ದೇವನಹಳ್ಳಿ: ಆಕಾಶ್ ವೈದ್ಯಕೀಯ ಕಾಲೇಜು ಮತ್ತುಸಂಶೋಧನಾ ಕೇಂದ್ರ ವಿದ್ಯಾರ್ಥಿಗಳಿಗೆ ಹೆಚ್ಚಿನಸೌಲಭ್ಯ ಕಲ್ಪಿಸಿ ಅನುಕೂಲ ಮಾಡಿದೆ ಎಂದು ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಉಪಕುಲಪತಿ ಡಾಕ್ಟರ್ ಎಂ. ಕೆ.ರಮೇಶ್ ತಿಳಿಸಿದರು.
ಪಟ್ಟಣದ ಪ್ರಸನ್ನ ಹಳ್ಳಿ ರಸ್ತೆಯ ಆಕಾಶ್ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಕೇಂದ್ರ ವತಿಯಿಂದ ನಡೆದ ಸುಧಾರಿತ ಸಿಮ್ಮ ಲೇಶನ್ ಸೆಂಟರ್ ಮತ್ತು ಕ್ಲಿನಿಕಲ್ಸ್ ಸ್ಕಿಲ್ಸ್ ಲ್ಯಾಬ್ ಉದ್ಘಾಟಿಸಿ ಮಾತನಾಡಿದ ಅವರು, ವಿವಿಧ ಮತ್ತು ಸ್ಟೇಷನ್ಗಳ ಪ್ರತ್ಯೇಕ ಕೊಠಡಿ ಮಾಡಲಾಗಿದೆ ವೈದ್ಯಕೀಯ ಶಿಕ್ಷಣ ಮತ್ತು ತರಪೇತಿ ಅಧ್ಯಾಧುನಿಕ ತಂತ್ರಜ್ಞಾನಗಳ ಅಳವಡಿಕೆ ಮಾಡಿದ್ದಾರೆ.
ವೈದ್ಯಕೀಯ ಕ್ಷೇತ್ರದಲ್ಲಿ ಸರ್ಜರಿಮಾಡುವ ಪರೀಕ್ಷೆ ಅನುಭವ ಮತ್ತು ಇತರೆ ವೈಜ್ಞಾನಿಕವಿಷಯಗಳ ಬಗ್ಗೆ ವಿದ್ಯಾರ್ಥಿಗಳು ಮಾಹಿತಿ ಪಡೆದುಕೊಳ್ಳಬೇಕು ಆಕಾಶ್ ಗ್ರೂಪ್ನ ಅಧ್ಯಕ್ಷರಾದ ಮುನಿರಾಜು ಅವರು ವಿದ್ಯಾರ್ಥಿಗಳ ಅಧ್ಯಯನಕ್ಕೆ ಹೆಚ್ಚಿನಭರವಸೆಯನ್ನು ನೀಡಿ
ದ್ದಾರೆ ಎಂದು ಹೇಳಿದರು.
ಆಕಾಶ್ ಇನ್ಸ್ಟಿಟ್ಯೂಟ್ಗ್ರೂಪ್ನ ಉಪಾಧ್ಯಕ್ಷ ಅಮರ್ ಗೌಡ ಮಾತನಾಡಿ ಆಕಾಶ್ ಮಡಿಕಲ್ ಮತ್ತುಸಂಶೋಧನಾ ಕೇಂದ್ರಹೊಸ ರೀತಿಯಲ್ಲಿ ಇಂತಹಕಾರ್ಯಕ್ರಮಗಳನ್ನು ರೂಪಿಸುತ್ತಿರುವುದು ವೈದ್ಯಕೀಯ ವಿದ್ಯಾರ್ಥಿಗಳಿಗೆ ಉಪಯೋಗವಾಗುತಿದೆ ಲ್ಯಾಬ್ನಲ್ಲಿ ರೋಗಿಗಳಂತೆ ಉಪಕರಣ ಜೋಡಿಸಿ ಪ್ರಯೋಗ ಮಾಡಲಾಗುತ್ತಿದೆ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಿ ಅವರನ್ನು ಉಳಿಸುವಂತೆ ಮಾಡಲುಇಂತಹ ಕೇಂದ್ರ ತುಂಬಾ ಸಹಕಾರಿಯಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಆಕಾಶ್ ಗ್ರೂಪ್ ನ ಅಧ್ಯಕ್ಷರಾದ. ಕೆ. ಮುನಿರಾಜು, ಮುಖ್ಯಸ್ಥರಾದ ಪುಷ್ಪ ಮುನಿರಾಜು, ನಿರ್ದೇಶಕ ಆಕಾಶ್, ಸಿಇಓ ಡಾ. ನರೇಶ್ ಶೆಟ್ಟಿ ಪ್ರಾಶುಂಪಾಲ ಡಾಕ್ಟರ್ ಶಿವಪ್ರಕಾಶ್, ಮೆಡಿಕಲ್ ವ್ಯವಸ್ಥಾಪಕ ಡಾಕ್ಟರ್ ಬ್ರಿಜೇಶ್ ಇದ್ದರು.