LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಗುರುಗಳ ಸಾನಿಧ್ಯ, ಆಶೀರ್ವಾದಿಂದ ಸಮಾಜದ ಅಭಿವೃದ್ಧಿ: ಶ್ರೀ ನಂಜಾವಧೂತ ಮಹಾಸ್ವಾಮೀಜಿ

ಬೆಂಗಳೂರು:  ಆಚಾರ್ಯ ಶ್ರೀ ರಾಕುಮ್ ಆಶ್ರಮದದಲ್ಲಿ ನಢೆಸುತ್ತಿರುವ ಆಶ್ರಮದಲ್ಲಿ ಬೆಳದ ಮತ್ತು ಶಿಕ್ಷಕಿಯಾಗಿ ಸೇವೆ ಸಲ್ಲಿತ್ತಿರುವ ಕನ್ನಿಕಾ ಪರಮೇಶ್ವರಿ ಮತ್ತು ಇಂಜನಿಯರ್ ಎಂ.ವಿ.ನಾಗರಾಜ್ ರವರು ಅದ್ದೂರಿ ವಿವಾಹ ಮಹೋತ್ಸವ.

ಇಂದು ಸಂಜೆ ವಿವಾಹ ಕಾರ್ಯಕ್ರಮದಲ್ಲಿ ಸ್ಪಟಿಕಪುರಿ ಮಹಾಸಂಸ್ಥಾನದ ಶ್ರೀ ನಂಜಾವಧೂತ ಮಹಾಸ್ವಾಮಿಗಳು, ಆಚಾರ್ಯ ಶ್ರೀ ರಾಕುಮ್ ರವರು, ಶಾಸಕರಾದ ಎಸ್.ಆರ್.ವಿಶ್ವನಾಥ್ ರವರು, ಇಂಟಕ್ ರಾಜ್ಯಾಧ್ಯಕ್ಷರಾದ ಲಕ್ಷ್ಮಿ ವೆಂಕಟೇಶ್ ರವರು ವಧು-ವರನಿಗೆ ಆಶೀರ್ವಾದ ಮಾಡಿದರು.

ಶ್ರೀ ನಂಜಾವಧೂತ ಸ್ವಾಮೀಜಿಗಳು ಮಾತನಾಡಿ ಮಕ್ಕಳು, ಹಿರಿಯರು ಮತ್ತು ಮಹಿಳೆಯರ ಜೀವನದಲ್ಲಿ ಗುರುಗಳ ಸಾನಿಧ್ಯ ಮತ್ತು ಆಶೀರ್ವಾದ ಲಭಿಸಬೇಕಾದರೆ ಪೂರ್ವ ಜನ್ಮದ ಪುಣ್ಯ ಇರಬೇಕು.ಸಮಾಜದಲ್ಲಿ ಅಶಕ್ತರ ಸಂಖ್ಯೆ ಹೆಚ್ಚಿದೆ, ಅವರನ್ನ ಸಶಕ್ತರಾಗಿ ಮಾಡಿ ಸಮಾಜದ ಮುಖ್ಯವಾಹಿನಿಗೆ ತರಬೇಕು.

ಋಣಾನುಬಂಧ ರೂಪೇಣ ಪಶು ಪತ್ನಿ ಸುತಾಲಯದಂತೆ ಋಣವಿಲ್ಲದೆ ಯಾವ ಬಂಧಗಳು ಬೆಸೆಯಲಾರವು. ಋಣವಿದ್ದಾಗ ಗುರುಗಳ ಮಾರ್ಗದರ್ಶನ ಎಲ್ಲರಿಗೂ ಸಿಗುತ್ತದೆ.ಶ್ರೀಮಂತರ ಮಕ್ಕಳಿಗೆ ಸಿಗುವ ಎಲ್ಲ ಸೌಲಭ್ಯಗಳು ಬಡ ಮಕ್ಕಳಿಗೂ ಸಿಗಬೇಕು. ಎಲ್ಲರು ಮಕ್ಕಳನ್ನ ಸಮಾನವಾಗಿ ಕಾಣಬೇಕು.

ಹೆಂಡತಿಗೆ ಉತ್ತಮ ಗಂಡನಾಗಿ , ತಂದೆ, ತಾಯಿಗೆ ಉತ್ತಮ ಮಗನಾಗಿ, ಸಮಾಜದಲ್ಲಿ ಉತ್ತಮ ನಾಗರಿಕನಾಗಿ ಬದುಕುವುದೆ ಆದರ್ಶ ಜೀವನದ ಪರಿಕಲ್ಪನೆ ಎಂದು ಹೇಳಿದರು.ಆಚಾರ್ಯ ಶ್ರೀ ರಾಕುಮ್ ಗುರೂಜಿರವರು ಮಾತನಾಡಿ ಶ್ರೀ ರಾಕುಮ್ ಅಂಧರ ಶಾಲೆ ಕಳೆದ 25ವರ್ಷಗಳಿಂದ ಅಂಧರ ಮತ್ತು ಕಡುಬಡ ಮಕ್ಕಳಿಗೆ ಉಚಿತ ಶಿಕ್ಷಣ, ಆಶ್ರಯ ಮತ್ತು ಉದ್ಯೋಗ ನೀಡಿ ಅವರ ಜೀವನದ ಬೆಳಕಾಗಿ ಶ್ರಮಿಸುತ್ತಿದೆ.

ಶ್ರೀ ರಾಕುಮ್ ಅಂಧರ ಶಾಲೆ ಮತ್ತು ಶ್ರೀ ರಾಕುಮ್ ಆಶ್ರಮದ ಸಂಸ್ಥಾಪಕರಾದ ಶ್ರೀ ಆಚಾರ್ಯ ಶ್ರೀ ರಾಕುಮ್ ಗುರೂಜಿರವರು ಸಮಾಜದಲ್ಲಿ ಇರುವ ಶ್ರೀಮಂತ ಮತ್ತು ಬಡವ ಎಂಬ ತೊಡಕು ನಿವಾರಣೆ ಮಾಡಬೇಕು ಮಕ್ಕಳು ದೇವರ ಸಮಾನ ಅವರಿಗೆ ಎಲ್ಲ ಸೌಲಭ್ಯ, ಸೌವಲತ್ತು ಸಿಗಬೇಕು ಎಂಬುದು ಇವರ ನಮ್ಮ ಆಶಯಆಚಾರ್ಯ ಶ್ರೀ ರಾಕುಮ್ ಶಾಲೆಯಲ್ಲಿ ವಿದ್ಯಾಭ್ಯಾಸ ಪಡೆದ ಮಕ್ಕಳಿಗೆ ವಿವಾಹ ವಯಸ್ಸರಾದವರಿಗೆ ಶ್ರೀ ರಾಕುಮ್ ಶಾಲೆಯಲ್ಲಿಯೆ ಉಚಿತ ವಿವಾಹ ನೇರವೆರಿಸಲಾಗುತ್ತಿದೆ.

ಈಗಾಗಲೆ 10ಕ್ಕೂ ಯುವತಿಯರಿಗೆ ವಿವಾಹಭಾಗ್ಯ ನೇರವೆರಿದೆ. ವಿವಾಹದ ಸಂಪೂರ್ಣ ವೆಚ್ಚವನ್ನು ಆಶ್ರಮವೆ ಭರಿಸುತ್ತಿದೆ, ಸಾರ್ವಜನಿಕರು ಸಹ ವಿವಾಹ ಸಂದರ್ಭದಲ್ಲಿ ಆಹಾರ ಪದಾರ್ಥಗಳು, ವಸ್ತುಗಳನ್ನು ದೇಣಿಗೆಯ ನೆರವು ನೀಡುತ್ತಿದ್ದಾರೆ.
ನಮ್ಮ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಕುಮಾರಿ ಕನ್ನಿಕಾ ಪರಮೇಶ್ವರಿರವರು ಎಂ.ಎ ಮಾಸ್ಟರ್ ಪದವಿ ಹಾಗೂ ಬಿ.ಎಡ್ ಶಿಕ್ಷಣ ಪೊರೈಸಿ ಇಲ್ಲಿಯೆ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಮದುವೆ ಜನ್ಮ, ಜನ್ಮದ ಅನುಬಂಧ ಎಂಬಂತೆ ಕನ್ನಿಕಾ ಪರಮೇಶ್ವರಿರವರನ್ನು ವರಿಸಲಿರುವ ವರ ಎಂ.ವಿ.ನಾಗರಾಜ್ ಬಿ.ಇ.ಶಿಕ್ಷಣ ಮುಗಿಸಿದ್ದು ಇಂದು ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾರೆ ಎಂದು ಹೇಳಿದರು.

 

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು