LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Mysore

`ಶಿಕ್ಷಣ ಮತ್ತು ನಮ್ರತೆ ಯಾವಾಗಲೂ ಒಂದಕ್ಕೊಂದು ಪೂರಕ'

ಮೈಸೂರು: ನಾವು ಹೆಚ್ಚು ಯಶಸ್ಸು ಗಳಿಸಿದಷ್ಟೂ ವಿನಯವಂತರಾಗಬೇಕು ಎಂದು ಮೈಸೂರು ಡಯೋಸಿಸನ್ ಎಜುಕೇಷನಲ್ ಸೊಸೈಟಿಯ (MDES) ಕಾರ್ಯದರ್ಶಿ ಮತ್ತು ಸಂಯೋಜಕರಾದ ಧರ್ಮಗುರು ಫಾ. ವಿಜಯ್ ಕುಮಾರ್ ತಿಳಿಸಿದರು.

ಸಿಬಿಎಸ್‍ಇ ಶಾಲೆಗಳನ್ನು ಒಳಗೊಂಡಿರುವ ಎಂಡಿಇಎಸ್‍ನ ಅಧೀನದಲ್ಲಿ ಬರುವ ಸೇಂಟ್ ಜೋಸೆಫ್ ಸೆಂಟ್ರಲ್ ಸ್ಕೂಲ್ ವಿಜಯನಗರ, ಸೇಂಟ್ ಜೋಸೆಫ್ ಸೆಂಟ್ರಲ್ ಸ್ಕೂಲ್ ಇಲವಾಲ, ಸೇಂಟ್ ಜೋಸೆಫ್ ಸೆಂಟ್ರಲ್ ಸ್ಕೂಲ್ ಜಯಲಕ್ಷ್ಮೀಪುರಂ, ಸೇಂಟ್ ಮಥಿಯಾಸ್ ಕ್ಯಾಂಪಸ್‍ನಲ್ಲಿರುವ ಸೇಂಟ್ ಜೋಸೆಫ್ ಶಾಲೆ ಮತ್ತು ರಾಜೀವ್ ನಗರದ ಸೇಂಟ್ ಜೋಸೆಫ್ ಶಾಲೆ ಸೇರಿದಂತೆ ವಿವಿಧ ಶಾಲೆಗಳ ಎಸ್‍ಎಸ್‍ಎಲ್‍ಸಿ ಟಾಪರ್‍ಗಳನ್ನು ಸನ್ಮಾನಿಸಿದ ನಂತರ ಅವರು ಮಾತನಾಡಿದರು.

ನೀವು ಈಗಷ್ಟೇ ಒಂದು ಹಂತವನ್ನು ತಲುಪಿದ್ದೀರ. ಇನ್ನೂ ಏರಲು ಸಾಕಷ್ಟು ಮೆಟ್ಟಿಲುಗಳಿವೆ. ನೀವು ಹೆಚ್ಚು ಯಶಸ್ಸು ಗಲಿಸಿದಷ್ಟೂ ಹೆಚ್ಚು ವಿನಮ್ರರಾಗಬೇಕು. ಈ ಹಂತವನ್ನು ತಲುಪಲು ನಿಮಗೆ ಸಹಾಯ ಮಾಡಿದ ಜನರಿಗೆ ಕೃತಜ್ಞತೆಯನ್ನು ತೋರಬೇಕು. ಅದಕ್ಕಿಂತ ಮುಖ್ಯವಾಗಿ ನಾವು ಬೆಳೆದು ಯಶಸ್ಸನ್ನು ಆಚರಿಸುವಾಗ ನಾವು ಮನುಷ್ಯರು ಎಂಬ ಅಂಶವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದರು.

ನಾವು ಹೆಚ್ಚು ಹೆಚ್ಚು ಶಿಕ್ಷಣ ಪಡೆದಂತೆ ನಾವು ಹೆಚ್ಚು ವಿನಮ್ರ, ಗೌರವ, ವಿಧೇಯರಾಗಬೇಕು. ಆಗ ನಾವು ಉತ್ತಮ ವ್ಯಕ್ತಿಗಳಾಗಲು ಸಾಧ್ಯವಾಗುತ್ತದೆ. ನಾವು ಮಾನವೀಯ ಮೌಲ್ಯಗಳೊಂದಿಗೆ ಉತ್ತಮ ಮನುಷ್ಯರಾಗಿ ಬದಲಾಗದಿದ್ದರೆ ನಮ್ಮ ಎಲ್ಲಾ ಶಿಕ್ಷಣ, ನಮ್ಮ ಎಲ್ಲಾ ಸಾಧನೆಗಳು ವ್ಯರ್ಥ. ನಿಮ್ಮ ಪದವಿಗಳು ನಿಮ್ಮನ್ನು ಇತರರಿಗೆ ಸಹಾಯ ಮಾಡುವ, ಗೌರವಿಸುವ ಮತ್ತು ಪ್ರೀತಿಸುವ ಉತ್ತಮ ಮನುಷ್ಯನನ್ನಾಗಿ ಮಾಡಬೇಕು.

ವಿದ್ಯಾರ್ಥಿಯ ಯಶಸ್ಸು ಪೋಷಕರಿಗೆ ಮತ್ತು ಶಿಕ್ಷಕರಿಗೆ ಸೇರಿದ್ದು, ಅವರಿಗೆ ಮಾರ್ಗದರ್ಶನ ನೀಡುವುದು ಮಾತ್ರವಲ್ಲದೆ ಆಯಾ ಸ್ಥಳಗಳಲ್ಲಿ ಉತ್ತಮ ವಾತಾವರಣ ಮತ್ತು ವಾತಾವರಣವನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.ವಿದ್ಯಾರ್ಥಿಗಳು ಅವರು ಆಯ್ಕೆ ಮಾಡಿದ ಕ್ಷೇತ್ರಗಳಲ್ಲಿ ಯಶಸ್ಸನ್ನು ಸಾಧಿಸಿದಾಗ ಭವಿಷ್ಯದಲ್ಲಿ ಶಾಲೆಯು ಪ್ರತಿ ವಿದ್ಯಾರ್ಥಿಯ ಯಶಸ್ಸನ್ನು ಆನಂದಿಸುತ್ತದೆ ಎಂದರು.ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಅವಿನಾಶ್, ಸಿಇಒ ಶ್ರೀಮತಿ ಜೋಯ್ಸ್ ಲೋಬೋ ಹಾಗೂ ಆಯಾ ಪ್ರಾಂಶುಪಾಲರು ಮತ್ತು ಮುಖ್ಯಸ್ಥರು ಉಪಸ್ಥಿತರಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು