ದೊಡ್ಡಬಳ್ಳಾಪುರ: ತಾಲೂಕಿನ ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯದಲ್ಲಿ ಮೂರು ವರ್ಷಗಳಿಂದ ನಿಂತಿದ್ದ ದನಗಳ ಜಾತ್ರೆ ಆರಂಭವಾಗಿದ್ದು ಸಾವಿರಾರು ಸಂಖ್ಯೆಯಲ್ಲಿ ಜೋಡಿ ಎತ್ತುಗಳು ಸೇರಿದ್ದು, ಜಾತ್ರೆಯಲ್ಲಿ ಇರುವ ಜಾನುವಾರುಗಳಿಗೆ ಬಿಜೆಪಿ ಪಕ್ಷದ ಯುವಮೋರ್ಚಾದ ಯುವಕರ ತಂಡ ಉಚಿತವಾಗಿ ಮೇವು ಹಾಗೂ ರೈತರಿಗೆ ಊಟ ವ್ಯವಸ್ಥೆ ಕಲ್ಪಿಸಿದ್ದರು.
ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡ, ವಕೀಲ ಪ್ರತಾಪ್ ಮಾತನಾಡಿ ಕೊರೋನಾ ವೈರಸ್ ಹಾಗೂ ಗಂಟು ರೋಗದಿಂದ ಮೂರು ವರ್ಷಗಳ ಕಾಲ ದನಗಳ ಜಾತ್ರೆ ನಡೆದಿರಲಿಲ್ಲ. ಈ ಬಾರಿ ಅದ್ದೂರಿಯಾಗಿ ಜಾತ್ರೆ ನಡೆಯುತ್ತಿದ್ದು ಬಹಳಷ್ಟು ದೊಡ್ಡ ಸಂಖ್ಯೆಯಲ್ಲಿ ವಿವಿಧ ತಳಿಗಳ ಎತ್ತುಗಳನ್ನು ಮಾರಾಟ ಮಾಡಲು ಹಾಗೂ ಪ್ರದರ್ಶನದ ಉದ್ದೇಶದಿಂದ ಬಂದಿದ್ದಾರೆ.
ಬಿಜೆಪಿ ಯುವ ಮೋರ್ಚಾದಿಂದ ಮೂರು ದಿವಸಗಳ ಕಾಲ ಜಾನುವಾರುಗಳಿಗೆ ಉಚಿತವಾಗಿ ಮೇವು ಮತ್ತು ರೈತರಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ,ರೈತರು ಸದುಪಯೋಗ ಪಡೆದುಕೊಳ್ಳಬೇಕು. ಈ ಬಾರಿ ಸಹ ಕೊರೋನಾ ರೂಪಾಂತರ ತಳಿ ಜನರನ್ನ ಮಾಡಲಾರಂಭಿಸಿದೆ ಆರೋಗ್ಯದ ಬಗ್ಗೆ ಸಹ ಎಚ್ಚರ ವಹಿಸಬೇಕು, ಮಾಸ್ಕ್ ಬಳಕೆ ಮಾಡಬೇಕು ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಬಿಜೆಪಿ ಮುಖಂಡ ಓಬದೇನಹಳ್ಳಿ ಮುನಿಯಪ್ಪ, ಘಾಟಿ ಪಂಚಾಯ್ತಿ ಸದಸ್ಯ ವಾಸುದೇವ್, ತೂಬಗೆರೆ ಗ್ರಾಮ ಪಂಚಾಯತಿ ಸದಸ್ಯ ಕೃಷ್ಣಪ್ಪ, ಬಿಜೆಪಿ ಮುಖಂಡ ಗಂಗರಾಜು,ಲಗುಮಯ್ಯ,ಸುರೇಶ್,ಶರತ್,ಹರ್ಷ ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದರು.