ಹೊಸಕೋಟೆ: ತಾಲೂಕಿನ ಅನುಗೊಂಡನಹಳ್ಳಿ ಹೋಬಳಿಯ ದಾಮೋದರ್ನಗರ, ಹಾರೋಹಳ್ಳಿ ಬಳಿ ರೂ. 8 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾದ ಸೇತುವೆಯನ್ನು ಸಂಸದ ಬಿ.ಎನ್.ಬಚ್ಚೆಗೌಡ ಹಾಗೂ ಶಾಸಕ ಶರತ್ ಬಚ್ಚೇಗೌಡ ಉದ್ಘಾಟಿಸಿದರು.
ಉದ್ಘಾಟನೆ ಬಳಿಕ ಸಂಸದ ಬಿ.ಎನ್.ಬಚ್ಚೇಗೌಡ ಮಾತನಾಡಿ ಸುಮಾರು 10 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕಾಮಗಾರಿಗೆ ಶಾಸಕ ಶರತ್ ಬಚ್ಚೇಗೌಡ ಶಾಸಕರಾದ ನಂತರ ಕಾಮಗಾರಿಗೆ ಉಂಟಾಗಿದ್ದ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿ ಕಾಮಗಾರಿಯನ್ನು ಪೂರ್ಣಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಈ ಸೇತುವೆ ನಿರ್ಮಾಣದಿಂದ ನೂರಾರು ವಿದ್ಯಾರ್ಥಿಗಳು, ಕಂಪನಿಗಳಿಗೆ ತೆರಳುವ ಕಾರ್ಮಿಕರಿಗೆ ಅನುಕೂಲ ಜೊತೆಗೆ ಈ ಭಾಗದ ಭೂಮಿ ಬೆಲೆ ಸಹ ಏರಿಕೆ ಆಗಿ, ವಾಹನಗಳ ಸಂಚಾರದಿಂದ ವಾಣಿಜ್ಯೇತರವಾಗಿ ಅಭಿವೃದ್ದಿ ಕಾಣಲಿದೆ. ಎಂದರು.ಶಾಸಕ ಶರತ್ ಬಚ್ಚೇಗೌಡ ಮಾತನಾಡಿ ಮುತ್ಕೂರು, ದಾಮೋದರ್ನಗರ, ಹಾರೋಹಳ್ಳಿ, ಅಜಗೊಂಡಹಳ್ಳಿ ಮೂಲಕ ರಾಜ್ಯ ಹೆದ್ದಾರಿ 35ಕ್ಕೆ ಸೇರುವ ಹೊನ್ನಮ್ಮಚೆನ್ನಮ್ಮ ಕಟ್ಟೆ ಬಳಿ ದಕ್ಷಿಣ ಪಿನಾಕಿನಿ ನದಿಗೆ ಅಡ್ಡಲಾಗಿ ಈ ಸೇತುವೆ ನಿರ್ಮಾಣದಿಂದ ಮುತ್ಕೂರು ಸೇರಿದಂತೆ ಸುತ್ತಮುತ್ತಲಿನ ನಾಗರೀಕರು ವೈಟ್ಫೀಲ್ಡ್ಗೆ ಸಂಚಾರ ಮಾಡಲು ಅನುಕೂಲವಾಗಲಿದೆ. ಇ
ದರಿಂದ ಸುಮಾರು 10 ಕಿ.ಮೀ.ಗಳಷ್ಟು ಬಳಸಿಕೊಂಡು ವೈಟ್ಫೀಲ್ಡ್ಗೆ ಹೋಗಬೇಕಾಗಿದ್ದರಿಂದ ಸಮಯ ಹಾಗೂ ಹಣ ಉಳಿತಾಯವಾಗಲಿದೆ.ಟಿಎಪಿಸಿಎಂಎಸ್ ಅಧ್ಯಕ್ಷ ಬಾಬುರೆಡ್ಡಿ, ಮಾಜಿ ಅಧ್ಯಕ್ಷ ಟಿ.ಸೊಣ್ಣಪ್ಪ, ರಾಜ್ಯ ರೆಡ್ಡಿ ಸಂಘದ ನಿರ್ದೇಶಕ ಎಂ.ಎ.ಕೃಷ್ಣಾರೆಡ್ಡಿ, ರೇಷ್ಮೆ ಬೆಳೆಗಾರರ ಸಂಘದ ಅಧ್ಯಕ್ಷ ಕೆ. ಕೃಷ್ಣಮೂರ್ತಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಮುತ್ಕೂರು ಸಂತೋಷ್, ಮಾಜಿ ಎಪಿಎಂಸಿ ಅಧ್ಯಕ್ಷ ಹಾರೋಹಳ್ಳಿ ದೇವರಾಜ್, ಗ್ರಾಮ ಪಂಚಾಯಿತಿ ಸದಸ್ಯ ಹಾರೋಹಳ್ಳಿ ಬಾಬು, ಮುಖಂಡರಾದ ಬೋಧನÀಹೊಸಹಳ್ಳಿ ಪ್ರಕಾಶ್, ಹಾರೋಹಳ್ಳಿ ಕೇಶವರೆಡ್ಡಿ, ಗುತ್ತಿಗೆದಾರ ನಂಜುಂಡಪ್ಪ ಇನ್ನಿತರರು ಹಾಜರಿದ್ದರು.