ದೊಡ್ಡಬಳ್ಳಾಪುರ: ನಗರದ ಕೋಟೆ ರಸ್ತೆಯಲ್ಲಿರುವ ಕಿಲ್ಲಾ ಮಸೀದಿಯಲ್ಲಿ ಮೊಹರಂ ಅಂಗವಾಗಿ ಹಸೇನ್-ಹುಸೇನ್ ಆಚರಣೆ ಶುಕ್ರವಾರ ಶ್ರದ್ಧಾ,ಭಕ್ತಿಯಿಂದ ನಡೆಯಿತು.ಪ್ರತಿ ವರ್ಷವೂ ಮೊಹರಂ ನಂತರದ 7ನೇ ದಿನಕ್ಕೆ ನಡೆಯಲಿರುವ ಆಚರಣೆಯಲ್ಲಿ ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಮುಸ್ಲಿಮರು ಧಾರ್ಮಿಕ ವಿಧಿಗಳಲ್ಲಿ ಭಾಗವಹಿಸಿ ಪ್ರಾರ್ಥನೆ ಸಲ್ಲಿಸಿದರು. ನಂತರ ಶಿಯಾ ಮುಸ್ಲಿಮರು ಬ್ಲೇಡು, ಕತ್ತಿ ಮೊದಲಾದ ಹರಿತವಾದ ಆಯುಧಗಳಿಂದ ಎದೆ ಚಚ್ಚಿಕೊಳ್ಳುವ ಮೂಲಕ ರಕ್ತಸಿಕ್ತ ದೇಹವನ್ನು ಹುಸೇನ್ ದೇವರಿಗೆ ಅರ್ಪಿಸಿದರು.ನಗರದ ಕೋಟೆ ರಸ್ತೆಯಲ್ಲಿರುವ ಕಿಲ್ಲಾ ಮಸೀದಿಯಲ್ಲಿ ಅಂಜುಮನ್ ಎ ಹೈದರಿಯ ಸಂಘಟನೆ ನೇತೃತ್ವದಲ್ಲಿ ಮತ್ತು ಹುಸೇನ್ ಕಮಿಟಿ ಸಹಕಾರದಲ್ಲಿ ಮೊಹರಂ ಆಚರಣೆ ನಡೆಸಲಾಗುತ್ತದೆ. ಇಮಾಮ್ ಹುಸೇನ್ ತ್ಯಾಗ ಬಲಿದಾನವನ್ನು ಸ್ಮರಿಸಲಾಗುತ್ತದೆ. ದಕ್ಷಿಣ ಭಾರತದಲ್ಲಿ ದೊಡ್ಡಬಳ್ಳಾಪುರವು ಈ ಆಚರಣೆ ನಡೆಯುವ ಪ್ರಮುಖ ಸ್ಥಳ. ಸುಮಾರು 269 ವರ್ಷಗಳಿಂದ ಈ ಆಚರಣೆಯನ್ನ ಆಚರಿಸಲಾಗುತ್ತಿದೆ.



