LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Crime News

ಸಿಬ್ಬಂದಿ- ಸೌಲಭ್ಯಗಳಿಲ್ಲದೆ ನಲಗುತ್ತಿರುವ ಕಾರಾಗೃಹಗಳು

ಬೆಂಗಳೂರು: ಜನಸಂಖ್ಯೆಯ ಅನುಗುಣವಾಗಿ ಹಣದ ಅವಶ್ಯಕತೆ ದಿನದಿಂದ ದಿನಕ್ಕೆ ಹೆಚ್ಚಾಗಿ ಬೇಕಾಗಿರುವ ನಮ್ಮ ದೇಶದಲ್ಲಿ ಅರ್ಧಂಬರ್ಧ ವಿದ್ಯೆ ಕಲಿಯುವುದರಲ್ಲಿ ಮತ್ತು ದುರ್ಮಾರ್ಗದಲ್ಲಿ ಹಣ ಸಂಪಾದನೆ ಮಾಡುವುದರಲ್ಲಿ ತಲ್ಲೀನರಾಗಿದ್ದಾರೆ.

ಕನಿಷ್ಠ ವಿದ್ಯೆಯನ್ನು ಕಲಿಯದೆ ಆನ್ ಲೈನ್ ದುರ್ಮಾರ್ಗದಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳ ಹೆಸರಿನಲ್ಲಿ ಆಸೆ ಮತ್ತು ಆಮಿಷ ತೋರಿಸಿ ವಂಚಿಸಲು ಮತ್ತು ನಿಷೇಧಿಸಿದ ಡ್ರಗ್ಸ್ ಮಾರಾಟದಲ್ಲಿ ಸಾರ್ವಜನಿಕ ಅಮಾಯಕರುಗಳಿಗೆ ರಣಹದ್ದುಗಳಂತೆ ಕಾಯುತ್ತಿರುತ್ತಾರೆ.
ಪ್ರಕರಣಗಳನ್ನು ಭೇದಿಸಿ ಮತ್ತು ಬಂಧಿಸಿ ಆರೋಪಿಗಳನ್ನು ಜೈಲಿಗಟ್ಟುವಲ್ಲಿ  ಪೊಲೀಸರೇನೋ ಮುಂದಾಗಿದ್ದಾರೆ ಆದರೆ ಜೈಲಿನ ಸಿಬ್ಬಂದಿ ಮತ್ತು ಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದೆ.

ಸರ್ಕಾರದ ಆದೇಶ ಶೇಕಡ 1:5 ಅನುಪಾತದಲ್ಲಿ ಕೈದಿಗಳನ್ನು ನೋಡಿಕೊಳ್ಳಲು ಆದೇಶ ಹೊರಡಿಸಿರುತ್ತದೆ.ಕರ್ನಾಟಕ ರಾಜ್ಯದಲ್ಲಿ 54 ಜೈಲುಗಳಿದ್ದು ಇದರಲ್ಲಿ ಸಬ್ ಜೈಲುಗಳು ಸಹ ಸೇರಿರುತ್ತವೆ. ಅಂದಾಜುನ ಪ್ರಕಾರ 12,550 ಇಡೀ ರಾಜ್ಯದ ಜೈಲುಗಳಲ್ಲಿ ಕೈದಿಗಳನ್ನು ಇಡಬಹುದಾದ ಸ್ಥಳವಿರುವ ಜಾಗದಲ್ಲಿ 16,000 ಕೈದಿಗಳನ್ನು ತುಂಬಿರುತ್ತಾರೆ.

ಆರು ಜನ ಕೈದಿಗಳಿಗೆ ಒಬ್ಬ ವಾರ್ಡನ್ ಇರಬೇಕು, ಆದರೆ 300 ರಿಂದ 350 ಜನ ಇರೋ ಕೈದುಗಳಿಗೆ ಒಬ್ಬನೇ ವಾರ್ಡನ್ ಆಗಿರುತ್ತಾನೆ ಈಗ. ಇದರಲ್ಲಿ ಮಹಿಳಾ ಖೈದಿಗಳು ಸಹ ಸೇರಿಸುತ್ತಾರೆ.ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹ ಒಂದರಲ್ಲಿ ನಾಲ್ಕು ಸಾವಿರ ಕೈದಿಗಳನ್ನು ಇಡುವ ಜಾಗದಲ್ಲಿ 6,000 ಕೈದಿಗಳನ್ನು ಕುರಿಗಳಂತೆ ತುಂಬಿರುತ್ತಾರೆ.

ರಾಜ್ಯ ಸರ್ಕಾರಕ್ಕೆ ಸಿಬ್ಬಂದಿ ಮತ್ತು ಸೌಲಭ್ಯಗಳನ್ನು ಕೊರತೆಗಳನ್ನು ತುಂಬಲು ಎಷ್ಟೇ ಪತ್ರ ಬರೆದರು ಆಸಕ್ತಿ ತೋರುತ್ತಿಲ್ಲ.
ನೀರು, ಚಾಪೆ,ದಿಂಬು, ಹೊದಿಕೆಗಳು,ತಟ್ಟೆ ಅಡುಗೆ ಮಾಡುವವರು ಮತ್ತು ಸ್ವಚ್ಛಗೊಳಿಸುವವರ ಸಂಖ್ಯೆಯು ಕೆಲವೊಮ್ಮೆ ಆರೋಪಿಗಳು ಬಡಿದಾಡಿಕೊಂಡಿರುವುದು ಸಹ ಉಂಟು ಹಾಗೂ ಇತರೆ ಅವಶ್ಯಕತೆ ವಸ್ತುಗಳ ಕೊರತೆಯೂ ಸಹ ಎದ್ದು ಕಾಣುತ್ತಿದೆ. ಜೈಲಿನ ಒಳಗೆ ಗಲಾಟೆಯಾದರೆ ನಿಯಂತ್ರಿಸಲು ಸಿಬ್ಬಂದಿ ಕೊರತೆಗಳು ಎದ್ದು ಕಾಣುತ್ತದೆ.

ಪ್ರತಿದಿನ ಜೈಲಿಗೆ ಬರುವವರ ಸಂಖ್ಯೆ ಜಾಸ್ತಿ, ಬಿಡುಗಡೆಯಾಗುವವರ ಸಂಖ್ಯೆ ತೀರಾ ವಿರಳ. ಇದಲ್ಲದೆ ದೇವನಹಳ್ಳಿ ಹಾಗೂ ಇನ್ನೂ ಮೂರು ಕಡೆ ಹೊಸದಾಗಿ ಜೈಲುಗಳನ್ನು ಸಹ ಅತಿ ಶೀಘ್ರದಲ್ಲೇ ಉದ್ಘಾಟಿಸುವವರಿದ್ದಾರೆ, ಇಲ್ಲಿಗೂ ಸಹ ಸಿಬ್ಬಂದಿಗಳ ಕೊರತೆ ಎದ್ದು ಕಾಣುತ್ತಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು