LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಪದ್ಮ ಶ್ರೀ ಪ್ರಶಸ್ತಿ ಪುರಸ್ಕೃತ ಡಾ.ದೊಡ್ಡರಂಗೇಗೌಡರ 79ನೇ ಹುಟ್ಟು ಹಬ್ಬ ಆಚರಣೆ

ಸಮನ್ವಯ ಸಾಹಿತಿ ಡಾ. ದೊಡ್ಡರಂಗೇಗೌಡರ ಅಭಿಮಾನಿಗಳ ಬಳಗ ಮತ್ತು ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಹಿರಿಯ ಸಾಹಿತಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ದೊಡ್ಡರಂಗೇಗೌಡರ 79 ನೇ ಹುಟ್ಟು ಹಬ್ಬವನ್ನು ಆಚರಿಸಲಾಯಿತು.

ದೀಪ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟ, ಚಲನಚಿತ್ರ ನಿರ್ದೇಶಕ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಕಟ ಪೂರ್ವ ಅಧ್ಯಕ್ಷರಾದ ಡಾ.ಟಿ.ಎಸ್.ನಾಗಭರಣ ಮಾತನಾಡುತ್ತ ದೊಡ್ಡ ರಂಗೇಗೌಡರೊಂದಿಗಿನ 40 ವರ್ಷಗಳ ತಮ್ಮ ಒಡನಾಟ ತಿಳಿಸಿದರು.ಸಾಹಿತ್ಯ ಕ್ಷೇತ್ರ, ದೃಶ್ಯ ಮಾಧ್ಯಮ, ಮುದ್ರಣ ಮಾಧ್ಯಮ, ರಾಜಕೀಯ, ಸಾಮಾಜಿಕ ಜೀವನದಲ್ಲಿ ದೊಡ್ಡರಂಗೇಗೌಡರು ಸಮನ್ವಯತೆ ಸಾಧಿಸಿಕೊಂಡ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದರು.

ಕನ್ನಡ ನಾಡು, ನುಡಿ, ಕುರಿತಂತೆ ಸರ್ಕಾರಗಳ ಆಶ್ವಾಸನೆಗಳು, ಹಾಗೂ ಸಮ್ಮೇಳನಗಳ ನಿರ್ಣಯಗಳು ನಿರೀಕ್ಷೆಗಳಾಗಿಯೇ ಉಳಿದು ಬಿಟ್ಟಿದೆ. ಸಂಘ ಸಂಸ್ಥೆಗಳು ಜನ ಸಾಮಾನ್ಯರು ಕನ್ನಡವನ್ನು ಬಳಸುವ, ಬೆಳೆಸುವ,ಕಲಿಸುವ ದೀಕ್ಷೆ ತೆಗೆದುಕೊಳ್ಳುಬೇಕು. ಸೆಲ್ಲಿ ಹುಚ್ಚು, ಭಾವಚಿತ್ರಗಳು, ನಮ್ಮ ಗುರುತನ್ನು ಗುರುತಾಗಿಸುವುದಿಲ್ಲ, ನಮ್ಮ ಶ್ರಮಸಂಸ್ಕೃತಿ, ಬೆವರಿನ ಬದುಕು ಮಾತ್ರ ನಮ್ಮ ಗುರುತು, ಅದಕ್ಕೆ ಸ್ಪಷ್ಟ ಉದಾಹರಣೆ ದೊಡ್ಡ ರಂಗೇಗೌಡರು ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ, ಕೇಂದ್ರ ಕಾರ್ಯದರ್ಶಿಯಾದ ವ.ಚ.ಚನ್ನೇಗೌಡ ಮಾತನಾಡುತ್ತ, ಸದ್ದಿಲ್ಲದೆ ಬಹುಮುಖ ಪ್ರತಿಭೆಯಲ್ಲಿ ಅರಳಿ ಕೊಂಡ ಆವರಿಸಿಕೊಂಡ, ಸಮನ್ವಯಗೊಂಡ ಸಾಹಿತಿ ದೊರಂಗೌ ಎಂದರು.ನಿಕಟಪೂರ್ವ ಕನ್ನಡ ಸಾಹಿತ್ಯ ಪರಿಷತ್ತು , ಕೇಂದ್ರದ ಅಧ್ಯಕ್ಷರಾದ ನಾಡೋಜ ಮನುಬಳಿಗಾರ್ ಮಾತನಾಡುತ್ತ ವಿಧಾನ ಸೌಧದ ಬಳಿ ಕನ್ನಡ ಭುವನೇಶ್ವರಿಯ ಪ್ರತಿಷ್ಠಾಪನೆಗೆ ಮೊದಲು ಅಜ್ಞಾಪಿಸಿದವರು ದೊರಂಗೌ. ಶ್ರೀಯುತರಿಗೆ ನಾಡೋಜ ಬರಬೇಕೆಂದು ಅಭಿಮಾನಿಗಳ ಆಶಯ ಎಂದರು.ದೊರಂಗೌ ಅಭಿಮಾನಿಗಳ ಬಳಗ ಅಧ್ಯಕ್ಷ ಉಪೇಂದ್ರ ಕುಮಾರ್ ಎಂ.ಆರ್., ಪ್ರಾಸ್ತಾವಿಕ ನುಡಿದರು.

ಗೋವಿಂದಹಳ್ಳಿ ಕೃಷ್ಣೇಗೌಡ್ರು, ಪ್ರಭಾಕರ ಗಂಗೊಳ್ಳಿ, ಡಾ.ವೆ.ಅಜಿತ್ ಕುಮಾರ್, ವೇದಿಕೆಯಲ್ಲಿದ್ದರು, ಡಾ. ಜಿ. ವೈ ಪದ್ಮ ನಾಗರಾಜ್ ರವರು ಪ್ರಾರ್ಥನೆ ಮತ್ತು ನಾಡಗೀತೆಯನ್ನು ಪ್ರಸ್ತುತಪಡಿಸಿದರು. ಕಾರ್ಯಕ್ರಮದ ನಿರ್ವಹಣೆ ಮತ್ತು ನಿರೂಪಣೆ ಡಾ.ಗುಣವಂತ ಮಂಜುರವರದ್ದಾಗಿತ್ತು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು