LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಕು|| ಸಹನಾ ಹೊಸಮನೆ ಭಾಸ್ಕರ್ ರಂಗಪ್ರವೇಶ

ಬೆಂಗಳೂರು: ನೃತ್ಯ ದಿಶಾ ಟ್ರಸ್ಟಿನ ಸಂಸ್ಥಾಪಕರೂ ಗುರುಗಳೂ ಆದ ‘ಕಲಾಭೂಷಿಣಿ’ ಶ್ರೀಮತಿ ದರ್ಶಿನಿ ಮಂಜುನಾಥ್ ಅವರ ಶಿಷ್ಯೆ ಕು|| ಸಹನಾ ಹೊಸಮನೆ ಭಾಸ್ಕರ್ ರವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮವು ಮಾರ್ಚ್ 31, ಭಾನುವಾರ ಸಂಜೆ ನಗರದ ಜೆ.ಸಿ. ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ವಿಜೃಂಭಣೆಯಿಂದ ಜರುಗಿತು.

ಈ ವಿಶೇಷ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ|| ಎಂ ಸೂರ್ಯಪ್ರಸಾದ್, ಶ್ರೀ ಎಸ್. ಕುಮಾರ್ ಬಂಗಾರಪ್ಪ , ಶ್ರೀ ಸೈಯದ್ ಸಲಾಉದ್ದೀನ್ ಪಾಶ, ಗುರು ಶ್ರೀ ಪ್ರಕಾಶ್ ಎಸ್. ಅಯ್ಯರ್, ಶ್ರೀ ಕೃಷ್ಣಮೂರ್ತಿ ಲಕ್ಷ್ಮಣ ಭಾಗವಹಿಸಿದ್ದರು. ಮೊದಲಿಗೆ ಭರತನಾಟ್ಯ ಮಾರ್ಗದಲ್ಲಿನ ಹಂಸಾನಂದಿ ರಾಗದ ‘ಪುಷ್ಪಾಂಜಲಿ’ಯೊಂದಿಗೆ ಸಹನಾ ಕಾರ್ಯಕ್ರಮ ಪ್ರಾರಂಭಿಸಿದಳು.

ತದನಂತರ ತಮ್ಮ ಗುರುಗಳು ಸಂಯೋಜಿಸಿದ ವಿಶೇಷವಾದ ಅರ್ಧನಾರೀಶ್ವರ ಅಲಾರಿಪು ನರ್ತಿಸಿದರು ಸಹನಾ.ಮುಂದಿನ ಆಯ್ಕೆಯ ಕೃತಿ ಗಜವದನ ಹೇರಂಭ ಅಮೋಘವಾಗಿ ಅಭಿನಯಿಸಿದಳು ಸಹನಾ.ಉತ್ತರಾರರ್ಧದಲ್ಲಿ ಶಂಕರಾಚಾರ್ಯರ ಸೌಂದರ್ಯ ಲಹರಿಯ ದೇವಿ ನವರಸ ಹಾಗೂ ದುರ್ಗೆ ದುರ್ಗೆ ಕೃತಿಯನ್ನು ಅಭಿನಯಿಸಿದರು. ಚಾಮುಂಡೇಶ್ವರಿ ಕಥೆ ನರ್ತಿಸಿದರು ಸಹನಾ. ತನ್ನ ಗುರುಗಳ ವಿದ್ವತ್ ಪೂರ್ಣ ಸಂಯೋಜನೆಗೆ ಸೈ ಅನ್ನಿಸುವಂತೆ ಅಭಿನಯಿಸಿದಳು.

ಸಹನಾ ಅವರ ಕಾರ್ಯಕ್ರಮದಲ್ಲಿ ತುಂಬಾ ಮೆಚ್ಚುಗೆ ಪಡೆದ ನೃತ್ಯ ದೇವರ ದಾಸಿಮಯ್ಯ ಅವರ ವಚನ. ಸಹನಾ ತನ್ಮಯತೆಯಿಂದ ಇದನ್ನು ನರ್ತಿಸಿದಳು. ಮುಂದಿನ ಪ್ರಸ್ತುತಿ ಹಂಸಾನಂದಿ ತಿಲ್ಲಾನದಲ್ಲಿ ಬೃಹದೇಶ್ವರನನ್ನು ವರ್ಣಿಸಿದರು ಸಹನಾ. ಇದರಲ್ಲಿನ ಜುಗಲ್ ಬಂದಿ ಪ್ರಸ್ತುತಿಗೆ ಪ್ರಸಂಶೆಗೆ ಪಾತ್ರಳಾದಳು ಸಹನಾ. ಸಹನಾ ತನ್ನ ಕಾರ್ಯಕ್ರಮವನ್ನು ಕನ್ನಡದ ಕೊರವಂಜಿ ನೃತ್ಯ ಹಾಗೂ ಮಂಗಳದೊಂದಿಗೆ ಸಂಪೂರ್ಣ ಗೊಳಿಸಿದಳು.

ಗುರು ದರ್ಶಿನಿ ಮಂಜುನಾಥ್ ರವರ ಸುಂದರ ಸಂಯೋಜನೆಗೆ ಅದ್ಬುತವಾಗಿ ನೃತ್ಯ ಹಾಗೂ ಅಭಿನಯಗಳಿಂದ ರಸಿಕರ ಮನ ಗೆದ್ದಳು ಸಹನಾ. ಒಟ್ಟಾರೆ ರಂಗಪ್ರವೇಶ ಯಶಸ್ವಿಯಾಗಿ ಮೂಡಿಬಂತು. ಗುರು.ದರ್ಶಿನಿ ಅವರ ಸಂಯೋಜನೆ ಕು|| ಸಹನಾ ಹೊಸಮನೆ ಭಾಸ್ಕರ್ ಅವರ ಅಭಿನಯಕ್ಕೆ ರಸಿಕರು ಪ್ರಸಂಶೆ ವ್ಯಕ್ತಪಡಿಸಿದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು