`
ತಿ.ನರಸೀಪುರ: 12ನೇ ಶತಮಾನದ ಪ್ರಮುಖ ವಚನಗಾರರಾದ ಶರಣ ಹಡಪದ ಅಪ್ಪಣ್ಣನವರು ಬಸವಣ್ಣನವರ ಆಪ್ತ ಸಹಾಯಕರಾಗಿ ಹಾಗೂ ಅನುಭವ ಮಂಟಪದ ಕಾರ್ಯದರ್ಶಿಯಾಗಿ ಸಮಾಜದಲ್ಲಿ ಸಮಾನತೆ ಮತ್ತು ಸಾಮಾಜಿಕ ಸುಧಾರಣೆಗೆ ಅಪಾರ ಕೊಡುಗೆ ನೀಡಿದ ಮಹನೀಯರು ಎಂದು ಮುಖ್ಯ ಭಾಷಣಕಾರ ಹಾಗೂ ಬಿ.ಆರ್.ಸಿ. ನಾಗೇಶ್ ಹೇಳಿದರು.
ಸವಿತಾ ಸಮಾಜದ ಮುಖಂಡರು ಮತ್ತು ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ತಹಸೀಲ್ದಾರ್ ಟಿ.ಜಿ. ಸುರೇಶಾಚಾರ್ ಶರಣ ಹಡಪದ ಅಪ್ಪಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ದೀಪ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ, ರಾಷ್ಟಿçÃಯ ಹಬ್ಬಗಳ ಆಚರಣೆ ಸಮಿತಿ, ತಾಲೂಕು ಸವಿತಾ ಸಮಾಜ ಸಂಘದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಶರಣ ಹಡಪದ ಅಪ್ಪಣ್ಣನವರ 896ನೇ ಜಯಂತಿ ಕಾರ್ಯಕ್ರಮದ ಮುಖ್ಯ ಭಾಷಣಕಾರ ನಾಗೇಶ್ ಮಾತನಾಡಿ, ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ಜನಿಸಿದ ಹಡಪದ ಅಪ್ಪಣ್ಣನವರ ತಂದೆ ಚನ್ನವೀರಪ್ಪ, ತಾಯಿ ದೇವಿಕ್ಕಮ್ಮ. ಅವರ ಪತ್ನಿ ಶರಣಿ ಲಿಂಗಮ್ಮ ಕೂಡ ಪ್ರಸಿದ್ಧ ವಚನಗಾರ್ತಿಯಾಗಿದ್ದರು ಎಂದು ತಿಳಿಸಿದರು.
ಹಡಪದ ಅಪ್ಪಣ್ಣನವರು ಜಾತಿ-ಲಿಂಗ ತಾರತಮ್ಯ ಹಾಗೂ ಸಮಾಜದಲ್ಲಿದ್ದ ಅನಿಷ್ಟ ಪದ್ಧತಿಗಳ ವಿರುದ್ಧ ಧ್ವನಿಯೆತ್ತಿ ಹೋರಾಟ ನಡೆಸಿದರು. ಬಸವಣ್ಣನವರೊಂದಿಗೆ ಸೇರಿ ಸಮಾನತೆಯ ಸಂದೇಶವನ್ನು ಸಾರಿದ ಅವರು 12ನೇ ಶತಮಾನದ ಮಹಾನ್ ಸಮಾಜ ಸುಧಾರಕರಾಗಿದ್ದರು ಎಂದು ಹೇಳಿದರು.
ಈ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಾದ ಸಮಾಜ ಸೇವಕ ಡಾ.ಮಾದೇಶ್, ಆಡಳಿತ ವೈದ್ಯಾಧಿಕಾರಿ ಡಾ.ಅಭಿಲಾಶ್, ಸವಿತಾ ಸಮಾಜದ ಜಿಲ್ಲಾಧ್ಯಕ್ಷ ನಾಗರಾಜು, ಚೆಸ್ಕ್ ಎ ಇಇ ವೀರೇಶ್,ಬಿಆರ್ಸಿ ನಾಗೇಶ್ ರವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪ್ರಭಾರ ಇಒ ಡಾ.ರಂಗಸ್ವಾಮಿ, ಪೊಲೀಸ್ ಇನ್ಸೆ÷್ಪಕ್ಟರ್ ಧನಂಜಯ, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಅಭಿಲಾಶ್, ಚೆಸ್ಕಾಂ ಸಹಾಯಕ ಅಭಿಯಂತರ ವೀರೇಶ್ಕöÈ,ಷಿ ಇಲಾಖೆಯ ಸಹಾಯಕ ನಿರ್ದೇಶಕಿ ರೂಪಾ, ಉಪ ತಹಸೀಲ್ದಾರ್ ರಾಜಕಾಂತ್, ತಾಲೂಕು ನೌಕರರ ಸಂಘದ ಅಧ್ಯಕ್ಷ ಶಿವಶಂಕರಮೂರ್ತಿ, ಸವಿತಾ ಸಮಾಜದ ಜಿಲ್ಲಾಧ್ಯಕ್ಷ ನಾಗರಾಜು, ತಾಲೂಕು ಅಧ್ಯಕ್ಷ ಸಿದ್ದೇಶ್, ಉಪಾಧ್ಯಕ್ಷ ಸುರೇಶ್, ಕಾರ್ಯದರ್ಶಿ ಅವಿನಾಶ್, ಗೌರವಾಧ್ಯಕ್ಷ ಸೋಮಣ್ಣ, ಟೌನ್ ಅಧ್ಯಕ್ಷ ರುದ್ರೇಶ್, ನಾಗೇಂದ್ರ, ಕೃಷ್ಣ, ರಾಜೇಶ್, ಗಿರೀಶ್, ಮಾದು, ಮಣಿಕಂಠ, ದೇವರಾಜು, ಯಜಮಾನರು ಸ್ವಾಮಿ, ಗೌರವಾಧ್ಯಕ್ಷ ಮೂರ್ತಿ, ಅಪ್ಪಣ್ಣ, ವಾಚ್ ಕುಮಾರ್, ಕೆಂಪಯ್ಯನ ಹುಂಡಿ ನಂಜುAಡ, ರಘು, ಶಂಕರ, ಸೋಸಲೆ ನಂಜುAಡಯ್ಯ, ಶಿವಕುಮಾರ್( ಬಡ್ಡು ) ವಾಚ್ ಕುಮಾರ , ಅಪ್ಪಣ್ಣ, ನಾಗೇಂದ್ರ, ಹಾಗೂ ಸಮುದಾಯದ ಹಲವಾರು ಮುಖಂಡರು ಭಾಗವಹಿಸಿದ್ದರು.