ಕನಕಪುರ: ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲರನ್ನು ಕೂಡಲೇ ಸಚಿವ ಸಂಪುಟದಿಂದ ವಜಾಗೊಳಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರೈತರಲ್ಲಿ ಕ್ಷಮೆ ಯಾಚಿಸ ಬೇಕು ಎಂದು ಒತ್ತಾಯಿಸಿ ತಾಲ್ಲೂಕು ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಸರ್ಕಾರಕ್ಕೆ ಮನವಿ ಪತ್ರವನ್ನು ಸಲ್ಲಿಸಲಾಯಿತು.
ನಗರದ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಓಕ್ಕೊಟದ ಪದಾಧಿಕಾರಿಗಳು ಹಾಗೂ ಸದಸ್ಯರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ತಾಲ್ಲೂಕು ತಹಶೀಲ್ದಾರರ ಕಚೇರಿಗೆ ಮನವಿ ಪತ್ರ ಸಲ್ಲಿಸಿದರು ಬಳಿಕ ಒಕ್ಕೂಟದ ಅಧ್ಯಕ್ಷ ಕುಮಾರಸ್ವಾಮಿ ಮಾತನಾಡಿ ಒಂದು ಜವಾಬ್ದಾರಿಯುತ ಹುದ್ದೆಯನ್ನು ಅಲಂಕರಿಸಿರುವ ಸಚಿವ ಶಿವನಾಂದ ಪಾಟೀಲರು ರೈತರ ಬಗ್ಗೆ ಬಹಳ ಹಗುರವಾಗಿ ಮಾತನಾಡುವುದು ಅವರಿಗೆ ಚಾಳಿಯಾಗಿದ್ದು ಸರ್ಕಾರದ ಪರಿಹಾರದ ಹಣಕ್ಕಾಗಿ ರೈತರು ಬರಗಾಲ ಬರಲಿ ಎಂದು ಎದುರು ನೋಡುತ್ತಿರುತ್ತಾರೆ ಎನ್ನುವ ಮೂಲಕ ನಾಡಿನ ಅನ್ನದಾತರ ಕುಲಕ್ಕೆ ಅಪಮಾನ ಮಾಡಿರುವುದು ಅತ್ಯಂತ ನೋವಿನ ಸಂಗತಿ ಹಾಗೂ ಖಂಡನೀಯವಾದುದು.
ಇದೇ ರೈತರು ಬೆಳೆಯುವ ಅನ್ನವನ್ನೇ ತಿನ್ನುವ ಸಚಿವರು ರೈತರ ಬಗ್ಗೆ ಹೀಗಿ ಅಸಡ್ಡೆಯಾಗಿ ಮಾತನಾಡುವುದು ಅವರ ಗೌರವಕ್ಕೆ ಶೋಭೆಯಲ್ಲ.ಇಂತಹ ಹೊಣೆಗೇಡಿ ಸಚಿವರನ್ನು ತಮ್ಮ ಸಚಿವ ಸಂಪುಟದಲ್ಲಿ ಮಂತ್ರಿಯಾಗಿ ಇಟ್ಟುಕೊಂಡಿರುವ ತಪ್ಪಿಗೆ ಮುಖ್ಯಮಂತ್ರಿಗಳೇ ಸ್ವತಃ ರೈತ ಕುಲಕ್ಕೆ ಕ್ಷಮೆಯನ್ನು ಯಾಚಿಸಿ ಶಿವಾನಂದ ಪಾಟೀಲರನ್ನು ಕೂಡಲೇ ಸಂಪುಟದಿಂದ ಕೈಬಿಡಬೇಕು, ಇನ್ನು ಮುಂದೆ ಯಾವೊಬ್ಬ ಶಾಸಕರಾಗಲೀ ಅಥವಾ ಸಚಿವರಾಗಲೀ ರೈತರ ಬಗ್ಗೆ ಹಗುರವಾಗಿ ಮಾತನಾಡದಂತೆ ತಮ್ಮ ಮಂತ್ರಿ ಗಳಿಗೆ ಬುದ್ಧಿ ಹೇಳಬೇಕೆಂದು ಆಗ್ರಹಿಸಿದರು.
ರೈತಸಂಘದ ಜಿಲ್ಲಾಧ್ಯಕ್ಷ ಚೀಲೂರು ಮುನಿರಾಜು ಹಾಗೂ ಮುಳ್ಳಹಳ್ಳಿ ಮಂಜುನಾಥ್ ಮಾತನಾಡಿ ಸರ್ಕಾರ ಕೊಡು ವ ಬಿಟ್ಟಿ ಭಾಗ್ಯಗಳಿಗೆ ಯಾವ ರೈತರೂ ಕಾದು ಕುಳಿತಿಲ್ಲ, ಇಂದಿಗೂ ತಮ್ಮ ಹೊಲಗದ್ದೆಗಳಲ್ಲಿ ಬೆವರು ಸುರಿಸಿ ಶ್ರಮ ದಿಂದಲೇ ಸ್ವಾಭಿಮಾನದಿಂದ ಜೀವನ ನಡೆಸುತ್ತಿದ್ದಾರೆ, ಅವರಿಗೆ ಯಾರ ದಾಕ್ಷಿಣ್ಯವೂ ಅಗತ್ಯವಿಲ್ಲ,ರೈತರ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದು ಆಡಳಿತ ನಡೆಸುವ ರಾಜಕಾರಣಿಗಳು ಅಧಿಕಾರ ಸಿಕ್ಕ ಕೂಡಲೇ ಅದೇ ರೈತರ ನ್ನು ಅಪಮಾನಿಸುತ್ತಾ ಅವರು ಬೆಳೆದ ಅನ್ನವನ್ನು ತಿಂದು ಅವರನ್ನೇ ಕೀಳಾಗಿ ಕಾಣುವ ಇಂತಹ ಲಜ್ಜೆಗೆಟ್ಟವರಿಗೆ ಮುಂದಿನ ದಿನಗಳಲ್ಲಿ ರೈತರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.
ರೈತಸಂಘದ ಡಿ.ಕೆ.ರಾಮಕೃಷ್ಣ, ಅಭಿಷೇಕ್, ಕುಮಾರ್, ಕಿರಣ್ಕುಮಾರ್, ಕನ್ನಡಪರ ಸಂಘಟನೆಗಳ ಮುಖಂಡ ರಾದ ವೀರೇಶ್,ಜಯಸಿಂಹ, ಆಂತೋಣಿ ರಾಜು, ಕೆ.ಎಸ್.ಭಾಸ್ಕರ್, ಗಬ್ಬಾಡಿ ಕಾಡೇಗೌಡ, ಶಿವಣ್ಣ, ಹೊಸದುರ್ಗ ಪ್ರಶಾಂತ್, ಪುಟ್ಟರಾ
ಮು, ಕುಮಾರ್, ನಂದೀಶ್, ಮಾದೇಶ್,ರಾಜು, ಪುಟ್ಟಮಾದೇಗೌಡ ಸೇರಿದಂತೆ ಹಲವರುಪ್ರತಿಭಟನೆ ಯಲ್ಲಿ ಭಾಗಿಯಾಗಿದ್ದರು.