LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ನಮ್ಮ ಸಾಂಪ್ರದಾಯಿಕ ಕಲೆ ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕು: ಹಿರಿಯ ಪತ್ರಕರ್ತ ಲೇಪಾಕ್ಷಿ ಸಂತೋಷರಾವ್

ಬೆಂಗಳೂರು: ನಮ್ಮ ಸಾಂಪ್ರದಾಯಿಕ ಕಲೆಗಳಾದ ಜಾನಪದ,ನೃತ್ಯ,ಸಂಗೀತ ಮುಂತಾದವುಗಳನ್ನು ಉಳಿಸಿ ಬೆಳಸಿ ಮುಂದಿನ ಪೀಳಿಗೆಗೆ ಹಸ್ತಾಂತರಸ ಬೇಕಾದ ಹೊಣಗಾರಿಕೆ ಇಂದಿನ ಯುವ ಪೀಳಿಗೆ ಮೇಲಿದೆ ಎಂದು ಹಿರಿಯ ಪತ್ರಕರ್ತರಾದ ಲೇಪಾಕ್ಷಿ ಸಂತೋಷರಾವ್ ತಿಳಿಸಿದರು.

ಭಾನುವಾರ ಬೆಂಗುಳೂರು ನಗರದ ರವೀಂದ್ರ ಕಲಾ ಕ್ಷೇತ್ರದಲ್ಲಿ ನಾಟ್ಯದೇಗುಲ ಪಬ್ಲಿಕ್ ಟ್ರಸ್ಟ್ ಹಾಗೂ ಕನ್ನಡ ಸಂಸ್ಕøತಿ ಇಲಾಖೆಯ ಸಹಯೋಗದಿಂದ ನಡೆದ ನೃತ್ಯಾಂಜಲಿ 21ನೇ ನೃತ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ ಪಾಶ್ಚಾತ್ಯ ಸಂಗೀತದ ಹಾವಳಿಗೆ ನಶಿಸಿ ಹೋಗುತ್ತಿರುವ ನಮ್ಮ ಸಾಂಪ್ರದಾಯಿಕ ಕಲೆಗಳನ್ನು ಉಳಿಸುವಲ್ಲಿ ಸ್ವಾಮಿ ರವರ ಪ್ರಯತ್ನ ಅಭಿನಂದನಾರ್ಹ ಎಂದರು.

ಮತ್ತೋರ್ವ ಅತಿಥಿ ಅರ್ತಾ ನೃತ್ಯ ಕಲಾಮಂದಿರದ ಶ್ರೀಮತಿ ಶ್ಮಿತಾ ಶ್ರೀಪತಿ ರವರು ಮಾತನಾಡಿ ನಮ್ಮ ಸಾಂಪ್ರದಾಯ ಕಲೆಗಳನ್ನು ಉಳಿಸಲು ನಾವೆಲ್ಲಾ ಪ್ರಯತ್ನ ಪಡಬೇಕು.ವಿಶೇಷವಾಗಿ ಪೋಷಕರು ತಮ್ಮ ಮಕ್ಕಳಿಗೆ ಕಲೆಗಳ ಬಗ್ಗೆ ಆಸಕ್ತಿ ಮೂಡಿಸಬೇಕು ಎಂದರು.ವಿನಾಯಕನ ಪ್ರಾರ್ಥನೆ ಯೋದಿಗೆ ಕಾರ್ಯಕ್ರಮ ಪ್ರಾರಂಭ ವಾಯಿತು.

ಪುಠಾಣಿ ಮಕ್ಕಳ ನೃತ್ಯ ಪ್ರದರ್ಶನ ತುಂಬಿದ ಸಭಾಂಗಣದಲ್ಲಿನ ಸಭಿಕರ ಮನಸೂರಗೊಂಡಿತು. ಕಾರ್ಯಕ್ರಮದ ಅಂತಿಮದಲ್ಲಿ ರಾವಣ ನೃತ್ಯ ರೂಪಕದಲ್ಲಿ ಸ್ವಾಮಿ ರವರು ಶಿವನಾಗಿ ಅಭಿನಯದ ನೃತ್ಯ, ರಾವಣನಿಗೆ ಅತ್ಮಲಿಂಗ ನೀಡುವ ಸನ್ನಿವೇಶ ನಯನ ಮನೋಹರ ವಾಗಿತ್ತು.ಸುಮಾರು 21 ವಿವಿಧ ನೃತ್ಯ ಕಲಾತಂಡಗಳಿಂದ ಪ್ರದರ್ಶಿತವಾದ ನೃತ್ಯಗಳು ನೃತ್ಯ ಕಲಾವಿದರ ಅಭಿನಯ ನೋಡುಗರಿಗೆ ನೇತ್ರಾನಂದ ಮಾಡಿತು.

ಮೋದಲು ವಿನಾಯಕನ ಪ್ರಾರ್ಥನೆಯಲ್ಲಿ ಯಕ್ಷಗಾನ, ಭರತನಾಟ್ಯ, ಮೋಹಿನಿಅಟ್ಟಂ, ಕೂಚಿಪೂಡಿ, ಮುಂತಾದ ನೃತ್ಯಗಳನ್ನು ಸಂಭಂಧಿತ ಉಡುಪು ಗಳೋಂದಿಗೆ ಮಕ್ಕಳು ಪ್ರದರ್ಶನ ಮಾಡಿದರು. ಯಶೋದ ಕೃಷ್ಣರ ಸಂವಾದದಲ್ಲಿ ಗೋವುಗಳನ್ನು ಮೇಯಿಸಲು ಕಾಡಿಗೆ ಹೋಗಬೇಕೆಂದು ಕೃಷ್ಣ ಪಟ್ಟು ಹಿಡಿದಾಗ ಯಶೋದೆ ನಯ, ಭಯದಿಂದ ಬೇಡವೆಂದು ಹೇಳಿದಾಗ ಕೃಷ್ಣ ಆಕೆಯ ಭಯವನ್ನು ದೂರಮಾಡಿ ಹೇಳುವ ನೃತ್ಯ ಬಹು ಸುಂದರವಾಗಿತ್ತು.

ಪುರಂಧರ ದಾಸರ ಜಗನ್ಮೋಹನದಲ್ಲಿ ಕೃಷ್ಣ,ಆಯೋಜಕರಾದ ಸ್ವಾಮಿ ರವರು ತಮ್ಮ ಗುರುಗಳಿಗೆ ಭಕ್ತಿ ಯನ್ನು ತೋರ್ಪಡಿಸಿ ಮಾಡಿದ ಗುರುಭಕ್ತಿ ನೃತ್ಯ,ಆನಂದ ತಾಂಡವ, ಓಂಕಾರನಾದ ಶಿವಸ್ತುತಿ,ಶಾರದಾ ವಿದ್ಯಾಲಯದ ಮಕ್ಕಳು ಪರಿಸರ ರಕ್ಷಣೆ ಬಗ್ಗೆ ನೃತ್ಯ ಪ್ರದರ್ಶನ, ಡಿವಿ ಗುಂಡಪ್ಪ ನವರ ಬೇಲೂರು ಚೆನ್ನ ಕೇಶವನ ದೇಗುಲದಲ್ಲಿನ ಮದನಿಕೆಗಳು, ಶಾಂತಲಾ ಭಂಗಿಯ ನೃತ್ಯಗಳ ಮುಂತಾದವುಗಳನ್ನು ಮಕ್ಕಳು ಪ್ರದರ್ಶಿಸಿದರು.

ಇಂದಿನ ನೃತ್ಯ ಪ್ರದರ್ಶನದಲ್ಲಿ ಗೌತಮಿ, ಶಿರೀಷ,ರಾಜೇಶ್,ಪಲ್ಲವಿ, ಕೀರ್ತನ, ಮಣೇಶ್, ಪ್ರೇರಣ, ರಕ್ಷ, ಜಾನವಿ, ಅಮೃತ, ಶಾರದಾ ವಿದ್ಯಾಲಯದ ಮಕ್ಕಳ ತಂಡಗಳು ನೃತ್ಯ ಪ್ರದರ್ಶನ ಮಾಡಿದರು. ಷಡಕ್ಷರಿ ರವರ ವಿವರಣಾತ್ಮಕ ನಿರೂಪಣೆ ಯಲ್ಲಿ ಕಾರ್ಯಕ್ರಮ ಸೊಗಸಾಗಿ ಮೂಡಿಬಂದಿತು. ನೃತ್ಯ ಗುರುಗಳಾದ ಕೋಲಾರು ರಂಏಶ್ ರವರು ಹಾಜರಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು