LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts

ಕೆಜಿಎಫ್‌ನಲ್ಲಿ ರಾಜಕೀಯ ಜಟಾಪಟಿ: ಶಾಸಕಿ ವಿರುದ್ಧ ಮಾಜಿ ಶಾಸಕ ಸಂಪಂಗಿ ಬೃಹತ್ ಧರಣಿ 


ಕೆಜಿಎಫ್: ಕೆಜಿಎಫ್ ವಿಧಾನಸಭಾ ಕ್ಷೇತ್ರದಲ್ಲಿ ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿಯ ನಾಯಕರ ನಡುವೆ ಸಡ್ಡು ಹೊಡೆಯುವ ರಾಜಕೀಯ ತಂತ್ರಗಾರಿಕೆ ತೀವ್ರಗೊಂಡಿದೆ.ಮಾಜಿ ಶಾಸಕ ವೈ. ಸಂಪAಗಿ ಅವರು ಆಡಳಿತಾರೂಢ ಸರ್ಕಾರದ ನಿರ್ಧಾರಗಳ ವಿರುದ್ಧ ಬೃಹತ್ ಪ್ರತಿಭಟನೆಗೆ ಕರೆ ನೀಡಿದ್ದರೆ, ಅದೇ ದಿನ ಶಾಸಕಿ ಎಂ. ರೂಪಕಲಾ ಶಶಿಧರ್ ಅವರು ಡಾ. ಬಿ.ಆರ್. ಅಂಬೇಡ್ಕರ್ ಅವರ ಕಂಚಿನ ಪ್ರತಿಮೆ ಉದ್ಘಾಟನೆಗೆ ಸಜ್ಜಾಗಿದ್ದಾರೆ. 
ಕೆಜಿಎಫ್ ಕ್ಷೇತ್ರದಲ್ಲಿ ದಿನೇ ದಿನೇ ಕಾವೇರುತ್ತಿರುವ ರಾಜಕೀಯ ವಾತಾವರಣವು ಈ ಎರಡೂ ಕಾರ್ಯಕ್ರಮಗಳಿಂದಾಗಿ ತೀವ್ರ ಘರ್ಷಣೆಯ ಸ್ವರೂಪ ಪಡೆದುಕೊಂಡಿದೆ. ಒಂದೆಡೆ ಬಡವರ ಪಿಂಚಣಿ ಹಾಗೂ ರೇಷನ್ ಕಾರ್ಡ್ ರದ್ದತಿಯ ಸಾರ್ವಜನಿಕ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಸಂಪಂಗಿ ಅವರು ಜನಬೆಂಬಲ ಕ್ರೋಢೀಕರಿಸಲು ಯತ್ನಿಸುತ್ತಿದ್ದರೆ, ಇನ್ನೊಂದೆಡೆ ದಲಿತ ಸೌಹಾರ್ದತೆ ಮತ್ತು ಅಂಬೇಡ್ಕರ್ ಅವರ ಪ್ರತಿಮೆ ಅನಾವರಣದಂತಹ ಭಾವುಕ 
ವಿಷಯವನ್ನು ಮುನ್ನೆಲೆಗೆ ತಂದು ಶಾಸಕಿ ರೂಪಕಲಾ ತಮ್ಮ ಬಲ ಪ್ರದರ್ಶಿಸಲು ಮುಂದಾಗಿದ್ದಾರೆ.  ಬುಧವಾರ ಬೆಳಗ್ಗೆ ಒಂದೇ ದಿನ ಜರುಗಲಿರುವ ಈ ಎರಡು ಪ್ರಮುಖ ರಾಜಕೀಯ ವಿದ್ಯಮಾನಗಳು ಕ್ಷೇತ್ರದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿವೆ.ಪ್ರತಿಪಕ್ಷಗಳ ಆರೋಪ: ಮಾಜಿ ಶಾಸಕ ವೈ. ಸಂಪಂಗಿ ಅವರ ನೇತೃತ್ವದಲ್ಲಿ 2026ರ ಆಗಸ್ಟ್ 5ರಂದು ಬೆಳಿಗ್ಗೆ 10.30ಕ್ಕೆ ಸೂರಜ್ಮಲ್ ವೃತ್ತದಿಂದ ತಾಲೂಕು ಕಚೇರಿವರೆಗೆ ಬೃಹತ್ ಮೆರವಣಿಗೆ ಹಾಗೂ ಧರಣಿ ಸತ್ಯಾಗ್ರಹವನ್ನು ಆಯೋಜಿಸಲಾಗಿದೆ.ಬಿಜೆಪಿಯ ಪ್ರಮುಖ ಬೇಡಿಕೆಗಳು ಹಾಗೂ ಆರೋಪಗಳು: ಫಲಾನುಭವಿಗಳ ಪಿಂಚಣಿ ರದ್ದು: ತಾಲೂಕಿನಲ್ಲಿ ವೃದ್ಧಾಪ್ಯ, ವಿಧವಾ ಹಾಗೂ ಅಂಗವಿಕಲ ವೇತನ ಸೇರಿ ಸುಮಾರು 14,500 ಅರ್ಹ ಪಿಂಚಣಿದಾರರ ಪಿಂಚಣಿಯನ್ನು ರದ್ದುಗೊಳಿಸಲಾಗಿದೆ. ಆಹಾರ ಭದ್ರತೆಗೆ ಕಡಿತ: ಬಡ ಕುಟುಂಬಗಳಿಗೆ ಸೇರಬೇಕಿದ್ದ 4,000 ರೇಷನ್ ಕಾರ್ಡ್ಗಳನ್ನು ರದ್ದು ಮಾಡಲಾಗಿದೆ.ಭೂ ಅಕ್ರಮ ಆರೋಪ: ಕೆ.ಜಿ. ಕೋಟೆಯ ಸರ್ವೆ ನಂಬರ್ 121ರಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಸುಮಾರು 60 ಎಕರೆ ಜಮೀನನ್ನು ಅಕ್ರಮವಾಗಿ ಶ್ರೀನಿವಾಸಪುರ ಮೂಲದವರಿಗೆ ಮಂಜೂರು ಮಾಡಲಾಗಿದೆ.ಬೇನಾಮಿ ಉದ್ಯಮ: ಬೆನಾಮಿ ಹೆಸರಿನಲ್ಲಿ ಜಲ್ಲಿ ಕ್ರಷರ್ ಪ್ಲಾಂಟ್ ಪ್ರಾರಂಭಿಸಲು ಜಿಲ್ಲಾಡಳಿತ ಅನುಮತಿ ನೀಡಿದ್ದು, ಈ ಬಗ್ಗೆ ಶೀಘ್ರವೇ ದಾಖಲೆ ಬಿಡುಗಡೆ ಮಾಡುವುದಾಗಿ ಸಂಪAಗಿ ಎಚ್ಚರಿಸಿದ್ದಾರೆ.ಶಾಸಕಿಯ ರಾಜಕೀಯ ಕೌಂಟರ್ ತಂತ್ರ: ಮಾಜಿ ಶಾಸಕ ಸಂಪAಗಿ ಅವರ ಆರೋಪದ ಪ್ರಕಾರ, ಪ್ರತಿಭಟನೆ ನಡೆಯುವ ಆಗಸ್ಟ್ 5 ರಂದೇ ಶಾಸಕಿ ಎಂ. ರೂಪಕಲಾ ಶಶಿಧರ್ ಹಾಗೂ ಬ್ಯಾಲಹಳ್ಳಿ ಗೋವಿಂದೇಗೌಡ ಅವರು ನಗರಸಭೆ ಆವರಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ನೂತನ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಈ ಮೂಲಕ ಬಿಜೆಪಿ ಹಮ್ಮಿಕೊಂಡಿರುವ ಧರಣಿಯ ಕಡೆಗೆ ಸಾರ್ವಜನಿಕ ಗಮನ ಹರಿಯದಂತೆ 'ದಿಕ್ಕು ತಪ್ಪಿಸುವ ಪ್ರಯತ್ನ' ಮಾಡಲಾಗುತ್ತಿದೆ ಎಂದು ಸಂಪAಗಿ ವಾಗ್ದಾಳಿ ನಡೆಸಿದ್ದಾರೆ.ಶಾಸಕಿ/ನಗರಸಭೆಯ ಸ್ಪಷ್ಟನೆ: ಇನ್ನೊಂದೆಡೆ, ನಗರಸಭೆ ಆವರಣದಲ್ಲಿ ಹಿಂದೆ ಇದ್ದ ಅಂಬೇಡ್ಕರ್ ಪ್ರತಿಮೆಯಲ್ಲಿ ಹಲವು ನ್ಯೂನತೆಗಳಿದ್ದ ಕಾರಣ, ನೂತನ ಕಂಚಿನ ಪ್ರತಿಮೆಯನ್ನು ಸ್ಥಾಪಿಸಬೇಕೆಂದು ದಲಿತ ಸಂಘ-ಸAಸ್ಥೆಗಳ ಪದಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಬಹುದಿನಗಳಿಂದ ಒತ್ತಾಯಿಸುತ್ತಿದ್ದರು.'ಸೇವ್ ಕೆಜಿಎಫ್ ಸಮಿತಿ'ಯ ಮನವಿಯಂತೆ ಸೂಕ್ತ ಸಿದ್ಧತೆಗಳೊಂದಿಗೆ ಆ. 5 ರಂದು ಕಂಚಿನ ಪ್ರತಿಮೆ ಉದ್ಘಾಟನೆಗೆ ಸಜ್ಜುಗೊಳಿಸಲಾಗುತ್ತಿದೆ ಎಂಬುದು ಶಾಸಕರ ಬೆಂಬಲಿಗರ ವಾದವಾಗಿದೆ.ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವೆಂಕಟಾಚಲಪತಿ ಆರೋಪ: ಜನರ ಗಮನ ಬೇರೆಡೆ ಸೆಳೆಯುವ ಯತ್ನ: "ತಾಲೂಕಿನಲ್ಲಿ ಅರ್ಹ 14,500 ಬಡವರ ಪಿಂಚಣಿ ಹಾಗೂ 4,000 ರೇಷನ್ ಕಾರ್ಡ್ಗಳನ್ನು ರದ್ದುಗೊಳಿಸಿ ಆಡಳಿತ ಯಂತ್ರ ಬಡವರ ಹೊಟ್ಟೆಗೆ ಹೊಡೆಯುತ್ತಿದೆ. ಈ ಗಂಭೀರ ವೈಫಲ್ಯಗಳನ್ನು ಮರೆಮಾಚಲು ಮತ್ತು ಸಂಪAಗಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಬೃಹತ್ ಧರಣಿಯ ಮಹತ್ವವನ್ನು ಕುಗ್ಗಿಸಲು ಅದೇ ದಿನ ಅಂಬೇಡ್ಕರ್ ಪ್ರತಿಮೆ ಅನಾವರಣದ ಹೈಡ್ರಾಮಾ ನಡೆಸಲಾಗುತ್ತಿದೆ" ಎಂದು ವೆಂಕಟಾಚಲಪತಿ ಕಿಡಿಕಾರಿದ್ದಾರೆ.
ಮಹಾನಾಯಕರ ಹೆಸರಿನಲ್ಲಿ ರಾಜಕೀಯ: "ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆ ಸ್ಥಾಪನೆಗೆ ನಮ್ಮ ಅಭ್ಯಂತರವಿಲ್ಲ, ಆದರೆ ಅದನ್ನು ಪ್ರತಿಪಕ್ಷಗಳ ಹೋರಾಟ ಮತ್ತು ಪ್ರತಿಭಟನೆಯನ್ನು ಹತ್ತಿಕ್ಕಲು ಹಾಗೂ ಸಾರ್ವಜನಿಕರ ಗಮನ ದಿಕ್ಕು ತಪ್ಪಿಸಲು 'ರಾಜಕೀಯ ಡಾಳ'ವಾಗಿ ಬಳಸಿಕೊಳ್ಳುತ್ತಿರುವುದು 
ಖಂಡನೀಯ" ಎಂದು ಅವರು ಆರೋಪಿಸಿದ್ದಾರೆ.ಅಕ್ರಮಗಳ ಮುಚ್ಚಿಹಾಕುವ ಯತ್ನ: ಕೆ.ಜಿ. ಕೋಟೆ ಸರ್ವೆ ನಂಬರ್ 121ರ ಸುಮಾರು 60 ಎಕರೆ ಅಕ್ರಮ ಭೂ ಮಂಜೂರಾತಿ ಮತ್ತು ಬೆನಾಮಿ ಕ್ರಷರ್ ಉದ್ಯಮಗಳ ಬಗ್ಗೆ ತಾಲೂಕು ಕಚೇರಿ ಮುಂದೆ ಸಾರ್ವಜನಿಕರಿಗೆ ಸೂಕ್ತ ಉತ್ತರ ನೀಡಲಾಗದ ಶಾಸಕರು, ಇಂತಹ ಉದ್ಘಾಟನಾ ಕಾರ್ಯಕ್ರಮಗಳ ಹಿಂದೆ ಅಡಗಿಕೊಳ್ಳುತ್ತಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST