ಬೆಂಗಳೂರು: ನಿನ್ನೆ ಬೆಳಗ್ಗೆ ಮಾಗಡಿ ರಸ್ತೆಯ ಮಾದಪಟ್ಟಣ ಬಳಿ ಕ್ವಾರಿ ಕುಸಿದು 7 ಜನ ಮೃತಪಟ್ಟ ಸಂಬಂಧ ಇದೀಗ ಅಧಿಕಾರಿಗಳಿಂದ ಘಟನೆಗೆ ಕಾರಣ ಏನು ಎಂಬುದು ಪ್ರಾಥಮಿಕ ವರದಿ ಸಿದ್ಧಪಡಿಸಲಾಗಿದೆ.ಈ ವರದಿಯನ್ನು ಸಂಬಂಧಪಟ್ಟವರಿಗೆ ತಲುಪಿಸಲಾಗುವುದು. ವರದಿಯಲ್ಲಿ ಮೇಲ್ನೋಟಕ್ಕೆ ಏಳು ಜನ ಸಾವಿನ ದುರಂತಕ್ಕೆ ಕ್ವಾರಿ ಮಾಲೀಕರ ನಿರ್ಲಕ್ಷ್ಯವೇ ಕಾರಣ ಎಂದು ಹೇಳಲಾಗುತ್ತಿದೆ. ಹೀಗಾಗಿ ಅವರ ಪರವಾನಗಿಯನ್ನು ಅಮಾನತು ಪಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಕ್ವಾರಿ ಮಾಲೀಕರ ಪರವಾನಿಗಿ ಅಮಾನತು ಪಡಿಸಿದರೆ ಆ ಸ್ಥಳದಲ್ಲಿ ಕಾಮಗಾರಿ ನಡೆಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಇದು ಮುಂದಿನ ದಿನಗಳಲ್ಲಿ ಸಂಬಂಧಪಟ್ಟವರ ಮೇಲೆ ಕ್ರಮ ಜರುಗಿಸಿದರೆ ಈ ಕಾಮಗಾರಿ ನಡೆಸುವವರಿಗೆ ಎಚ್ಚರಿಕೆಯ ಗಂಟೆಯಾಗಿರುತ್ತದೆ. ಕ್ವಾರಿ ಸ್ಫೋಟಿಸಲು ಅನುಸರಿಸಬೇಕಾದ ಮಾರ್ಗ ಸೂಚನೆಗಳ ಕ್ರಮ ಜರುಗಿಸಿದ್ದಾರೆಇಲ್ಲವೇ ಎಂಬುದ ಸಹ ವರದಿಯಲ್ಲೇ ಉಲ್ಲೇಖಿಸಲಾಗಿದೆ ಎಂದು ಹೇಳಲಾಗುತ್ತಿದೆ. ಒಟ್ಟಾರೆ ನಿನ್ನೆ ನಡೆದ ಘಟನೆ ಬಗ್ಗೆ ತಪ್ಪಿಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಿದರೆ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ತಡೆಯಬಹುದು ಎಂದು ಸಾರ್ವಜನಿಕ ಅಭಿಪ್ರಾಯವಾಗಿದೆ.



