LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Ramanagara

ಶ್ರೀಚಾಮುಂಡೇಶ್ವರಿದೇವಿ ಕರಗ ನಿಮಿತ್ತ ಅಗ್ನಿಕೊಂಡೋತ್ಸವ


ರಾಮನಗರ: ನಗರ ದೇವತೆ ಶ್ರೀಚಾಮುಂಡೇಶ್ವರಿ ಅಮ್ಮನವರ ಕರಗ ಮಹೋತ್ಸವದ ಅಂಗವಾಗಿ ನಡೆದ ಅಗ್ನಿಕೊಂಡೋತ್ಸವದಲ್ಲಿ ಅಪಾರ ಸಂಖ್ಯೆಯ ಭಕ್ತಾದಿಗಳ ಜಯಘೋಷಗಳ ನಡುವೆ ಕರಗ ಧಾರಿ ದೇವಿ ಪ್ರಸಾದ್ ಅಗ್ನಿಕೊಂಡ ಪ್ರವೇಶ ಮಾಡಿದರು.ಅಗ್ನಿಕೊಂಡ ಪ್ರವೇಶ: ನಗರದ ಸಿಂಗ್ರಾಬೋವಿದೊಡ್ಡಿಯಲ್ಲಿರುವ ಶ್ರೀಚಾಮುಂಡೇಶ್ವರಿ ದೇವಸ್ಥಾನದಲ್ಲಿ ಕರಗಧಾರಣೆ ಮಾಡಿದ ಬಳಿಕ ದ್ಯಾವರಸೇಗೌಡನದೊಡ್ಡಿ, ಚಾಮುಂಡಿಪುರ, ವಿನಾಯಕನ ನಗರ, ಅಂಚೇಕೆAಪೇಗೌಡನ ದೊಡ್ಡಿ, ಪೊಲೀಸ್ ಕ್ವಾರ್ಟರ್ಸ್, ಶೆಟ್ಟಿಹಳ್ಳಿ, ಮಾರ್ಗವಾಗಿ ಕುಂಬಾರ ಬೀದಿ, ಮೇಗಲ ಪೇಟೆ, ಹೂವಾಡಿಗರ ಬೀದಿ, ತಿಗಳರ ಬೀದಿ, ಐಜೂರು , ಮಲ್ಲೇಶ್ವರ ರಸ್ತೆ, ಹನುಮಂತ ನಗರ ಅಗ್ರಹಾರ, ಚಾಮುಂಡೇಶ್ವರಿ ಬಡಾವಣೆ, ಶೆಟ್ಟಿ ಬಲಜಿಗರ ಬೀದಿ, ಗಾಂಧೀನಗರ, ಕಾಯಿಸೊಪ್ಪಿನ ಬೀದಿ, ಎಂ.ಜಿ ರಸ್ತೆ ನಂತರ ರಾಜಬೀದಿ ಮಾರ್ಗವಾಗಿ ಕರಗ ಬೆಳಗ್ಗೆ 7ಕ್ಕೆ ಅಗ್ನಿಕೊಂಡ ಪ್ರವೇಶ ಮಾಡಿತು. ಅಗ್ನಿಕೊಂಡದ ಬಳಿ ಕಿಕ್ಕಿರಿದು ತುಂಬಿದ್ದ ಅಪಾರ ಸಂಖ್ಯೆಯ ಭಕ್ತಾಧಿಗಳ ಜಯಘೋಷ ಮುಗಿಲು ಮುಟ್ಟಿತ್ತು.ಹೂವಿನ ನೆಲ ಹಾಸು: ಚಾಮುಂಡೇಶ್ವರಿ ದೇವಿಯ ಕರಗ ಮಹೋತ್ಸವಕ್ಕೆ ನಗರದ ಜನತೆ ಜತೆ ಬೆಂಗಳೂರು, ಮಂಡ್ಯ ಜಿಲ್ಲೆ ಹಾಗೂ ಚನ್ನಪಟ್ಟಣ, ಮಾಗಡಿ, ಕನಕಪುರ ತಾಲೂಕಿನಿಂದಲೂ ಹೆಚ್ಚಿನ ಭಕ್ತರು ಬಂದಿದ್ದರು. ಕರಗ ಸಂಚರಿಸುವ ದಾರಿಗಳಲ್ಲಿ ಭಕ್ತಾದಿಗಳು ಹೂವಿನ ನೆಲ ಹಾಸನ್ನು ನಿರ್ಮಿಸಿ ಕರಗವನ್ನು ಬರಮಾಡಿಕೊಂಡರು. ಅಗ್ನಿಕೊಂಡದ ಬಳಿ ಪೋಲಿಸ್ ಭದ್ರತೆಯನ್ನು ಒದಗಿಸಲಾಗಿತ್ತು. ಅಗ್ನಿಕೊಂಡ ಪ್ರವೇಶದ ಆನಂತರ ಭಕ್ತರು ಅಗ್ನಿಕೊಂಡಕ್ಕೆ ಎಳ್ಳು ಮತ್ತು ಉಪ್ಪನ್ನು ಹಾಕುವ ಮೂಲಕ ಹರಕೆಯನ್ನು ತೀರಿಸಿಕೊಂಡರು. ಉತ್ಸವ ಮೂರ್ತಿಯನ್ನು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ದೇವಾಲಯದ ಆವರಣದಲ್ಲಿ ಸಿಡಿ ಉತ್ಸವದಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು.ಚಾಮುಂಡೇಶ್ವರಿಯ ದೇವಿಯ ಜತೆಗೆ ಇತರ ಎಂಟು ದೇವತೆಗಳ ಕರಗಮಹೋತ್ಸವ ನಡೆಯಿತು. ಶ್ರೀ ಆದಿಶಕ್ತಿ, ಶ್ರೀ ಮುತ್ತು ಮಾರಮ್ಮ, ಶ್ರೀ ಬಿಸಿಲು ಮಾರಮ್ಮ, ಶ್ರೀ ಮಗ್ಗದಕೇರಿ ಮಾರಮ್ಮ ದೇವತೆಗಳ ಕರಗ ಮಹೋತ್ಸವ ಮತ್ತು ಅಗ್ನಿಕೊಂಡ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST