್ಕರ್ ನಗರ ಸರ್ಕಾರಿ ಶಾಲಾ ಶಿಕ್ಷಕರು,ಮಕ್ಕಳ ಹಾಗೂ ಗ್ರಾಮಸ್ಥರು ಜೊತೆ ಪ್ರತಿವರ್ಷ ಕನ್ನಡ ರಾಜ್ಯೋತ್ಸವ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ನಮ್ಮ ಕನ್ನಡ ನಾಡಿನಲ್ಲಿ ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡುವಂತೆ ಪರ ಭಾಷೆ ಜನರಿಗೆ ಮನವರಿಕೆ ಮಾಡುವ ಕೆಲಸ ಆಗಬೇಕಾಗಿದೆ ಎಂದರು.
ಕರೋನ ಮಹಾಮಾರಿ ಕಳೆದ ಬಾರಿ ಬಂದಾಗ ಸುಮಾರು ಜನರನ್ನು ಬಲಿ ಪಡೆದಿತ್ತು, ಇದೀಗ ಮತ್ತೆ ಬರುವ ಆತಂಕವಿದ್ದು ಎಲ್ಲರೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಮಹಾಮಾರಿ ಹರಡದಂತೆ ಎಚ್ಚೆತ್ತುಕೊಳ್ಳೋಣ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಬೈರತಿ ಚಂದ್ರಣ್ಣ, ಭಕ್ತಣ್ಣ, ಗುರುನಾಥ್ ರೆಡ್ಡಿ , ಮೈಸೂರು ನಾರಾಯಣ , ಪ್ರಕಾಶ್ ಕುಮಾರ್, ಬಿ.ವಿ.ಭಾರತಿ ಸೇರಿದಂತೆ ಶಾಲಾ ಶಿಕ್ಷಕರು, ಮಕ್ಕಳು ಹಾಜರಿದ್ದರು.