ದೇವನಹಳ್ಳಿ: ಕಾರ್ತಿಕ ಮಾಸದಲ್ಲಿ ಆಂಜನೇಯ ದೇವಾಲಯದಲ್ಲಿ ದೀಪಾ ಹಚ್ಚಿದರೆ ಭಕ್ತರಿಗೆ ಕಷ್ಟಗಳು ಬೆಟ್ಟದಷ್ಟಿದ್ದರೂ ದೇವರು ದಯ ನಮ್ಮ ಮೇಲಿರುತ್ತದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಶಿವಣ್ಣ ಹೇಳಿದರು.
ದೇವನಹಳ್ಳಿ ತಾಲ್ಲೂಕು ಸೋಮತ್ನಳ್ಳಿ ದಿನ್ನೆ ಆಂಜನೇಯ ದೇವಾಲಯದಲ್ಲಿ ಕಡೆ ಕಾರ್ತಿಕ್ ಸೋಮವಾರ ಪ್ರಯುಕ್ತ ರಾತ್ರಿ ದೇವಾಲಯದ ಆವರಣದಲ್ಲಿ ಲಕ್ಷ ದೀಪೋತ್ಸವ ದಲ್ಲಿ ಮಾತನಾಡಿ ಸುಮಾರು ವರ್ಷಗಳಿಂದ ಈ ದೇವಾಲಯದಲ್ಲಿ ಭಕ್ತಾದಿಗಳ ಸಹಕಾರದಿಂದ ದೇವಾಲಯದಲ್ಲಿ ಕಾರ್ತಿಕ ಮಾಸದಲ್ಲಿ ವಿಶೇಷ ಪೂಜೆ ಹಾಗೂ ಶ್ರಾವಣ ಶನಿವಾರಗಳು ದಿನಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ ಕಾರ್ತಿಕ ಮಾಸದಲ್ಲಿ ದೇವರಿಗೆ ದೀಪ ಹಚ್ಚುವುದರಿಂದ ಮನುಷ್ಯನು ತನ್ನಲ್ಲಿರುವ ಅಜ್ಞಾನವನ್ನು ಹೋಗಲಾಡಿಸಿ.
ನಮ್ಮೊಳಗಿನ ಮನಸ್ಸು ಶುದ್ದಿ ಆಗುತ್ತದೆ ದೇವರಲ್ಲಿ ಭಕ್ತಿಭಾವ ಇದ್ದರೆ ಶಾಂತಿ ನೆಮ್ಮದಿ ಸಿಗುತ್ತದೆ ತಂತ್ರಜ್ಞಾನ ಯುಗದ ಜಂಜಾಟದಲ್ಲಿ ವಾರಕ್ಕೊಮ್ಮೆಯಾದರೂ ಅರ್ಧ ಗಂಟೆಗಳ ಕಾಲ ದೇವರನ್ನು ಪ್ರಾರ್ಥಿಸಿದರೆ ಮನಸ್ಸಿಗೆ ಶಾಂತಿ ಆರೋಗ್ಯ ವೃದ್ಧಿಯಾಗುತ್ತದೆ ಎಂದರು
ಈ ಸಂದರ್ಭದಲ್ಲಿ ಗ್ರಾಮ ಗ್ರಾಮದ ಮುಖಂಡರುಗಳಾದ ಗಣೇಶ್ ನಾರಾಯಣಸ್ವಾಮಿ ರೆಡ್ಡಿಹಳ್ಳಿ ಬಚ್ಚೇಗೌಡ ಗಂಗವಾರ ಬಚ್ಚಣ್ಣ ಚಿಕ್ಕ ಕೃಷ್ಣಪ್ಪ ಮಂಜೇಗೌಡ ಅರ್ಚಕ ಪ್ರಕಾಶ್ ಇನ್ನು ಮುಂತಾದವರು ಹಾಜರಿದ್ದರು.