LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Mysore

ತಡೆಗೋಡೆಯಿಲ್ಲದೆ ಬಲಿಗಾಗಿ ಕಾದಿರುವ ಹೇಮಾವತಿ ಎಡದಂಡೆ ನಾಲೆಸೇತುವೆ

ಕೆ.ಆರ್.ಪೇಟೆ: ಅಪಾಯ ಸಂಭವಿಸುವ ಮುನ್ನ ಎಚ್ಚೆತ್ತುಕೊಳ್ಳದ ನಮ್ಮ ಸರ್ಕಾರಿ ಅಧಿಕಾರಿಗಳು ಅವಘಡ ಸಂಭವಿಸಿದ ಬಳಿಕ ಪರಿಹಾರದ ಮಾತನಾಡುವುದನ್ನು ರೂಢಿಸಿಕೊಂಡಿದ್ದಾರೆ. ಆದರೆ, ಇಂದು ಜನತೆ ಎಚ್ಚೆತ್ತುಕೊಂಡಿದ್ದಾರೆ.

ಇಂತಿಲ್ಲಿ ಅಪಾಯ ಸಂಭವಿಸುವ ಸಾಧ್ಯತೆ ಇದೆ ಎಂದು ತಿಳಿದಿದ್ದರೂ ಕ್ರಮ ಕೈಗೊಳ್ಳದ ಅಧಿಕಾರಿಗಳನ್ನು ಸುಮ್ಮನೆ ಬಿಡುವ ಮಾತೇ ಇಲ್ಲ.ಇದಕ್ಕೆ ನಿದರ್ಶನವೆಂಬಂತೆ ಮಾಕವಳ್ಳಿ ಬಳಿಯ ವಡ್ಡರಹಳ್ಳಿ ಗ್ರಾಮದ ಹೇಮಾವತಿ ಎಡದಂಡೆ ನಾಲೆ ಸೇತುವೆ ಮೇಲೆ ತಡೆಗೋಡೆಯಿಲ್ಲದೆ ಯಾವುದೇ ಕ್ಷಣದಲ್ಲಿ ಅಪಾಯ ಸಂಭವಿಸುವಂತಿದೆ.

ನಾಲೆ ತುಂಬಿ ಹರಿಯುತ್ತಿದ್ದು, ಇದೇ ನಾಲೆಯ ಸೇತುವೆ ಮೇಲೆ ರೈತರು ನಿತ್ಯ ಸಂಚರಿಸುತ್ತಾರೆ. ಎತ್ತಿನಗಾಡಿಗಳಲ್ಲಿ ಕಬ್ಬು ಭತ್ತ ಸೇರಿದಂತೆ ಅನೇಕ ಕೃಷಿ ಉತ್ಪನ್ನಗಳನ್ನು ಸಾಗಿಸುವುದು ವಾಡಿಕೆ. ಗದ್ದೆ ಬಯಲು ಹಾಗೂ ವಡ್ಡರಹಳ್ಳಿ ಸಂಪರ್ಕಿಸುವ ಈ ನಾಲೆ ಸೇತುವೆಯ ತಡೆಗೋಡೆ ಮಾಯವಾಗಿದ್ದು, ಸಂಚರಿಸುವಾಗ ಸ್ವಲ್ಪ ಎಚ್ಚರಿಕೆ ತಪ್ಪಿದರೂ ನೀರುಪಾಲಾಗುವುದು ನಿಶ್ಚಿತ. ಗದ್ದೆ ಬಯಲಿನಲ್ಲಿ ಸುಮಾರು 80 ರಿಂದ 90 ಎಕರೆ ಜಮೀನುಗಳಿಗೆ ಹೋಗಿ ಬರಲು ಇರುವ ಏಕೈಕ ಸೇತುವೆ ಇದು.

ಹೊಲಗದ್ದೆಗಳಿಗೆ ನಿತ್ಯ ಹೋಗಿ ಬರುವ ರೈತರು ಮಹಿಳೆಯರು ಮಕ್ಕಳು ಎಷ್ಟು ಎಚ್ಚರಿಕೆಯಿಂದ ಇದ್ದರೂ ಸಾಲದು. ಹಸುಕರುಗಳು ಹೋಗುವಾಗ ಇತ್ತ ನುಸುಳದಂತೆ ಜಾಗ್ರತೆಯಿಂದ ನೊಡಿಕೊಳ್ಳಬೇಕಾಗಿದೆ. ರಾತ್ರಿವೇಳೆಯಲ್ಲಿ ತಡೆಗೋಡೆಯಿಲ್ಲದಿರುವುದರಿಂದ ವಾಹನ ಸವಾರರು ಯಾವುದೇ ಕ್ಷಣದಲ್ಲಿ ಅಪಾಯಕ್ಕೆ ಸಿಲುಕಬಹುದು.

ಇದೆಲ್ಲ ತಿಳಿದಿದ್ದರೂ ಹೇಮಾವತಿ ಎಡದಂಡೆ ಕಾಲುವೆಯ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆಂದು ಕೃಷಿಪಾತ್ತಿನಸಹಕಾರ ಸಂಘದ ಮಾಜಿ ಅಧ್ಯಕ್ಷರು ಹಾಗೂ ನಿರ್ದೇಶಕರಾದ ವಡ್ಡರಹಳ್ಳಿ ಮಹಾದೇವೇಗೌಡ ರವರು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಈ ನಾಲೆಗೆ ತಡೆಗೋಡೆ ನಿರ್ಮಿಸಿ ಮುಂದಾಗುವ ಅಪಾಯ ತಪ್ಪಿಸಬೇಕು.

ಇಲ್ಲದಿದ್ದರೆ ಮುಂದಾ ಗುವ ಅನಾಹುತಗಳಿಗೆ ಸಂಬಂಧಪಟ್ಟ ಅಧಿಕಾರಿಗಳೇ ನೇರ ಹೊಣೆಯಾಗಬೇಕಾಗುತ್ತದೆಂದು ವಡ್ಡರಹಳ್ಳಿ ಮಾಕ ವಳ್ಳಿ ಕರೋಟಿ ಹೆಗ್ಗಡಹಳ್ಳಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.ಈ ಸಂದರ್ಭದಲ್ಲಿ ಮಂಜು, ಮೋಹನ್ ಕುಮಾರ್, ರತ್ನಮ್ಮ, ಅರುಣಾ, ಚನ್ನಕೇಶವ, ಮುಂತಾದವರು ಇದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು