LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಕರ್ನಾಟಕ ಸಂಪಾದಕರ ಮತ್ತು ವರದಿಗಾರರ ಸಂಘದ ಮುಳಬಾಗಿಲು ಘಟಕದ ಪತ್ರಿಕಾ ಭವನದ ಉದ್ಘಾಟನೆ ಹಾಗೂ 6ನೇ ವರ್ಷದ ಪತ್ರಿಕಾ ದಿನಾಚರಣೆ

ಬೆಂಗಳೂರು: ದಿನಾಂಕ 11 -8 -2024 ಭಾನುವಾರದಂದು ಮುಳಬಾಗಿಲುನಲ್ಲಿ, ಕರ್ನಾಟಕ ಸಂಪಾದಕರ ಮತ್ತು ವರದಿಗಾರರ ಸಂಘದ ಮುಳಬಾಗಿಲಿನ ಘಟಕದ ಪತ್ರಿಕಾ ಭವನ ಉದ್ಘಾಟನೆ ಹಾಗೂ ಡಿ.ವಿ.ಜಿ. ಕನ್ನಡ ಗಡಿ ಭವನದಲ್ಲಿ 6ನೇ ವರ್ಷದ ಪತ್ರಿಕಾ ದಿನಾಚರಣೆಯ ಸುಂದರ ಸಮಾರಂಭ ಅದ್ದೂರಿಯಾಗಿ ಜರುಗಿತು.

ಮುಳಬಾಗಿಲು ಘಟಕದ ಪತ್ರಿಕಾ ಭವನವನ್ನು ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಶಾಸಕರಾದ ಸಮೃದ್ಧಿ ಮಂಜುನಾಥ್ ಉದ್ಘಾಟಿಸಿ ಮಾತನಾಡಿ ಕೇರಾ ಮುಳುಬಾಗಿಲು ಘಟಕದ ಪತ್ರಕರ್ತರ ಕಾರ್ಯಕ್ಷಮತೆಯನ್ನು ಶ್ಲಾಘಿಸಿ, ಇನ್ನೂ ಹೆಚ್ಚು ಸಾಧನೆ ಮಾಡಬೇಕೆಂದರು. ಮತ್ತು ತಮ್ಮೆಲ್ಲರ ಕೆಲಸಗಳಿಗೂ ನನ್ನ ಸಹಕಾರ ಸದಾ ಇರುತ್ತದೆಂದರು.ಘಟಕದ ಪದಾಧಿಕಾರಿಗಳು ನೀಡಿದ ಶಾಶ್ವತ ಪತ್ರಿಕಾ ಭವನದ ಮನವಿಯನ್ನು ಪುರಸ್ಕರಿಸಿ, ಶಾಶ್ವತ ಪತ್ರಿಕಾಭವನವನ್ನು ಕಲ್ಪಿಸಿ ಕೊಡುವುದಾಗಿ ಭರವಸೆ ನೀಡಿದರು.

ಕೋಲಾರ ಜಿಲ್ಲಾಧ್ಯಕ್ಷರಾದ ರಾಜಗೋಪಾಲ್ ಅಧ್ಯಕ್ಷತೆ ವಹಿಸಿದರೆ, ನಿಕಟಾಪೂರ್ವ ಕೇರಾ ರಾಜ್ಯಾಧ್ಯಕ್ಷರಾದ ಕಲಾವಿದ ವಿಷ್ಣು ಅವರು ಪ್ರಸ್ತಾವಿಕ ನುಡಿಗಳನ್ನಾಡಿ ಸಂಘ ನಡೆದು ಬಂದ ದಾರಿ ಸಂಘಕ್ಕೆ ಶ್ರಮಿಸಿದವರನ್ನುಸ್ಮರಿಸಿ, ಸಂಘದ ಏಳುಬೀಳುಗಳನ್ನು ಬಿಡಿಸಿಟ್ಟು, ಸಂಘವು ಪತ್ರಕರ್ತರ ಪ್ರಗತಿಯತ್ತ ದಾಪುಗಾಲು ಹಾಕಿದೆಯೆಂದು, ಮುಳಬಾಗಿಲು ಪತ್ರಕರ್ತರ ಸಾಧನೆಯನ್ನು ಶ್ಲಾಘಿಸಿ, ಮುಳುಬಾಗಿಲು ಪತ್ರಕರ್ತರಿಗೆ ಶಾಶ್ವತ ಪತ್ರಿಕಾ ಭವನ ಘೋಷಿಸಿದ ಶಾಸಕ ಸಮೃದ್ಧಿ ಮಂಜುನಾಥ್ ರನ್ನು ಅಭಿನಂದಿಸಿದರು.

ಮುಖ್ಯ ಅತಿಥಿಗಳಾಗಿ ಕೇರಾ ರಾಜ್ಯಾಧ್ಯಕ್ಷರಾದ ಜಿ. ನಾಗರಾಜ್, ಉಪಾಧ್ಯಕ್ಷರಾದ ಸಿದ್ದಪ್ಪ ನೇಗಲಾಲ, ಪ್ರಧಾನ ಕಾರ್ಯದರ್ಶಿ ಇ.ಎಸ್ ವಿಶ್ವನಾಥ್, ಕಾರ್ಯದರ್ಶಿ ಚೇತನ್ ಬಾಬು, ಬೆಂಗಳೂರು ನಗರ ಜಿಲ್ಲಾಧ್ಯಕ್ಷರಾದ ಉಮೇಶ್, ಇನ್ನಿತರ ಜಿಲ್ಲೆಗಳ ಅಧ್ಯಕ್ಷರು ಅಧಿಕಾರಿಗಳು, ಮುಂತಾದವರು ಆಗಮಿಸಿ ವೇದಿಕೆ ಅಲಂಕರಿಸಿದ್ದರು.

ಘಟಕದ ಪದಾಧಿಕಾರಿಗಳು ವೇದಿಕೆ ಗಣ್ಯರನ್ನು ಸನ್ಮಾನಿಸಿ ಗೌರವಿಸಿದರು ಮತ್ತು ಪತ್ರಕರ್ತರಿಗೆ ಜಿಲ್ಲಾ ಪ್ರಶಸ್ತಿ ನೀಡಿ, ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನಿಸಿದರು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪುರಸ್ಕರಿಸಿದರು. ವಿಶೇಷ ಆಹ್ವಾನಿತರಿಗೆ ಅಭಿನಂದಿಸಿದರು. ಜಿಲ್ಲಾ ವಾರ್ಷಿಕ ಪ್ರಶಸ್ತಿ ಪುರಸ್ಕೃತರಾದ ಕೋಲಾರ ಜಿಲ್ಲೆಯ ಜೆ ಆಲ್ಬರ್ಟ್ ಮನೋರಾಜ್, ಕೆಜಿಎಫ್ ನ ಡಾ. ಜಿ. ಜಯಂತಿ, ಮುಳಬಾಗಿಲಿನ ಜಗದೀಶ್, ಬಂಗಾರಪೇಟೆಯ ಟೈಗರ್ ಮಂಜುನಾಥ್, ಶ್ರೀನಿವಾಸಪುರದ ಜಗದೀಶ್ ಕುಮಾರ್ ಅವರಿಗೆ ಪ್ರಶಸ್ತಿಗಳನ್ನಿತ್ತು ಪುರಸ್ಕರಿಸಿ, ವಿವಿಧ ಕ್ಷೇತ್ರಗಳ ಸಾಧಕರಾದ ಕೋಲಾರದ ರುಮಾನ ಕೌಸರ್, ಮುಳಬಾಗಿಲಿನ ನಾಗರಾಜ್, ಬಂಗಾರಪೇಟೆಯ ಶ್ರೀಮತಿ ಜಿ. ನಿವೇದ, ಶ್ರೀನಿವಾಸಪುರದ ಹೂವಳ್ಳಿ ಅಂಬರೀಶ್, ಕೆಜಿಎಫ್ ನ ಪ್ರಕಾಶ್ ಅವರನ್ನು ಪ್ರೀತಿಪೂರ್ವಕವಾಗಿ ಅಭಿನಂದಿಸಿ, ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮುಳಬಾಗಿಲು ತಾಲ್ಲೂಕು ಘಟಕದ ಅಧ್ಯಕ್ಷರಾದ ವಿ. ಚಲಪತಿ, ಗೌರವಾಧ್ಯಕ್ಷ ಕೇಸರಿ ಶಂಕರ್, ಪ್ರಧಾನ ಕಾರ್ಯದರ್ಶಿ ಸೈಯದ್ ಝಲ್ಪೀಕರ್, ಖಜಾಂಚಿ ಎಸ್.ಕೆ.ಪ್ರವೀಣ್, ಸಹ ಕಾರ್ಯದರ್ಶಿ ಜಗದೀಶ್, ಮತ್ತಿತರ ಸದಸ್ಯರು ಹಾಗೂ ಕೋಲಾರ ಜಿಲ್ಲಾ ಘಟಕದ ಪದಾಧಿಕಾರಿಗಳು, ಶ್ರೀನಿವಾಸಪುರ ತಾಲ್ಲೂಕು ಘಟಕದ ಪದಾಧಿಕಾರಿಗಳು, ಬಂಗಾರಪೇಟೆ ತಾಲ್ಲೂಕು ಘಟಕದ ಪದಾಧಿಕಾರಿಗಳು, ಕೆಜಿಎಫ್ ತಾಲ್ಲೂಕು ಘಟಕದ ಪದಾಧಿಕಾರಿಗಳು, ಮಾಲೂರು ತಾಲ್ಲೂಕು ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು