ರಾಮನಗರ: ಬಿಡದಿ ಪುರಸಭಾ ವ್ಯಾಪ್ತಿಯ ವಾರ್ಡ್ 9, 10, 11ನೇ ವಾರ್ಡ್ಗಳಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಎನ್ಡಿಎ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಪರ ಪುರಸಭಾ ಸದಸ್ಯ ಲೋಹಿತ್ಕುಮಾರ್ ಬಿ.ಜೆ. ನೇತೃತ್ವದಲ್ಲಿ ಜೆಡಿಎಸ್-ಬಿಜೆಪಿ ಮುಖಂಡರುಗಳು ಮಂಗಳವಾರ ಬಿರುಸಿನ ಮತಯಾಚನೆ ಮಾಡಿದರು.
ಬಿಡದಿ ಪಟ್ಟಣದಲ್ಲಿರುವ ಬಿಜಿಎಸ್ ವೃತ್ತದಲ್ಲಿ ಡಾ.ಭಾಲಗಂಗಾಧರನಾಥಸ್ವಾಮೀಜಿ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಂತರ ಮನೆಮನೆ ಪ್ರಚಾರ ನಡೆಸಿದ ವೇಳೆ ಪುರಸಭಾ ಸದಸ್ಯ ಲೋಹಿತ್ಕುಮಾರ್ ಬಿ.ಜೆ. ಮಾತನಾಡಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಎನ್ಡಿಎ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಅವರು ಸರಳ, ಸಜ್ಜನಿಕೆಯ ವ್ಯಕ್ತಿತ್ವ ಉಳ್ಳವರಾಗಿದ್ದು, ಮತದಾರರು ಒಪ್ಪುವ ಉತ್ತಮ ಅಭ್ಯರ್ಥಿಯಾಗಿದ್ದಾರೆ.
ಅಲ್ಲದೆ ಮನಸ್ಸಿನಲ್ಲಿ ಉಳಿದಿರುವ ಒಬ್ಬ ಸಹೃದಯವಂತರಾಗಿದ್ದಾರೆ, ಈ ಚುನಾವಣೆ ಜನತೆಯ ಚುನಾವಣೆಯಾಗಿ ಮಾರ್ಪಟ್ಟಿದ್ದು, ಅವರ ಸ್ಪರ್ಧೆಯಿಂದ ಈ ಕ್ಷೇತ್ರದತ್ತ ಎಲ್ಲರ ಗಮನ ಸೆಳೆಯುವ ಮೂಲಕ ಹೆಚ್ಚು ಮಹತ್ವ ಪಡೆದಿದೆ ಎಂದರು.ಮಾಗಡಿ ವಿಧಾನಸಭಾ ಕ್ಷೇತ್ರದಾಧ್ಯಂತ ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ಒಟ್ಟಾಗಿ ಸೇರಿ ವಾರ್ಡಿನ ಎಲ್ಲ ಮನೆಗಳಿಗೆ ತೆರಳಿ ಮತಯಾಚನೆ ಮಾಡಿ ಮೈತ್ರಿ ಅಭ್ಯರ್ಥಿಗೆ ಮತ ಕೇಳುತ್ತಿದ್ದು, ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.
ಜೆಡಿಎಸ್ ವರಿಷ್ಟರಾದ ಎಚ್.ಡಿ.ದೇವೇಗೌಡ ಅವರ ಕೊಡುಗೆಗಳು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮಗಳು, ಎ.ಮಂಜುನಾಥ್ ಅವರು ಶಾಸಕರಾಗಿದ್ದಾಗ ಕೈಗೊಂಡ ಅಭಿವೃದ್ದಿ ಕಾರ್ಯಗಳನ್ನು ಜನರು ಒಪ್ಪಿದ್ದಾರೆ. ಆಗಾಗಿ ಪಕ್ಷಾತೀತವಾಗಿ ಮತದಾರರು ಮೈತ್ರಿ ಅಭ್ಯರ್ಥಿಯ ಪರ ಒಲವು ತೋರುತ್ತಿದ್ದು, ಈ ಚುನಾವಣೆಯಲ್ಲಿ ಮಂಜುನಾಥ್ ಗೆಲುವು ನಿಶ್ಚಿತ ಎಂದು ತಿಳಿಸಿದರು.
ಮತ ಪ್ರಚಾರದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್.ಎಲ್.ಚಂದ್ರು, ಹಿರಿಯ ಮುಖಂಡ ಚಿಕ್ಕಣ್ಣಯ್ಯ, ಬಿಡದಿ ಪುರಸಭಾ ಸದಸ್ಯರಾದ ಹರಿಪ್ರಸಾದ್, ರಮೇಶ್ ಕೆ.ಎನ್, ಮಾಜಿ ಸದಸ್ಯ ಬಿ.ಎಂ. ರಮೇಶ್ಕುಮಾರ್, ಮುಖಂಡರಾದ ಆಯಿಷಖಲೀಲ್, ವಿನಾಯಕಸ್ವಾಮಿ, ಗುರುಲಿಂಗಯ್ಯ, ಅನಂತು, ಗಿರೀಶ್ಗೌಡ, ಬಾನಂದೂರುಪ್ರಸನ್ನ, ರಾಜೇಶ್ ಬನ್ನಿಕುಪ್ಪೆ, ಸಂದೀಪ್, ಪೋಲೀಸ್ರೇವಣ್ಣ ಸೇರಿದಂತೆ ಹಲವರು ಇದ್ದರು.