LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಥೈಲ್ಯಾಂಡ್‍ನಲ್ಲಿ ಇಂಟರ್ನ್ಯಾಷನಲ್ ಗೋಲ್ಡ್ ಸ್ಟಾರ್ ಪ್ರಶಸ್ತಿ ಪ್ರದಾನ

ಬೆಂಗಳೂರು : ಸಾಹಿತಿ ಡಾ. ಗುಣವಂತ ಮಂಜು ಅಧ್ಯಕ್ಷತೆಯ ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ, ಕನ್ನಡಾಂಬೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘ ಹಾಗೂ ಇಂಟರ್ನ್ಯಾಷನಲ್ ಅಚೀವರ್ಸ್ ಕೌನ್ಸಿಲ್ ಜಂಟಿಯಾಗಿ ಥೈಲ್ಯಾಂಡ್ ದೇಶದ ಪ್ರವಾಸ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಆಯೋಜಿಸಿತ್ತು.
ಕರ್ನಾಟಕ ರಾಜ್ಯದ ವಿವಿಧ ಕ್ಷೇತ್ರದ ಅಪ್ರತಿಮ ಸಾಧಕರು ಇಂಟರ್ನ್ಯಾಷನಲ್ ಗೋಲ್ಡ್ ಸ್ಟಾರ್ ಪ್ರಶಸ್ತಿಗೆ ಬಾಜನರಾದರು.

ಅಂತರ ರಾಷ್ಟ್ರೀಯ ನೆಲದಲ್ಲಿ ಕನ್ನಡದ ಸಾಧಕರನ್ನು ಗೌರವಿಸುವ ಮೂಲಕ ನಾಡಿನ ಸಾಂಸ್ಕೃತಿಕ ಸೊಬಗನ್ನು ತೋರಲಾಯಿತು.ಡಾ. ಸತೀಶ್ ಜಿ.ಎಸ್, ಡಾ. ಶ್ರೀನಿವಾಸ್ ಬಾಬು, ಡಾ, ಟಿ.ವಿ ಸಂಪಂಗಿ, ಡಾ.ಎಚ್ ಪುಷ್ಪಲತ ಗೌಡ, ಡಾ.ಪ್ರಕಾಶ್ ಹೆಚ್.ಸಿ, ಡಾ. ಮೀನಾ ಕುಮಾರಿ ಟಿ.ಡಿ, ಡಾ. ಸುಬ್ರಮಣ್ಯ ಶರ್ಮ ಗುರೂಜಿ, ಶ್ರೀಮತಿ ಆಶಾ ಕೆ.ಇ, ಶ್ರೀಮತಿ ವೆಂಕಟ ಲಕ್ಷ್ಮಮ್ಮ .ಎಚ್, ಶ್ರೀಮತಿ ನಿತ್ಯ ಜಿ.ಎಲ್, ಕುಮಾರಿ ಪೂರ್ಣಿಕ, ಕುಮಾರಿ ಹರ್ಷಿತ, ಶ್ರೀ ದಿಲೀಪ್ ಕುಮಾರ್, ಹಾಗೂ ಬೇಬಿ ಐರಾ ಗೌಡ ಮುಂತಾದ ಕನ್ನಡಿಗರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ವಿವಿಧ ಕ್ಷೇತ್ರದ ಸಾಧನೆಗಾಗಿ ಎಲ್ಲರನ್ನು ಅತ್ಯಂತ ಗೌರವ ಪೂರಕವಾಗಿ ಸನ್ಮಾನಿಸಿ ಪುರಸ್ಕರಿಸಲಾಯಿತು. ಐದು ದಿನಗಳ ಥೈಲ್ಯಾಂಡ್ ದೇಶದ ಪ್ರವಾಸದಲ್ಲಿ ವಿವಿಧ ಪ್ರವಾಸಿ ತಾಣಗಳನ್ನು ವೀಕ್ಷಿಸಲಾಯಿತು. ಶಾಂತಿಯ ಸಂಕೇತವಾದ ಭಗವಾನ್ ಬುದ್ಧನ ದರ್ಶನ ಎಲ್ಲರಲ್ಲೂ ಧನ್ಯತಾ ಭಾವವನ್ನು ತರಿಸಿತು.
ಭಾರತೀಯರೇ ಅತಿ ಹೆಚ್ಚು ಭೇಟಿ ನೀಡುವ ಪ್ರದೇಶ ಇದಾಗಿದೆ.

ಪ್ರವಾಸೋದ್ಯಮವೇ ಇಲ್ಲಿನ ಜನರ ಮುಖ್ಯ ಉದ್ಯೋಗವಾಗಿದೆ. ಭಾರತೀಯರ ಭೇಟಿಯೇ ಇವರು ಅಲ್ಲಿ ಬದುಕನ್ನು ನಡೆಸಲು ದೊಡ್ಡ ಮಟ್ಟದ ಸಹಕಾರ ನೀಡುತ್ತಿದೆ. ಹಿರಿಯರ ನಾಣ್ಣುಡಿಯಂತೆ ಕೋಶ ಓದಬೇಕು ದೇಶ ಸುತ್ತಬೇಕು ಅದರಿಂದ ಅನೇಕ ವಿಷಯಗಳನ್ನು ತಿಳಿದುಕೊಳ್ಳಬೇಕು ಎನ್ನುವ ಸಂದೇಶವನ್ನು ಆತ್ಮಶ್ರೀ ಬಳಗ ಥೈಲ್ಯಾಂಡ್ ದೇಶದಲ್ಲಿ ಸಾಕ್ಷಿಕರಿಸಿತು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು