LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಭಾವನೆಗಳನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲವಾದ ಜೋಡಿಗಳಲ್ಲಿ ವಿಚ್ಚೇದನಗಳು ಹೆಚ್ಚಾಗುತ್ತಿವೆ : ಸಂತೋಷ ಹೆಗಡೆ

ಬೆಂಗಳೂರು: ಪರಸ್ಪರ ಭಾವನೆಗಳನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲವಾದ ಜೋಡಿಗಳಲ್ಲಿ ವಿಚ್ಛೇದನಗಳು ಇತ್ತೀಚಿಗೆ ಹೆಚ್ಚಾಗುತ್ತಿರುವುದು ಆಂತಕಕಾರಿ ಸಂಗತಿ ಎಂದು ಮಾಜಿ ಲೋಕಾಯುಕ್ತ ಸಂತೋಷ ಹೆಗಡೆ ಹೇಳಿದರು.

ಬೆಂಗಳೂರಿನ ನಯನ ಸಭಾಂಗಣದಲ್ಲಿ ಬುಧವಾರ ಪ್ರೇಮಿಗಳ ದಿನಾಚರಣೆ ಪ್ರಯುಕ್ತ ಪತ್ರಕರ್ತ ಲೇಖಕ ಉಜ್ಜಿನಿ ರುದ್ರಪ್ಪರವರು ರಚಿಸಿರುವ ಪ್ರೀತಿಸಿ ಮದುವೆಯಾದ ಜೋಡಿಗಳ ನೈಜ ಘಟನೆಗಳನ್ನ ಒಳಗೊಂಡ ಪ್ರೀತಿಯನ್ನು ಹಂಬಲಿಸಿ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದರು.

ಪ್ರೀತಿಸಿ ಮದುವೆಯಾದ ಜೋಡಿಗಳಲ್ಲಿ ಪರಸ್ಪರ ಏನಾದರೂ ಸಮಸ್ಯೆಗಳು ಉದ್ಬವಿಸಿದರೆ ಈ ಪುಸ್ತಕವನ್ನು ಓದಿದರೆ ಉತ್ತಮ ಸಂಸಾರ ಮಾಡುವುದರಲ್ಲಿ ಎರಡು ಮಾತಿಲ್ಲ ಎಂದರು.ನಾನು ಪಂಜಾಬಿ ಹುಡುಗಿಯರನ್ನು ಪ್ರೀತಿಸಿ ಮದುವೆಯಾಗಿ 54 ವರ್ಷವಾದರೂ ಇಂದಿಗೂ ಅನೂನ್ಯವಾಗಿದ್ದೇವೆ. ಜೋಡಿಗಳಲ್ಲಿ ನಂಬಿಕೆ ಬಹಳ ಮುಖ್ಯ. ಪ್ರೀತಿ ಎಂದರೆ ಕೇವಲ ದೈಹಿಕ ಸಂಪರ್ಕ ಅಷ್ಟೆ ಅಲ್ಲ ಅದು ಮನಸ್ಸುಗಳ ಬೆಸುಗೆ ಎಂದರು.

ವಿಮರ್ಶಕ ಕವಿ. ಎಲ್.ಎನ್. ಮುಕುಂದರಾಜ್ ಕೃತಿ ಕುರಿತು ಮಾತನಾಡಿ ಪ್ರೀತಿಸಿ ಮದುವೆಯಾಗುವ ಪ್ರಕರಣ ನಿನ್ನೆ ಮೊನ್ನೆಯದಲ್ಲ. ಈ ಜಗತ್ತು ಹುಟ್ಟಿದಾಗಿನಿಂದ ಪ್ರೀತಿ ಹುಟ್ಟಿದೆ. ಭೂಮಿ ಇರುವ ತನಕವೂ ಇರುತ್ತದೆ ಎಂದ ಅವರು ಕೃತಿಯಲ್ಲಿನ ಜೋಡಿಗಳ ಬದುಕಿನ ಘಟನಾವಳಿಗಳನ್ನು ವಿವರಿಸಿದರು.

ಮಾಜಿ ಸಚಿವ ಎಚ್.ಎಂ.ರೇವಣ್ಣ ತಾವು ಪ್ರೀತಿಸಿ ಮದುವೆಯಾದ ಪ್ರಸಂಗವನ್ನು ಹೇಳಿದರು.ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಬಿ.ಕೆ. ರವಿ. ಚಲನ ಚಿತ್ರನಟ ಚೇತನ್ ಕುಮಾರ್ ಮಾತನಾಡಿದರು. ಪ್ರೀತಿಸಿ ಮದುವೆಯಾದ ಕೊಟ್ಟೂರಿನ ಶೀಥಲ್ ಮೂಕ ಜೋಡಿ ಕೊಟ್ಟೂರಿನ ಅಶ್ವಿನಿ ಮತ್ತು ಈಶ್ವರ 124 ಅಂತರ ಜಾತಿ ಅಂತರ ಧರ್ಮೀಯರ ಮದುವೆ ಮಾಡಿಸಿರುವ ಶೇಕ್ಷಾಖಾದ್ರಿ, ವಾಣಿ ಹಾಗೂ ಬಳ್ಳಾರಿಯ ದೇವೇಂದ್ರ ಸುಧಾ ತಾವು ಪ್ರೀತಿಸಿ ಮದುವೆಯಾದ ಪ್ರಸಂಗಗಳನ್ನು ಸಭೆಗೆ ಮನ ಮುಟ್ಟುವಂತೆ ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಅಕ್ಕಮಹಾದೇವಿ ಪ್ರಶಸ್ತಿ ಪುರಸ್ಕೃತೆ ಡಾ. ವಸುಂಧರಾ ಭೂಪತಿ ಮಾತನಾಡಿದರು.ಕೃತಿ ರಚನೆಕಾರ ಉಜ್ಜಿನಿ ರುದ್ರಪ್ಪ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಭಾರತಿ ಹೆಗಡೆ ನಿರೂಪಿಸಿ ವಂದಿಸಿದರು.ಬೆಂಗಳೂರಿನ ನಯನ ಸಭಾಂಗಣದಲ್ಲಿ ಬುಧವಾರ ಪ್ರೇಮಿಗಳ ದಿನಾಚರಣೆ ಪ್ರಯುಕ್ತ ಪತ್ರಕರ್ತ ಲೇಖಕ ಉಜ್ಜಿನಿ ರುದ್ರಪ್ಪರವರು ರಚಿಸಿರುವ ಪ್ರೀತಿಸಿ ಮದುವೆಯಾದ ಜೋಡಿಗಳ ನೈಜ ಘಟನೆಗಳನ್ನ ಒಳಗೊಂಡ ಪ್ರೀತಿಯನ್ನು ಹಂಬಲಿಸಿ ಕೃತಿ ಲೋಕಾರ್ಪಣೆ ಮಾಡಿದ ಸಂದರ್ಭ, ಮಾಜಿ ಲೋಕಾಯುಕ್ತ ಸಂತೋಷ ಹೆಗಡೆ, ಮಾಜಿ ಸಚಿವರಾದ ಹೆಚ್ ಎಂ ರೇವಣ್ಣ, ನಟ ಚೇತನ್ ಕುಮಾರ್, ಕೊಪ್ಪಳ ವಿವಿ ಕುಲಪತಿ ಡಾ.ಬಿ.ಕೆ.ರವಿ ವಿಮರ್ಶಕ ಕವಿ. ಎಲ್.ಎನ್. ಮುಕುಂದರಾಜ್, ಅಕ್ಕಮಹಾದೇವಿ ಪ್ರಶಸ್ತಿ ಪುರಸ್ಕೃತೆ ಡಾ. ವಸುಂಧರಾ ಭೂಪತಿ ಉಪಸ್ಥಿತರಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು