ರಾಮನಗರ: ಕಲ್ಲು ಗಣಿಗಾರಿಕೆ ಟಿಪ್ಪರ್ ಲಾರಿಗಳ ಸಂಚಾರದಿAದ ಉಂಟಾಗುತ್ತಿರುವ ಧೂಳಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸಿಕೊಡಬೇಕೆಂದು ಒತ್ತಾಯಿಸಿ ಹೆಗ್ಗಡಗೆರೆ ಗ್ರಾಮದ ನಿವಾಸಿಗಳು ಕಳೆದ ಒಂದು ವಾರದಿಂದ ಲಾರಿಗಳನ್ನು ಅಡ್ಡಗಟ್ಟಿ ನಡೆಸುತ್ತಿರುವ ಪ್ರತಿಭಟನೆ ಶುಕ್ರವಾರ ತಾರಕಕ್ಕೇರಿದೆ.
ಬಿಡದಿ ಪುರಸಭೆ ವ್ಯಾಪ್ತಿಯ ಹೆಗ್ಗಡಗೆರೆ ಗ್ರಾಮದಲ್ಲಿ ವಿಪರೀತ ಲಾರಿಗಳ ಓಡಾಟದಿಂದ ಉಂಟಾಗಿರುವ ಧೂಳಿನ ಸಮಸ್ಯೆ ನಿಯಂತ್ರಣಕ್ಕೆ ಪರಿಹಾರ ಮಾರ್ಗೋಪಾಯ ಕಂಡುಕೊಳ್ಳುವ ದಿಸೆಯಲ್ಲಿ ಕ್ರಷರ್ ಮಾಲೀಕರು ಹಾಗೂ ಗ್ರಾಮಸ್ಥರ ನಡುವೆ ನಡೆದ ಸಂಧಾನ ಸಭೆ ವಿಫಲವಾಯಿತು. ಈ ಹಿನ್ನೆಲೆಯಲ್ಲಿ ಪೊಲೀಸರ ನೆರವು ಪಡೆದ ಕ್ರಷರ್ ಮತ್ತು ಲಾರಿ ಮಾಲೀಕರು ಲಾರಿಗಳನ್ನು ರಸ್ತೆಗೊಳಿಸಿದ ಕಾರಣ ಗ್ರಾಮಸ್ಥರಲ್ಲಿ ಆಕ್ರೋಶದ ಕಟ್ಟೆಯೊಡೆದಿದೆ. ನಾಳೆಯಿಂದ ಪ್ರತಿಭಟನೆಯನ್ನು ತೀವ್ರಗೊಳಿಸುವ ನಿರ್ಧಾರ ಕೈಗೊಂಡಿದ್ದಾರೆ.ಹೋರಾಟದ ಹಿನ್ನೆಲೆ ಏನು?:ಬಿಡದಿ-ಮುದವಾಡಿ ಮುಖ್ಯರಸ್ತೆಯಲ್ಲಿರುವ ಹೆಗ್ಗಡಗೆರೆ ಗ್ರಾಮದಲ್ಲಿ ಪ್ರತಿದಿನ ಜಲ್ಲಿಕಲ್ಲು ಮತ್ತು ಎಂಸ್ಯಾAಡ್ ಸಾಗಣೆ ಮಾಡುವ ಟಿಪ್ಪರ್ ಲಾರಿಗಳು ಎಡೆಬಿಡದೆ ಓಡಾಡುತ್ತಿರುವ ಪರಿಣಾಮ ಮನೆಗಳಿಗೆ ಯಥೇಚ್ಚವಾಗಿ ಧೂಳು ಹರಡುತ್ತಿದೆ. ಅಲ್ಲದೆ ಹಗಲು-ರಾತ್ರಿ ಬಿಡುವಿಲ್ಲದೆ ಸಂಚರಿಸುವ ಸಾವಿರಾರು ಟಿಪ್ಪರ್ ಲಾರಿಗಳ ಶಬ್ದದಿಂದ ನಿದ್ರೆ ಮಾಡಲಾಗುತ್ತಿಲ್ಲ. ಸಣ್ಣ ಮಕ್ಕಳು ಸೇರಿದಂತೆ ಎಲ್ಲರ ಆರೋಗ್ಯದ ಮೇಲೆ ದಷ್ಪರಿಣಾಮ ಬಿರುತ್ತಿದೆ ಎಂದು ಆರೋಪಿಸಿ ಮಹಿಳೆಯರ ಆದಿಯಾಗಿ ನೂರಾರು ಗ್ರಾಮಸ್ಥರು ರಸ್ತೆಗಿಳಿದರು.ಪ್ರತಿಭಟನೆ ತೀವ್ರಗೊಳ್ಳುವ ಸೂಚನೆ ಅರಿತ ಕ್ರಷರ್ ಹಾಗೂ ಲಾರಿ ಮಾಲಿಕರು ಗ್ರಾಮದ ಕೆಲವು ಮುಖ್ಯಸ್ಥರ ಸಮ್ಮುಖದಲ್ಲಿ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಗ್ರಾಮಸ್ಥರ ಜತೆಗೆ ಶುಕ್ರವಾರ ಸಂಧಾನ ಸಭೆ ನಡೆಸಿದರು. ಈ ವೇಳೆ ಪ್ರತಿದಿನ ಲಾರಿಗಳ ಮಿತಿಮೀರಿದ ಓಡಾಟದಿಂದ ಹಾಗೂ ಕಲ್ಲು ಗಣಿಗಾರಿಕೆಯ ಸ್ಪೋಟಕ(ಬ್ಲಾಸ್ಟಿಂಗ್)ನಿAದ ಗ್ರಾಮದಲ್ಲಿ ಉಂಟಾಗುತ್ತಿರುವ ಧೂಳಿನ ಸಮಸ್ಯೆಗೆ ನಿಯಂತ್ರಣ ತರುವುದು ಹಾಗೂ ರಾತ್ರಿವೇಳೆ ಲಾರಿಗಳ ಸಂಚಾರ ನಿಷೇಧಿಸುವುದು ಸೇರಿದಂತೆ ಕೆಲವು ಷರತ್ತುಗಳನ್ನು ಪಾಲಿಸುವಂತೆ ಗ್ರಾಮಸ್ಥರು ಪಟ್ಟುಹಿಡಿದರು.ಗ್ರಾಮಸ್ಥರ ಷರತ್ತುಗಳೇನು? ಪ್ರತಿದಿನ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 9.30ರವರೆಗೆ ಲಾರಿಗಳ ಸಂಚಾರ ಬಂದ್ ಮಾಡಬೇಕು. ಶಾಲಾ ಮಕ್ಕಳಿಗೆ ಅನುಕೂಲವಾಗುವಂತೆ ಸಂಜೆ 3 ರಿಂದ 4.30 ವರೆಗೆ ಲಾರಿಗಳ ಓಡಾಟಕ್ಕೆ ಬಿಡವು ಕೊಡಬೇಕು. 10, 12 ಚಕ್ರದ ಟಿಪ್ಪರ್ ಲಾರಿಗಳಿಗೆ ನಿಯಮಿತ ಲೋಡ್ ಕಡ್ಡಾಯಗೊಳಿಸಬೇಕು. ಕಲ್ಲುಗಣಿಗಾರಿಕೆ ಬ್ಲಾಸ್ಟಿಂಗ್ ಶಬ್ದರಹಿತವಾಗಿ ಮಾಡಬೇಕು. ಭರ್ತಿ ಲಾರಿಗಳಿಗೆ ಟಾರ್ಪಲ್ ಅಳವಡಿಕೆ ಕಡ್ಡಾಯಗೊಳಿಸಬೇಕು. ಆರೋಗ್ಯ ತಪಾಸಣೆಗಾಗಿ ಗ್ರಾಮದ ಪ್ರತಿ ಕುಟುಂಬಕ್ಕೂ ವಾರ್ಷಿಕ ಇಂತಿಷ್ಟು ಸಹಾಯಧನ ನೀಡಬೇಕು ಎಂಬ ಷರತ್ತುಗಳನ್ನು ಗ್ರಾಮಸ್ಥರು ಕ್ರಷರ್ ಮಾಲೀಕರ ಮುಂದಿಟ್ಟರು.
ಮಾದಾಪಟ್ಟಣದ ಬಳಿ ಕ್ವಾರಿಯಲ್ಲಿ ಇತ್ತೀಚೆಗೆ ನಡೆದ ಬಂಡೆ ಕುಸಿತ ದುರಂತದ ಹಿನ್ನೆಲೆಯಲ್ಲಿ ಆ ಭಾಗದ ಕ್ರಷರ್ಗಳನ್ನು ತಾತ್ಕಾಲಿಕವಾಗಿ ಮುಚ್ಚಿರುವ ಕಾರಣದಿಂದ ಎಂಸ್ಯಾAಡ್ ಮತ್ತು ಜಲ್ಲಿಕಲ್ಲು ಸಾಗಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಟಿಪ್ಪರ್ ಲಾರಿಗಳು ಬಿಡದಿ ಭಾಗಕ್ಕೆ ಬರುತ್ತಿವೆ. ಹಾಗಾಗಿ ಗ್ರಾಮದಲ್ಲಿ ಲಾರಿಗಳ ಓಡಾಟ ಹೆಚ್ಚಾಗಿದ್ದು ಧೂಳಿನ ಸಮಸ್ಯೆಯೂ ಅಧಿಕವಾಗಿದೆ. ಮಾದಾಪಟ್ಟಣದ ಭಾಗದಲ್ಲಿ ಕ್ರಷರ್ಗಳು ಪುನಾರಂಭವಾಗುವವರೆಗೆ ಷರತ್ತುಗಳಿಗೆ ಬದ್ಧವಾಗಿರುವುದಾಗಿ ಕ್ರಷರ್ ಮತ್ತು ಲಾರಿಗಳ ಮಾಲೀಕರು ಒಪ್ಪಿಗೆ ಸೂಚಿಸಿದರು.ಕ್ರಷರ್ ಮತ್ತು ಲಾರಿ ಮಾಲೀಕರು ಗ್ರಾಮಸ್ಥರ ಬಹುತೇಕ ಷರತ್ತುಗಳನ್ನು ಒಪ್ಪಿಕೊಂಡರಾದರೂ ಗ್ರಾಮದ ಎಲ್ಲಾ ಕುಟುಂಬಕ್ಕೂ ವಾರ್ಷಿಕ ಸಹಾಯಧನ ನೀಡುವ ವಿಚಾರದಲ್ಲಿ ನಡೆದ ಮಾತುಕತೆಯಲ್ಲಿ ಒಮ್ಮತ ಮೂಡದ ಕಾರಣ ಸಂಧಾನ ವಿಫಲವಾಯಿತು. ಕ್ರಷರ್ ಮಾಲೀಕರು ಪೊಲೀಸರ ನೆರವಿನಿಂದ ಲಾರಿಗಳ ಸಂಚಾರ ಆರಂಭಿಸಿದರು. ಲಾರಿಗಳನ್ನು ತಡೆಯಲು ಹೋದ ಗ್ರಾಮಸ್ಥರಿಗೆ ಪೊಲೀಸರು ಅವಕಾಶ ನೀಡಲಿಲ್ಲ. ಈ ವೇಳೆ ಪೊಲೀಸರು ಮತ್ತು ಹೆಗ್ಗಡಗೆರೆ ಗ್ರಾಮಸ್ಥರ ನಡುವೆ ವಾಗ್ವಾದ ನಡೆಯಿತು. ಬದಲಾದ ಬೆಳವಣಿಗೆಯಲ್ಲಿ ಆಕ್ರೋಶಭರಿತರಾಗಿರುವ ಗ್ರಾಮಸ್ಥರು ಪ್ರತಿಭಟನೆಯನ್ನು ತೀವ್ರಗೊಳಿಸಲು ನಿರ್ಧರಿಸಿದರು. ಸಧ್ಯ ಗ್ರಾಮದಲ್ಲಿ ಬಿಗುವಿನ ವಾತಾವರಣ ಕಂಡುಬAದಿದೆ.
ಲಾರಿಗಳನ್ನು ಅಡ್ಡಗಟ್ಟಿದ ಹೆಗ್ಗಡಗೆರೆ ಗ್ರಾಮಸ್ಥರು : ಗ್ರಾಮಸ್ಥರೊಂದಿಗೆ ಕ್ರಷರ್ ಮತ್ತು ಲಾರಿ ಮಾಲೀಕರ ಸಂಧಾನ ಸಭೆ ವಿಫಲ | ಪೊಲೀಸರ ನೆರವಿನಿಂದ ಲಾರಿಗಳ ಸಂಚಾರ ಆರಂಭ



