LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಕುಲ್ದೀಪ್ ಯಾದವ್ ಮದ್ವೇಲಿ ಡ್ಯಾನ್ಸ್ ಮಾಡೋಕೆ ಯುಜುವೇಂದ್ರ ಚಹಲ್ ರೆಡಿ

ವಿವಿಧ ಕಾರಣಗಳಿಗಾಗಿ ಪದೇ ಪದೇ ಮುಂದೂಡಲ್ಪಡುತ್ತಿದ್ದ ಕ್ರಿಕೆಟಿಗ ಕುಲ್ದೀಪ್ ಯಾದವ್ ಮದುವೆಗೆ ಇದೀಗ ಮಾರ್ಚ್ ೧೪ರಂದು ಮುಹೂರ್ತ ನಿಗದಿಯಾಗಿದೆ. ಉತ್ತರಾಖಂಡದ ಮಸೂರಿಯಲ್ಲಿ ವಿವಾಹ ನಡೆಯಲಿದ್ದು ಭಾರತ ತಂಡದ ಮಾಜಿ ನಾಯಕರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಪ್ರಧಾನ ವೇಗಿ ಜಸ್ಪಿçÃತ್ ಬುಮ್ರಾ ಸೇರಿದಂತೆ ಹಲವು ಖ್ಯಾತನಾಮ ಕ್ರಿಕೆಟಿಗರು ವಿವಾಹ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಏತನ್ಮಧ್ಯೆ ಸ್ಪಿನ್ನರ್ ಯುಜುವೇಂದ್ರ ಚಹಲ್ ಅವರಂತೂ ನನ್ನ ಸಹೋದರನ ಮದುವೆಯಲ್ಲಿ ಕುಣಿಯಲು ಉತ್ಸುಕನಾಗಿದ್ದೇನೆ ಎಂದು ಹೇಳಿಕೆ ಸಹ ನೀಡಿದ್ದಾರೆ.
ಮಸ್ಸೂರಿಯ ಸವೋಯ್ ಹೋಟೆಲ್ ನಲ್ಲಿ ೧೪ರಂದು ನಡೆಯುವ ಸಮಾರಂಭಕ್ಕಾಗಿ ತಮ್ಮ ಬಾಲ್ಯದ ಗೆಳತಿ ವಂಶಿಕಾ ಅವರ ಕೈಬಿಡಿಯಲಿದ್ದಾರೆ ಭಾರತ ತಂಡದ ಚೈನಾಮನ್ ಬೌಲರ್ ಕುಲ್ದೀಪ್ ಯಾದವ್. ಇಡೀ ಹೋಟೆಲ್ ಅನ್ನೇ ಅದ್ಧೂರಿ ಸಮಾರಂಭಕ್ಕಾಗಿ ಬುಕ್ ಮಾಡಲಾಗಿದ್ದು ಎರಡು ಮೂರು ದಿನಗಳಿಗೆ ಬೇರೆ ಯಾರಿಗೂ ಈ ಹೋಟೆಲ್ ಸೇವೆ ಲಭ್ಯವಿಲ್ಲ.
ಯಾರೆಲ್ಲಾ ಆಹ್ವಾನಿತರು?
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪಿçÃತ್ ಬುಮ್ರ ಅವರಲ್ಲದೆ ಇನ್ನೂ ಹಲವಾರು ವಿಐಪಿಗಳನ್ನು ಈ ಸಮಾರಂಭಕ್ಕಾಗಿ ಆಹ್ವಾನಿಸಲಾಗಿದೆ. ಭಾರತ ಕ್ರಿಕೆಟ್ ನ ದಂತಕತೆ ಸುನಿಲ್ ಗವಾಸ್ಕರ್, ಭಾರತ ಟಿ೨೦ ತಂಡದ ನಾಯಕ ಸೂರ್ಯಕುಮಾರ್ ಯಾದವ್, ಟಿ೨೦ ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯರಾಗಿದ್ದ ರಿಂಕು ಸಿಂಗ್, ತಿಲಕ್ ವರ್ಮಾ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ. ಇನ್ನು ಕುಲ್ದೀಪ್ ಯಾದವ್ ಅವರ ತಂದೆ ರಾಮ್ ಸಿಂಗ್ ಯಾದವ್ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿ ವಿವಾಹ ಸಮಾರಂಭಕ್ಕೆ ಆಹ್ವಾನಿಸಿದ್ದರು.
ಇದಕ್ಕಾಗಿ ಡೆಹ್ರಾಡೂನ್ ಗೆ ಆಗಮಿಸಿರುವ ಯುಜುವೇಂದ್ರ ಚಹಲ್ ಅವರನ್ನು ಎಎನ್ ಐ ಪ್ರತಿನಿಧಿ ಪ್ರಶ್ನಿಸಿದಾಗ, ``ತಾನಂತೂ ನನ್ನ ಸಹೋದರನ ಮದುವೆಯಲ್ಲಿ ನೃತ್ಯ ಮಾಡಲು ಉತ್ಸುಕನಾಗಿದ್ದೇನೆ. ತುಂಬಾ ಡ್ಯಾನ್ಸ್ ಮಾಡುವೆ, ಮಜಾ ಮಾಡುವೆ'' ಎಂದು ಉತ್ತರಿಸಿದರು.
ಪದೇ ಪದೇ ಮುಂಡೂಲ್ಪಡುತ್ತಿದ್ದ ವಿವಾಹ
ಕಾನ್ಪುರದಲ್ಲಿ ಹುಟ್ಟಿ ಬೆಳೆದ ಕುಲ್ದೀಪ್ ಯಾದವ್ ಮತ್ತು ವಂಶಿಕಾ ಅವರು ಬಾಲ್ಯದಿಂದಲೂ ಪರಸ್ಪರ ಪರಿಚಿತರು. ಕೇವಲ ೩ ಕಿಮೀ ಆಸುಪಾಸಲ್ಲೇ ಇವರ ಮನೆ ಇದೆ. ವಂಶಿಕಾ ಅವರು ಎಲ್ ಐಸಿಯಲ್ಲಿ ಉದ್ಯೋಗಿಯಾಗಿದ್ದಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು