LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ರಂಜಿಸಿದ ಭಕ್ತಿ ಕುಸುಮಾಂಜಲಿ

ನಗರದ ಪ್ರತಿಷ್ಠಿತ ಸುಗಮ ಸಂಗೀತ ಸಂಸ್ಥೆಗಳಲ್ಲಿ ಒಂದಾದ ಪಂಚಾಮೃತ ಸುಗಮ ಸಂಗೀತ ಅಕಾಡೆಮಿ ಮಲ್ಲೇಶ್ವರದ 5 ನೇ ಅಡ್ಡ ರಸ್ತೆಯಲ್ಲಿರುವ ಲೀಲಾದ್ರಿ ಸಭಾಂಗಣದಲ್ಲಿ ಅಕಾಡೆಮಿಯ ರಜತ ಸಂಭ್ರಮ ಹಾಗು ವೇದ ಬ್ರಹ್ಮ ಶ್ರೀ ಅನಂತರಾಮಶರ್ಮ ರವರ ಶತಮಾನೋತ್ಸವದ ನೆನಪಿನಲ್ಲಿ ಆಯೋಜಿಸಿದ್ದ ಭಕ್ತಿ ಕುಸುಮಾಂಜಲಿ ಗೀತಗಾಯನ ಕಾರ್ಯಕ್ರಮವು ಕಲಾಸಕ್ತರನ್ನು ರಂಜಿಸುವಲ್ಲಿ ಯಶಸ್ವಿಯಾಯಿತು.

ಹೆಸರಾಂತ ಪೋಷಕ ನಟ ಹಾಗೂ ಹಿರಿಯ ಗಾಯಕ ಶಶಿಧರ್ ಕೋಟೆ ಮಾತನಾಡಿ ಕಳೆದ 25 ವರ್ಷಗಳಿಂದ ಅಕಾಡೆಮಿಯು ಹಲವಾರು ವಿಭಿನ್ನ ಹಾಗು ವಿಶೇಷ ಕಾರ್ಯಕ್ರಮಗಳ ಮೂಲಕ ಕಲಾ ಸೇವೆ ಮಾಡುತ್ತಿದ್ದ ಸಂಸ್ಥೆ ಯೊಂದಿಗಿನ ಒಡನಾಟವನ್ನು ಸ್ಮರಿಸಿ ರಜತ ಸಂಭ್ರಮ ಕಾರ್ಯಕ್ರಮಗಳು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.ಮುಖ್ಯ ಅಥಿತಿ ಗಳಾಗಿ ಆಗಮಿಸಿದ್ದ ಸಮಾಜ ಸೇವಕರು ಹಾಗು ಕಲಾಪೋಷಕರಾದ ಎಂ. ದಿನೇಶ್ ರಾವ್ ರವರು ಅಕಾಡೆಮಿಯ ಕಾರ್ಯಕ್ರಮಗಳಿಗೆ ಎಲ್ಲಾ ರೀತಿಯ ಸಹಕಾರ ನೀಡುವು ದಾಗಿ ಹೇಳಿ ಅಕಾಡೆಮಿಯೊಂದಿಗೆ ಕಳೆದ ಹಲವಾರು ವರ್ಷಗಳಿಂದ ಭಾಗಿಯಾಗಿರುವುದಾಗಿ ಹೇಳಿದರು.

ವೇದಬ್ರಹ್ಮ ಶ್ರೀ ಅನಂತರಾಮ ಶರ್ಮಾ ರವರ ನೆನಪಿನಲ್ಲಿ ಗೌರವಾಭಿನಂದನೆ ಸ್ವೀಕರಿಸಿ ಮಾತನಾಡಿದ ನಿವೃತ್ತ ಶಿಕ್ಷಕ ಮತ್ತು ವಿದ್ವಾಂಸರಾದ ಕೆ. ಎಸ್. ನಾಗರಾಜ್ ರವರು ಅನಂತರಾಮ ಶರ್ಮಾ ರವರು ಹಲವಾರು ವೇದಕ್ಕೆ ಸಂಬದಿಸಿದ ಪುಸ್ತಕಗಳನ್ನು ಬರೆದಿದ್ದು ಅದರಲ್ಲಿ ಪುಯಮಾನ ಪ್ರಯೋಗ ಸಹ ಇದ್ದು ಅದನ್ನು ಅಕಾಡೆಮಿಯು ಪ್ರಕಾಶನ ಗೊಳಿಸಲು ನಿರ್ಧರಿಸಿರುವುದು ಪುರೋಹಿತ ವರ್ಗಕ್ಕೆ ಅನುಕೂಲವಾಗಲಿದೆ ಎಂದು ತಿಳಿಸಿದರು. ಅಕಾಡೆಮಿಯು ಧಾರ್ಮಿಕ, ಸಾಂಸ್ಕೃತಿಕ, ಸಮಾಜಸೇವೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷರಾದ ಎ. ಎಂ. ಚಂದ್ರಶೇಖರ್, ಕಲಾಪೋಷ ಕರಾದ ವೀಣಾ ಅಶೋಕ್, ಅಕಾಡೆಮಿ ಸಂಸ್ಥಾಪಕಿ ಗಾಯತ್ರಿಕೇಶವ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಶಿಧರ್ ಕೋಟೆ, ವಾಸುದೇವ್, ಅನಂತಭಟ್, ಎಂ. ಕೆ. ಜಯಶ್ರೀ, ಡಾ. ವಿಭಾಶ್ರಿ, ಸಂಧ್ಯಾ ಶ್ರೀ, ಡಾ. ಪ್ರಮಥಾ ದೀಕ್ಷಿತ್, ಡಾ. ಸುರಭಿ ಶ್ರೀಹರಿ, ಮಾಸ್ಟರ್ ಸಮರ್ಥ ಹಾಗು ಪಂಚಾಮೃತ ಸುಗಮ ಸಂಗೀತ ಅಕಾಡೆಮಿ ವಿದ್ಯಾರ್ಥಿಗಳು ಗೀತಗಾಯನ ದಲ್ಲಿ ಭಾಗವಹಿಸಿದ್ದರು.

ಎಸ್. ಶಾಮ ದತ್ತ - ಸ್ವಾಗತ, ವಾಸುದೇವ ನಿರೂಪಣೆ, ಕೇಶವಮೂರ್ತಿ - ವಂದನಾರ್ಪಣೆ ಮಾಡಿದರು.ಹರ್ಷ ಶಲವಾಡಿ - ಹಾರ್ಮೋನಿಯಂ, ಮೋಹನ್ - ತಬಲ, ಶಾಮದತ್ತಾ - ವಿಶೇಷ ಲಯವಾದ್ಯದಲ್ಲಿ ಸಹಕರಿಸಿದರು. ಕಾರ್ಯಕ್ರಮಕ್ಕೆ ಮೊದಲು ನಮ್ಮನ್ನು ಅಗಲಿದ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ರವರಿಗೆ ಮೌನನಮನ ಸಲ್ಲಿಸಲಾಯಿತು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು