ತಿ.ನರಸೀಪುರ: ದಿ.ಕಾನ್ ಸಿಂಗ್ ರಾಜ್ ಪುರೋಹಿತ್, ಗೌರಿದೇವಿ ರವರ 18ನೇ ವರ್ಷದ ಸ್ಮರಣಾರ್ಥವಾಗಿ ರೋಟರಿ ಸಂಸ್ಥೆ ಮಾಜಿ ಅಧ್ಯಕ್ಷ ಡಾ. ಕೆ.ಮಹೇಂದ್ರ ಸಿಂಗ್ ಕಾಳಪ್ಪ, ಮತ್ತು ಕೊಯಮತ್ತೂರು ಅರವಿಂದ ಕಣ್ಣಿನ ಆಸ್ಪತ್ರೆ, ಕರೋಹಟ್ಟಿ ಗ್ರಾಮಸ್ಥರ ಸಂಯುಕ್ತ ಆಶ್ರಯದಲ್ಲಿ ಬೃಹತ್ ಉಚಿತ ಕಣ್ಣಿನ ತಪಾಸಣಾ ಶಿಬಿರ ನಡೆಯಿತು.
ತಾಲ್ಲೂಕಿನ ಕರೋಹಟ್ಟಿ ಗ್ರಾಮದ ಶ್ರೀ ಗುರುಮಲ್ಲೇಶ್ವರ ಮಠದಲ್ಲಿ ಮಹೇಂದ್ರಸಿಂಗ್ ಕಾಳಪ್ಪ ರವರ ತಂದೆ ಕಾನ್ ಸಿಂಗ್ ತಾಯಿ ಗೌರಿದೇವಿ ರವರ ಸ್ಮರಣಾರ್ಥವಾಗಿ ಆಯೋಜಿಸಿದ್ದ ಬೃಹತ್ ಉಚಿತ ಕಣ್ಣಿನ ತಪಾಸಣಾ ಶಿಬಿರ ಕಾರ್ಯಕ್ರಮ ಕುರಿತು ಮಹೇಂದ್ರ ಸಿಂಗ್ ಕಾಳಪ್ಪ ಮಾತನಾಡಿ ಪ್ರಸ್ತುತ ದಿನದಲ್ಲಿ ಆರೋಗ್ಯ ಚಿಕಿತ್ಸೆ ವೆಚ್ಚ ದುಬಾರಿಯಾಗಿದೆ. ಗ್ರಾಮೀಣ ಪ್ರದೇಶದ ಬಡ ಜನತೆಗೆ ಅನುಕೂಲವಾಗಲಿ ಎಂದು ನಮ್ಮ ತಂದೆ ತಾಯಿ ಹೆಸರಿನಲ್ಲಿ 18 ವರ್ಷಗಳಿಂದ ಕಣ್ಣಿನ ಆರೋಗ್ಯ ತಪಾಸಣಾ ಶಿಬಿರ ಶಿಬಿರವನ್ನು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದೇನೆ. ಶಿಬಿರದ ಸದುಪಯೋಗವನ್ನು ಅನೇಕ ಜನ ಪಡೆದುಕೊಂಡಿದ್ದಾರೆ. ದಿನಾಂಕ 13 -6- 2026 ಎರಡನೇ ಶನಿವಾರದಂದು ಬನ್ನೂರಿನ ರೋಟರಿ ಶಾಲೆ ಆವರಣದಲ್ಲಿ ಉಚಿತ ಕಣ್ಣಿನ ತಪಾಸಣ ಶಿಬಿರವನ್ನು ಏರ್ಪಡಿಸಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶಿಬಿರದ ಸದುಪಯೋಗ ಪಡೆದುಕೊಳ್ಳಿ ಎಂದರು.ಕೊಯಮತ್ತೂರು ಅರವಿಂದ ಕಣ್ಣಿನ ಆಸ್ಪತ್ರೆ ನುರಿತ ವೈದ್ಯರಿಂದ ತಪಾಸಣೆ ನಡೆಸಿ ಶಸ್ತ್ರ ಚಿಕಿತ್ಸೆಗೆ ಒಳಪಡುವ ರೋಗಿಗಳನ್ನು ನಮ್ಮ ಸಾರಿಗೆ ವ್ಯವಸ್ಥೆಯಲ್ಲಿ ಉಚಿತವಾಗಿ ಕರೆದುಕೊಂಡು ಹೋಗಿ ಶಸ್ತ್ರ ಚಿಕಿತ್ಸೆ ಮುಗಿದ ನಂತರ ರೋಗಿಗಳ ಗ್ರಾಮಕ್ಕೆ ವಾಪಸ್ ತಂದು ಬಿಡಲಾಗುವುದು ಎಂದರು.ವೈದ್ಯರುಗಳಾದ ಡಾ. ಶಿವಾನಿ ನಮಲ, ಡಾ.ಕಾಜೊಲ್ ಪಾಟೀಲ್, ಡಾ.ರೋಷಿಣಿ, ಸಂಯೋಜಕ ಡಾ.ವಿಜಯ್ ಮಾತನಾಡಿದರು.ಈ ಸಂದರ್ಭದಲ್ಲಿ ಕೆ.ಎಂ. ಶಿವಮೂರ್ತಿ, ಕೆ.ಎನ್. ಆನಂದ್, ಗೌಡ್ರು ಮಾದಪ್ಪ, ರಾಜಶೇಖರ್, ನಂಜುಂಡಪ್ಪ, ಚಂದ್ರು ಮೂಗೂರು, ಶಂಕರ್ ನಾಗ್, ರಾಜೇಶ್, ಮಹೇಂದ್ರ, ರಮೇಶ್, ಹರ್ಷವರ್ಧನ್, ಜೀವನ್, ಬಸವರಾಜು, ಪವನ್, ಉಮೇಶ್, ಮಲ್ಲೇಶ್, ಮಲ್ಲಿಕಾರ್ಜುನ ಸ್ವಾಮಿ, ಶಂಭು ನಂಜುAಡಸ್ವಾಮಿ, ಪ್ರಭುಸ್ವಾಮಿ, ಪ್ರಕಾಶ್ ಗ್ರಾನೈಟ್ ಸೇರಿದಂತೆ ಇತರರು ಇದ್ದರು.
ಕರೋಹಟ್ಟಿ ಗ್ರಾಮದಲ್ಲಿ ಬೃಹತ್ ಉಚಿತ ಕಣ್ಣಿನ ತಪಾಸಣಾ ಶಿಬಿರ



